*ಎ ಸಿ ಮುಟ್ಟಿಸಿದ ಬಿಸಿ!* *ಡಾ.ಮೈತ್ರಿಯವರ ಮುಂದುವರೆದ ದಾಳಿ…* *ತಿಲಕ್ ನಗರದ ತನು ಜ್ಯೂಸ್ ಸೆಂಟರಲ್ಲಿ ಆತಂಕಕಾರಿ ಹಣ್ಣಿನ ಜ್ಯೂಸ್- ಲೈಸೆನ್ಸ್ ರದ್ದು…* *ಮಾಂಸಹಾರಿ ಹೊಟೇಲ್ಗಳ ಮೇಲೆ ದಾಳಿ : ಸ್ವಚ್ಚತೆ ಕಾಪಾಡದಿದ್ದಲ್ಲಿ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ*
*ಎ ಸಿ ಮುಟ್ಟಿಸಿದ ಬಿಸಿ!*
*ಡಾ.ಮೈತ್ರಿಯವರ ಮುಂದುವರೆದ ದಾಳಿ…*
*ತಿಲಕ್ ನಗರದ ತನು ಜ್ಯೂಸ್ ಸೆಂಟರಲ್ಲಿ ಆತಂಕಕಾರಿ ಹಣ್ಣಿನ ಜ್ಯೂಸ್- ಲೈಸೆನ್ಸ್ ರದ್ದು…*
*ಮಾಂಸಹಾರಿ ಹೊಟೇಲ್ಗಳ ಮೇಲೆ ದಾಳಿ : ಸ್ವಚ್ಚತೆ ಕಾಪಾಡದಿದ್ದಲ್ಲಿ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ*

ಶಿವಮೊಗ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ತಿಲಕ್ನಗರದಲ್ಲಿರುವ ಮಾಂಸಾಹಾರಿ ಹೊಟೇಲ್ಗಳ ಮೇಲೆ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ|| ಮೈತ್ರಿ ಅವರು ಕಂದಾಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳೊಂದಿಗೆ ದಿಢೀರ್ದಾಳಿ ನಡೆಸಿ, ಹೊಟೇಲ್ಗಳ ಶುಚಿತ್ವ, ಆಹಾರದ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಿದರು.
ಪರಿಶೀಲನೆ ಸಂದರ್ಭದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳದಿರುವ ಮಾಂಸಹಾರಿ ಹೊಟೇಲ್ಗಳ ಮಾಲೀಕರಿಗೆ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಸೂಚಿಸಿದ ಅವರು, ಸ್ವಚ್ಚತೆ ಕಾಪಾಡಿಕೊಳ್ಳದಿದ್ದಲ್ಲಿ ಶುದ್ಧ ನೀರು ಬಳಸಿ ಆಹಾರ ತಯಾರಿಸದಿದ್ದಲ್ಲಿ ಹಾಗೂ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಪೂರೈಸದಿದ್ದಲ್ಲಿ ಹೊಟೇಲ್ಗಳ ಪರವಾನಿಗೆ ರದ್ದುಗೊಳಿಸುವುದಾಗಿ ಎಚ್ಚರಿಸಿದ ಅವರು, ಹೊಟೇಲ್ಗಳಲ್ಲಿದ್ದ ಆಹಾರದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗಾಗಿ ಕಳುಹಿಸಿಕೊಡಲಾಗುವುದು ಎಂದರು.
ಆಹಾರ ತಯಾರಿಕೆಯಲ್ಲಿ ಬಣ್ಣ, ಮತ್ತಿತರ ಕ್ಯಾನ್ಸರ್ಕಾರಕ ರಸಾಯನಿಕಗಳ ಬಳಕೆ ಕಂಡುಬಂದಲ್ಲಿ ಹೊಟೇಲ್ಗಳ ಪರವಾನಿಗೆ ರದ್ದುಗೊಳಿಸಲಾಗುವುದಲ್ಲದೆ ನಿಯಾಮಾನುಸಾರ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡುವುದು ಅನಿವಾರ್ಯವಾಗಲಿದೆ ಎಂದ ಅವರು, ಅಶುಚಿಯಾಗಿರುವ ಹೊಟೇಲ್ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳದಿರುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದಲ್ಲದೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಸಕ್ಷಮ ಪ್ರಾಧಿಕಾರಿಗಳಿಗೆ ವರದಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ|| ಚಂದ್ರಶೇಖರ್, ತಹಶೀಲ್ದಾರ್ರಾಜೀವ್, ಕಂದಾಯಾಧಿಕಾರಿ ಸತೀಶ್, ಕಂದಾಯ ನಿರೀಕ್ಷಕ ಹೊತ್ತಾರೆ ಶಿವಕುಮಾರ್, ದೀಪಕ್ಬಿ., ವಿನಾಯಕಸ್ವಾಮಿ ಜಿ.ಎಂ., ನಿಂಗರಾಜಪ್ಪ, ಮೋಹನ್ಕುಮಾರ್ಮತ್ತಿತರರು ಉಪಸ್ಥಿತರಿದ್ದರು.


