ಕೆಪಿಸಿಸಿ ಗದ್ದುಗೆಗೆ ಬಂದ ಮೊದಲ ಪ್ರಖರ ಚಿಂತಕ
ಕೆಪಿಸಿಸಿ ಗದ್ದುಗೆಗೆ ಬಂದ ಮೊದಲ ಪ್ರಖರ ಚಿಂತಕ —————————————————————– ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಪರ್ವವೊಂದು ಆರಂಭವಾಗಲಿದೆ. ಇಂದಿರಾ ಗಾಂಧಿ ಕಾಲದಿಂದಲೂ ಪ್ರಶ್ನಾತೀತ ಮತ್ತು ಅಚಲ ನಿಷ್ಠೆಯಿಂದ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ಬಿ.ಕೆ.ಹರಿಪ್ರಸಾದ್ ಈಗ ಕೆಪಿಸಿಸಿ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.ಅವರಿಗೆ ಈಗ ಎಪ್ಪತ್ತೊಂದು ವರ್ಷ. ಮುಂದೆ ಮುಖ್ಯಮಂತ್ರಿಯಾಗಬಹುದೆಂಬ ಆಸೆ, ನಿರೀಕ್ಷೆಗಳಿರುವುದು ಸಾಧ್ಯವೇ ಇಲ್ಲದಂಥ ವಾತಾವರಣದಲ್ಲಿ ಜವಾಬ್ದಾರಿಗೆ ಗೌರವದಿಂದ ಒಪ್ಪಿಕೊಂಡಿದ್ದಾರೆ.ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಹರಿಪ್ರಸಾದ್ ವ್ಯಕ್ತಿತ್ವಕ್ಕೆ ತಕ್ಕಂತೆ ಸಂಕಲ್ಪ ಸಮಾವೇಶ ಎಂದು ಅರ್ಥಪೂರ್ಣವಾಗಿ ಕರೆಯಲಾಗಿದೆ. ಆರ್. ಗುಂಡೂರಾವ್…


