*ಪೂರ್ಯಾನಾಯ್ಕರೆಂಬ ಭವಿಷ್ಯದ ಬೆಳಕು ಸಾವಿಗೊಳಗಾಗಿದ್ದೇಕೆ?* *ಅನುಮಾನಾಸ್ಪದ ಸಾವಿನ ಹಿಂದೆ ರಾಜಕಾರಣವಿತ್ತಾ?! ಅಥವಾ….*
*ಪೂರ್ಯಾನಾಯ್ಕರೆಂಬ ಭವಿಷ್ಯದ ಬೆಳಕು ಸಾವಿಗೊಳಗಾಗಿದ್ದೇಕೆ?* *ಅನುಮಾನಾಸ್ಪದ ಸಾವಿನ ಹಿಂದೆ ರಾಜಕಾರಣವಿತ್ತಾ?! ಅಥವಾ….* ಶಿವಮೊಗ್ಗದ ನಿಜವಾದ ಜನನಾಯಕ ಅಂತ ಇದ್ದವರು ಎಸ್.ಪೂರ್ಯಾನಾಯ್ಕರು. ಅವರನ್ನು ಕಳೆದುಕೊಂಡು 27 ವರ್ಷಗಳೇ ಆಗಿ ಹೋದವು. ನಾನು(ಶಿ.ಜು.ಪಾಶ) ಆಗ ಎಚ್ಚರಿಕೆ ಪತ್ರಿಕೆಯಲ್ಲಿದ್ದೆ. ಪೂರ್ಯಾನಾಯ್ಕರೆಂದರೆ ಅಲ್ಲೊಂದು ಅಯಸ್ಕಾಂತದ ಸೆಳೆತ ಇರ್ತಿತ್ತು. ಮುಂದೊಬ್ಬರು ಶಾಸಕರಾಗುತ್ತಾರೆ ಅಂತ ಜನರ ಮನಸ್ಸಲ್ಲಿ ಚರ್ಚೆಗಳಿದ್ದಿದ್ದೇ ಪೂರ್ಯಾನಾಯ್ಕರ ಚಹರೆ… ಅದಾಗಲೇ, ಶಿವಮೊಗ್ಗದಲ್ಲಿ ಜನಜನಿತರಾಗಿದ್ದ ಪೂರ್ಯಾನಾಯ್ಕರ ವಿಶೇಷತೆ ಇದ್ದಿದ್ದೇ ರಾಜಕಾರಣ ಕಂಡವರ ದುಡ್ಡಲ್ಲಿರಬಾರದು ಎಂಬ ಚಿಂತನೆ ಯಲ್ಲಿ. ನಾನೊಮ್ಮೆ ಕೇಳಿದ ನೆನಪು; ನಿಮ್ಮದೇನು ಗುರಿ?…


