ಸೆ. 06ರಂದು ಪೊಲೀಸ್‌ಕಾನ್‌ಸ್ಟೇಬಲ್‌ನೇಮಕಾತಿ ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು

ಸೆ. 06ರಂದು ಪೊಲೀಸ್‌ಕಾನ್‌ಸ್ಟೇಬಲ್‌ನೇಮಕಾತಿ ಪರೀಕ್ಷೆಗೆ ಜಿಲ್ಲಾಡಳಿತ ಸಜ್ಜು ಶಿವಮೊಗ್ಗ : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಪೊಲೀಸ್‌ಇಲಾಖೆಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಸೆಪ್ಟಂಬರ್‌06ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ನಗರದ 19 ಪರೀಕ್ಷಾ ಕೇಂದ್ರಗಳಲ್ಲಿ CAR/DAR ಪೋಲಿಸ್ ಕಾನ್‌ಸ್ಟೇಬಲ್ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಪರೀಕ್ಷೆಯು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ CAR/DAR…

Read More

*ಸ್ಬೂಡಾ ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯಲಿದ್ದಾರಾ ಹೆಚ್.ಎಸ್.ಸುಂದರೇಶ್?* *ಸಿಎಂ ಡಿಕೆಶಿ ಏನಂದ್ರು?!*

*ಸ್ಬೂಡಾ ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯಲಿದ್ದಾರಾ ಹೆಚ್.ಎಸ್.ಸುಂದರೇಶ್?* *ಸಿಎಂ ಡಿಕೆಶಿ ಏನಂದ್ರು?!* ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎರಡನೇ ಅವಧಿಯಲ್ಲೂ ಮುಂದುವರೆದಿರುವ ಹೆಚ್.ಎಸ್.ಸುಂದರೇಶ್, ಕಾಂಗ್ರೆಸ್ ಸರ್ಕಾರದ ಅವಧಿ ಮುಗಿಯುವವರೆಗೂ ಅಧ್ಯಕ್ಷರಾಗಿಯೇ ಮುಂದುವರೆಯುವ ಸೂಚನೆಗಳು ದಟ್ಟವಾಗಿವೆ. ಡಿ.ಕೆ.ಶಿವಕುಮಾರ್ ರವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ವಿರೋಧ ಪಕ್ಷದ ಸ್ಥಾನದಲ್ಲಿದ್ದೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ್ದ ಸುಂದರೇಶ್ ರವರನ್ನು ಕಾಂಗ್ರೆಸ್ ತನ್ನ ಸರ್ಕಾರ ಬರುತ್ತಿದ್ದಂತೆಯೇ ಸ್ಬೂಡಾ ಅಧ್ಯಕ್ಷಗಿರಿಗೆ ಸುಂದರೇಶ್ ರನ್ನು ನೇಮಕ ಮಾಡಲಾಗಿತ್ತು. ಆನಂತರ, ಎರಡು ವರ್ಷ ಮುಗಿಯುತ್ತಿದ್ದಂತೆಯೇ…

Read More

*ಶಾಸಕ ಚನ್ನಿ ನಮ್ ಹುಡುಗ; ನಾನು ಅಥವಾ ಕಾಂತೇಶ್ ಸ್ಪರ್ಧೆ ಖಚಿತ;ಕೆ.ಎಸ್.ಈಶ್ವರಪ್ಪ*

*ಶಾಸಕ ಚನ್ನಿ ನಮ್ ಹುಡುಗ; ನಾನು ಅಥವಾ ಕಾಂತೇಶ್ ಸ್ಪರ್ಧೆ ಖಚಿತ;ಕೆ.ಎಸ್.ಈಶ್ವರಪ್ಪ* ಶಾಸಕ ಚನ್ನಬಸಪ್ಪ ನಮ್ಮ ಹುಡುಗ. ನೀವು ಸೀರಿಯಸ್ಸಾಗಿ ತಗೋಬೇಡಿ. ಹಿಂದುತ್ವ ಉಳಿಸುವ ಹೊತ್ತಲ್ಲಿ ರಾಜಕಾರಣವೂ ಬರುತ್ತೆ. ಏನೋ ಅವನ ಬಾಯಲ್ಲಿ ಬಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಎಸ್.ಈಶ್ವರಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧೆ ಖಚಿತ. ಎಲ್ಲರೊಂದಿಗೂ ಕುಳಿತು ಮಾತಾಡಿದ ನಂತರ ಈ ಸ್ಪರ್ಧೆಯ ನಿರ್ಧಾರ ಕೈಗೊಂಡಿದ್ದೇವೆ. ಬಿಜೆಪಿ ರಾಜ್ಯದ ನಾಯಕರಿಗೂ ಮಾಹಿತಿ ನೀಡಿದ್ದೇವೆ. ಅವರ ತೀರ್ಮಾನ ಏನೆಂದು…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಎಲ್ಲರೂ ನಿನ್ನನ್ನು ಅರ್ಥಮಾಡಿಕೊಳ್ಳಲಾರರು… ಅದೇ ತಾನೇ ಬದುಕು?! 2. ನೆನಪಿಸಿಕೊಳ್ಳುವುದಕ್ಕಾಗಿಯೇ ಒಂದು ಜನ್ಮ ಕೊಡು ಆತ್ಮವೇ… 3. ಜನ್ಮವಾಗುವುದಿಲ್ಲಿ; ಸಾಯುವುದಕ್ಕಾಗಿ, ಸತ್ತು ಕಣ್ಣೀರು ಹಾಕಿಸಲಿಕ್ಕಾಗಿ… – *ಶಿ.ಜು.ಪಾಶ* 8050112067 (3/9/2026)

Read More

*ಶಿವಮೊಗ್ಗದ ಶ್ರೀ ಪ್ರತ್ಯಂಗಿರಾ ದೇವಿ ಮಹಾಸಂಸ್ಥಾನದಲ್ಲಿ ಹೈ ಡ್ರಾಮಾ…* *ಅಪ್ಪ- ಸಹೋದರನನ್ನೇ ಮನೆಯಿಂದ ಹೊರಕ್ಕೆ ತಳ್ಳಿದರಾ ಸುಪ್ರೀತ್ ಸ್ವಾಮೀಜಿ?* *ಮೆಣಸಿನ ಕಾಯಿ ಸ್ವಾಮಿಯ ಮಹಾ ಸ್ಟೋರಿ…*

*ಶಿವಮೊಗ್ಗದ ಶ್ರೀ ಪ್ರತ್ಯಂಗಿರಾ ದೇವಿ ಮಹಾಸಂಸ್ಥಾನದಲ್ಲಿ ಹೈ ಡ್ರಾಮಾ…* *ಅಪ್ಪ- ಸಹೋದರನನ್ನೇ ಮನೆಯಿಂದ ಹೊರಕ್ಕೆ ತಳ್ಳಿದರಾ ಸುಪ್ರೀತ್ ಸ್ವಾಮೀಜಿ?* *ಮೆಣಸಿನ ಕಾಯಿ ಸ್ವಾಮಿಯ ಮಹಾ ಸ್ಟೋರಿ…* ಶಿವಮೊಗ್ಗದ ವಿಮಾನ ನಿಲ್ದಾಣದ ಬಳಿ ಇರುವ ಶ್ರೀ ಪ್ರತ್ಯಂಗಿರಾದೇವಿ ಆಶ್ರಮ ಇದೀಗ ಅಪ್ಪ ಮಕ್ಕಳ ಜಗಳದ ಕೇಂದ್ರಬಿಂದುವಾಗಿದ್ದು, ರಾತ್ರೋರಾತ್ರಿ ಜಗತ್ಪ್ರಸಿದ್ಧರಾಗಿದ್ದ ಸುಪ್ರೀತ್ ಗುರೂಜಿ ತಮ್ಮ ತಂದೆ ಮತ್ತು ಸಹೋದರನನ್ನೇ ಮನೆಯಿಂದ ಹೊರಗೆ ತಳ್ಳಿದ ಘಟನೆ ನಡೆದಿದೆ. ಕೋರ್ಟ್ ಕೇಸುಗಳು, ಶತೃಗಳ ಕಾಟ ನಿವಾರಣೆ ಅಂತೆಲ್ಲ ಖಾರದ ಮೆಣಸಿನ ಕಾಯಿ ಮಸಾಲೆಯನ್ನು…

Read More

*ಎ ಸಿ ಸತ್ಯನಾರಾಯಣ ರವರಿಗೆ ಮತ್ತೆ ವರ್ಗಾವಣೆ;* *ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆ* *ಡಾ.ಮೈತ್ರಿ ಇದ್ದ ಜಾಗಕ್ಕೆ ಸತ್ಯನಾರಾಯಣ್ ವರ್ಗ*

*ಎ ಸಿ ಸತ್ಯನಾರಾಯಣ ರವರಿಗೆ ಮತ್ತೆ ವರ್ಗಾವಣೆ;* *ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆ* *ಡಾ.ಮೈತ್ರಿ ಇದ್ದ ಜಾಗಕ್ಕೆ ಸತ್ಯನಾರಾಯಣ್ ವರ್ಗ* ಶಿವಮೊಗ್ಗ ಉಪವಿಭಾಗದ ಉಪವಿಭಾಗಾಧಿಕಾರಿ ಜಿ.ಹೆಚ್.ಸತ್ಯನಾರಾಯಣ ರವರನ್ನು ಸರ್ಕಾರ ಮತ್ತೆ ಇಂದುವ ವರ್ಗಾವಣೆ ಮಾಡಿದ್ದು, ಈ ಬಾರಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಗೆ ವರ್ಗಾಯಿಸಿದೆ. ಶಿವಮೊಗ್ಗದ ನೂತನ ಉಪವಿಭಾಗಾಧಿಕಾರಿಯಾಗಿ ಡಾ.ಹೆಚ್.ಪಿ.ಮೈತ್ರಿಯವರು ಶಿವಮೊಗ್ಗಕ್ಕೆ ಬರುವ ಮುನ್ನ ಕಾರ್ಯ ನಿರ್ವಹಿಸುತ್ತಿದ್ದ ಜಾಗಕ್ಕೇ ಸತ್ಯನಾರಾಯಣ್ ರವರನ್ನು ನೇಮಿಸಿ ಆದೇಶಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ…

Read More

*ಈದ್ ಮಿಲಾದ್ ಆಚರಣೆ ವೇಳೆ ಕಲರ್ ಪೇಪರ್ ಬ್ಲಾಸ್ಟಿಂಗ್ ಹಾಗೂ ಸಿಡಿಮದ್ದು ನಿಷೇಧ…* *ಬೈಕ್ ರ್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ* *عید میلاد کی تقریبات میں کلر پیپر بلاسٹنگ اور پٹاخے چلانے پر پابندی…* *ضلع کلکٹر کا بائیک ریلی پر پابندی کا حکم*

*ಈದ್ ಮಿಲಾದ್ ಆಚರಣೆ ವೇಳೆ ಕಲರ್ ಪೇಪರ್ ಬ್ಲಾಸ್ಟಿಂಗ್ ಹಾಗೂ ಸಿಡಿಮದ್ದು ನಿಷೇಧ…* *ಬೈಕ್ ರ್ಯಾಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ* *عید میلاد کی تقریبات میں کلر پیپر بلاسٹنگ اور پٹاخے چلانے پر پابندی…* *ضلع کلکٹر کا بائیک ریلی پر پابندی کا حکم* ಶಿವಮೊಗ್ಗ ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆ ಮತ್ತು ಮೆರವಣಿಗೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಆಗಸ್ಟ್ 25 ರಿಂದ…

Read More

*ಈದ್ ಮಿಲಾದ್ ಹಿನ್ನೆಲೆಯಲ್ಲಿ ನಾಳೆಯಿಂದ 2 ದಿನ ಮದ್ಯ ಮಾರಾಟ ನಿಷೇಧ* *ಶಿವಮೊಗ್ಗ- ಶಿಕಾರಿಪುರ- ಸಾಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ…*

*ಈದ್ ಮಿಲಾದ್ ಹಿನ್ನೆಲೆಯಲ್ಲಿ ನಾಳೆಯಿಂದ 2 ದಿನ ಮದ್ಯ ಮಾರಾಟ ನಿಷೇಧ* *ಶಿವಮೊಗ್ಗ- ಶಿಕಾರಿಪುರ- ಸಾಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ…* ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಿವಮೊಗ್ಗ ನಗರ, ಸಾಗರ, ಶಿಕಾರಿಪುರ ಹಾಗೂ ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ಮದ್ಯ ಮಾರಾಟವನ್ನು ಆ.25 ಮತ್ತು 26 ರಂದು ಎರಡು ದಿನಗಳ ಕಾಲ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳೀಕಟ್ಟಿ ಆದೇಶಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ, ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿ, ಕುಂಸಿ…

Read More

*ವಿಶೇಷ ಪತ್ರಿಕಾಗೋಷ್ಠಿ ಮಾಡಿದ ಶಿವಮೊಗ್ಗ ನಗರಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡರು* *SIR ಕರಡು ಪ್ರತಿ ಸಿದ್ಧ;* *ಶಿವಮೊಗ್ಗ ನಗರದಲ್ಲಿ ಇದ್ದ 2,77,098 ಮತದಾರರಲ್ಲಿ ಉಳಿದುಕೊಂಡಿದ್ದು 2,20,666 ಮತದಾರರು…* *9181 ಜನ ಸತ್ತವರು- 11570 ಮತದಾರರು ಗೈರು…*

*ವಿಶೇಷ ಪತ್ರಿಕಾಗೋಷ್ಠಿ ಮಾಡಿದ ಶಿವಮೊಗ್ಗ ನಗರಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡರು* *SIR ಕರಡು ಪ್ರತಿ ಸಿದ್ಧ;* *ಶಿವಮೊಗ್ಗ ನಗರದಲ್ಲಿ ಇದ್ದ 2,77,098 ಮತದಾರರಲ್ಲಿ ಉಳಿದುಕೊಂಡಿದ್ದು 2,20,666 ಮತದಾರರು…* *9181 ಜನ ಸತ್ತವರು- 11570 ಮತದಾರರು ಗೈರು…* ಮಹಾನಗರಪಾಲಿಕೆ ಪ್ರದೇಶದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದವರು: ಮಾಯಣ್ಣ ಗೌಡ ಕೆ. ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಕೆ. ಮಾಯಣ್ಣ ಗೌಡ ಅವರು, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಪ್ರಕ್ರಿಯೆಯ ನಂತರ ಇಂದು ಕರಡು ಮತದಾರರ…

Read More

*ಶಿವಮೊಗ್ಗ ಉಪ ವಿಭಾಗಾಧಿಕಾರಿಯಾಗಿ ಮತ್ತೆ ಜಿ.ಹೆಚ್.ಸತ್ಯನಾರಾಯಣ?!* *ವರ್ಗಾವಣೆ ಕುರಿತು ಕಾನೂನು ಏನು ಹೇಳುತ್ತೆ?* *ತ್ರಿಶಂಕು ಸ್ಥಿತಿಯಲ್ಲಿದ್ದಾರಾ ಡಾ.ಮೈತ್ರಿ?*

*ಶಿವಮೊಗ್ಗ ಉಪ ವಿಭಾಗಾಧಿಕಾರಿಯಾಗಿ ಮತ್ತೆ ಜಿ.ಹೆಚ್.ಸತ್ಯನಾರಾಯಣ?!* *ವರ್ಗಾವಣೆ ಕುರಿತು ಕಾನೂನು ಏನು ಹೇಳುತ್ತೆ?* *ತ್ರಿಶಂಕು ಸ್ಥಿತಿಯಲ್ಲಿದ್ದಾರಾ ಡಾ.ಮೈತ್ರಿ?* ಶಿವಮೊಗ್ಗ ಉಪವಿಭಾಗಾಧಿಕಾರಿ ಕುರ್ಚಿ ಈಗ ಗೊಂದಲಕ್ಕೊಳಗಾಗಿದ್ದು, ಯಾವುದೇ ಹುದ್ದೆ ಸೂಚಿಸದೇ ಸರ್ಕಾರಿ ನೌಕರರ ಸಂಘದ ಪ್ರಮುಖ ಪದಾಧಿಕಾರಿಯೂ ಆಗಿರುವ ಜಿ.ಹೆಚ್.ಸತ್ಯನಾರಾಯಣ ಮತ್ತೆ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ಸೇವೆ ಮುಂದುವರೆಸುವ ಸಾಧ್ಯತೆಗಳು ದಟ್ಟವಾಗಿವೆ. ಮೂಲತಃ ವೈದ್ಯೆಯೂ ಆಗಿರುವ ಡಾ.ಮೈತ್ರಿಯವರನ್ನು ರಾಜ್ಯ ಸರ್ಕಾರ ಶಿವಮೊಗ್ಗ ಉಪವಿಭಾಗಾಧಿಕಾರಿಯಾಗಿ ನೇಮಿಸಿ ವರ್ಗಾವಣೆ ಮಾಡಿತ್ತು. ಆದರೆ, ಎಸಿ ಸತ್ಯನಾರಾಯಣ್ ರವರಿಗೆ ಯಾವುದೇ ಸ್ಥಳ ತೋರಿಸದೇ ವರ್ಗಾವಣೆ ಮಾಡಿತ್ತು….

Read More