*ಜಿಂಕೆ ಜಾತಿಗೆ ಸೇರಿದ ಪ್ರಾಣಿ ಬೇಟೆ; ಮೂವರ ಬಂಧನ*

*ಜಿಂಕೆ ಜಾತಿಗೆ ಸೇರಿದ ಪ್ರಾಣಿ ಬೇಟೆ; ಮೂವರ ಬಂಧನ* ಶಿವಮೊಗ್ಗ- ಚಿಕ್ಕಮಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರಿಗೆ ದೊರೆತ ಮಾಹಿತಿಯಂತೆ ಮೇ 19 ರಂದು ಅತ್ತಿಗುಂಡಿ ಗ್ರಾಮದಿಂದ ಮಲಗಾರು ಗ್ರಾಮಕ್ಕೆ ಹೋಗುವ ಕಚ್ಚಾರಸ್ತೆಯಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದವರನ್ನು ದಾಳಿ ಮಾಡಿ ಮೂವರನ್ನು ಬಂದಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ, ತರಿಕೆರೆ ತಾಲೂಕು ಕಲ್ಲತ್ತಿಪುರದ ವೆಂಕಟರಮಣ, ತಿರುವಣ್ಣಾಮಲೈ ಜಿಲ್ಲೆಯ ಕುಂಬಳೂರು ಗ್ರಾಮದ ಕನ್ನಿಯಪ್ಪನ್ ಹಾಗೂ ವಲ್ಲಿಯೂರು ಗ್ರಾಮದ ಸುರೇಶ್ ಇವರುಗಳು ಬೇಟೆಯಾಡಿದ ಜಿಂಕೆ ಜಾತಿಗೆ ಸೇರಿದ ಪ್ರಾಣಿಯ ಕಳೆಬರಹ…

Read More

*ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರ;* *ಸಾರ್ವಜನಿಕ ಪ್ರವೇಶ ನಿಷೇಧಿಸಿ ತಾತ್ಕಾಲಿಕ ಆದೇಶ*

*ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರ;* *ಸಾರ್ವಜನಿಕ ಪ್ರವೇಶ ನಿಷೇಧಿಸಿ ತಾತ್ಕಾಲಿಕ ಆದೇಶ* ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆ ಬಿಡಾರವನ್ನು ಸಾರಗವಜನಿಕರಿಗೆ ತಾತ್ಕಾಲಿಕ ಪ್ರವೇಷ ನಿಷೇಧಿಸಿ ಅರಣ್ಯ ಇಲಾಖೆ ಆದೇಶಿಸಿದೆ. ಕಳೆದ ಮೇ 18 ರಂದು ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆಗಳ ದಾಂಧಲೆಯಲ್ಲಿ ಮಹಿಳೆ ಸಾವಿಗೀಡಾಗಿದ್ದ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ. ಅರಣ್ಯ ಇಲಾಖಾ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆ ಕುರಿತಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮಾಣಿತ ಕಾರ್ಯ ವಿಧಾನ(SOP)ರೂಪಿಸುವ ಅಗತ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ರೂಪಿಸುವವರೆಗೆ…

Read More

*ಇಬ್ಬರು ಮಕ್ಕಳ ಸಮೇತ ಮಹಿಳೆ ನಾಪತ್ತೆ* *ತೀರ್ಥಹಳ್ಳಿ ತಾಲ್ಲೂಕಿನ ಕಣಗಲಕೊಪ್ಪದ ಮಹಿಳೆ*

*ಇಬ್ಬರು ಮಕ್ಕಳ ಸಮೇತ ಮಹಿಳೆ ನಾಪತ್ತೆ* *ತೀರ್ಥಹಳ್ಳಿ ತಾಲ್ಲೂಕಿನ ಕಣಗಲಕೊಪ್ಪದ ಮಹಿಳೆ* ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ 17ನೇ ಮೈಲಿಕಲ್ಲು, ಕಣಗಲಕೊಪ್ಪ ಗ್ರಾಮ ನಿವಾಸಿ ಅನಿಲ್ ಕುಮಾರ್ ಎಂಬುವವರ ಪತ್ನಿ ತವರುಮನೆಗೆಂದು ಮಕ್ಕಳನ್ನು ಕರೆದುಕೊಂಡು ಮೇ.13 ರಂದು ಹೋದವರು ತವರುಮನೆಗೂ ಹೋಗದೆ ಈವರೆಗೆ ಮನೆಗೂ ವಾಪಾಸ್ಸಾಗಿರುವುದಿಲ್ಲ. ಸುಮಾ ಕೆ.ಎಸ್. : 32 ವರ್ಷ, 5.0 ಅಡಿ ಎತ್ತರ, ದುಂಡುಮುಖ, ದೃಢಕಾಯ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ…

Read More

*ಶಿವಮೊಗ್ಗ ಪೊಲೀಸ್ ವಿಭಾಗ-1ರ ಡಿವೈಎಸ್ ಪಿ ಬಾಬು ಆಂಜನಪ್ಪ ವರ್ಗಾವಣೆ* *ನೂತನ ಡಿವೈಎಸ್ ಪಿ ಆಗಿ ಡಾ. ಬೆನಕ ಪ್ರಸಾದ್*

*ಶಿವಮೊಗ್ಗ ಪೊಲೀಸ್ ವಿಭಾಗ-1ರ ಡಿವೈಎಸ್ ಪಿ ಬಾಬು ಆಂಜನಪ್ಪ ವರ್ಗಾವಣೆ* *ನೂತನ ಡಿವೈಎಸ್ ಪಿ ಆಗಿ ಡಾ. ಬೆನಕ ಪ್ರಸಾದ್* ಶಿವಮೊಗ್ಗ ವಿಭಾಗ-1 ರ ನೂತನ ಡಿವೈಎಸ್ ಪಿ ಆಗಿ ಡಾ.ಬೆನಕ ಪ್ರಸಾದ್ ರವರನ್ನು ಸಾಗರದಿಂದ ಶಿವಮೊಗ್ಗಕ್ಕೆ ವರ್ಗಾಯಿಸಿ ರಾಜ್ಯ ಸರ್ಕಾರ ಇಂದು ಆದೇಶಿಸಿದೆ. ಬಾಬು ಆಂಜನಪ್ಪರವರ ಜಾಗಕ್ಕೆ ಡಾ.ಬೆನಕ ಪ್ರಸಾದ್ ಬಂದಿದ್ದು, ಹಾಲಿ ಡಿವೈಎಸ್ ಪಿ ಬಾಬು ಆಂಜನಪ್ಪರವರಿಗೆ ವರ್ಗಾಯಿಸಿರುವ ಸರ್ಕಾರ ಸ್ಥಳ ತೋರಿಸಿಲ್ಲ.

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಆಗಾಗ ಅಪರಿಚಿತರಿಗೂ ಸಿಗುತ್ತಿರು; ಪರಿಚಿತರಿಗಿಂತ ಹೆಚ್ಚು ಹೃದಯವಂತರು ಸಿಗುವ ಸಾಧ್ಯತೆಯಿದೆ! 2. ದೀಪ ಆರಲು ಗಾಳಿಯೇ ಕಾರಣವಾಗಬೇಕಿಲ್ಲ; ಸ್ವತಃ ದೀಪಕ್ಕೂ ಉರಿಯುವ ಮನಸಿರಬೇಕಲ್ಲ! – *ಶಿ.ಜು.ಪಾಶ* 8050112067 (21/5/2026)

Read More

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹ; ಸಚಿವ  ಎಸ್. ಮಧು ಬಂಗಾರಪ್ಪ ನೇತೃತ್ವದಲ್ಲಿ ಸಿಎಂಗೆ ಮನವಿ*

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹ; ಸಚಿವ  ಎಸ್. ಮಧು ಬಂಗಾರಪ್ಪ ನೇತೃತ್ವದಲ್ಲಿ ಸಿಎಂಗೆ ಮನವಿ* *ಬೆಂಗಳೂರು* : ಮಧ್ಯ ಕರ್ನಾಟಕದ ಜನರ ಬಹುಕಾಲದ ಬೇಡಿಕೆಯಾಗಿರುವ ‘ಹೈಕೋರ್ಟ್ ಸಂಚಾರಿ ಪೀಠ’ವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ, ಶಿವಮೊಗ್ಗದ ಹಿರಿಯ ವಕೀಲರ ನಿಯೋಗವು ಬುಧವಾರದಂದು  ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು. ಬೆಂಗಳೂರಿನ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕೃಷ್ಣಾ’ದಲ್ಲಿ ಈ ಭೇಟಿ ನಡೆಯಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ  ಎಸ್….

Read More

*ಶಿವಮೊಗ್ಗ ತುಂಗಾ ಹೊಳೆ ನೂತನ ಸೇತುವೆ ನಿರ್ಮಾಣಕ್ಕೆ ಹೆಚ್.ಸಿ.ಯೋಗೇಶ್ ನೇತೃತ್ವದ ತಂಡದಿಂದ ಮನವಿ* *ನಿರ್ಮಾಣಕ್ಕೆ 40 ಕೋಟಿ ರೂ., ಮೀಸಲಿಡುವ ಭರವಸೆ ನೀಡಿದ ಲೋಕೋಪಯೋಗಿ ಸಚಿವರು*

*ಶಿವಮೊಗ್ಗ ತುಂಗಾ ಹೊಳೆ ನೂತನ ಸೇತುವೆ ನಿರ್ಮಾಣಕ್ಕೆ ಹೆಚ್.ಸಿ.ಯೋಗೇಶ್ ನೇತೃತ್ವದ ತಂಡದಿಂದ ಮನವಿ* *ನಿರ್ಮಾಣಕ್ಕೆ 40 ಕೋಟಿ ರೂ., ಮೀಸಲಿಡುವ ಭರವಸೆ ನೀಡಿದ ಲೋಕೋಪಯೋಗಿ ಸಚಿವರು* ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹೆಚ್. ಸಿ. ಯೋಗೇಶ್ ರವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿರವರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರು ತುಂಗಾ ಹೊಳೆ ಸೇತುವೆಯ ಸಮಸ್ಯೆ ಬಗ್ಗೆ ಮಾತಾಡಿದ್ದು, ಸಚಿವರು ಕೂಡಲೇ 40 ಕೋಟಿ ರೂ., ಬಿಡುಗಡೆಗೊಳಿಸಲು ಒತ್ತಾಯಿಸಿದರು. ಶಿವಮೊಗ್ಗ ನಗರಕ್ಕೆ ಮಹಾದ್ವಾರವಾಗಿರುವ ತುಂಗಾ ನದಿ ಸೇತುವೆ ಸುಮಾರು…

Read More

*ಶಿವಮೊಗ್ಗ; ಬುದ್ಧನಗರದ ಒಂದೇ ಕುಟುಂಬದ 4 ಮಂದಿ ನಾಪತ್ತೆ!* *ಇಕ್ಬಾಲ್- ನಸ್ರತ್ ಬಾನು- ಫಾಜಿಲ್- ಆದಿಲ್ ಏ.15ರಿಂದ ಕಣ್ಮರೆ!!*

*ಶಿವಮೊಗ್ಗ; ಬುದ್ಧನಗರದ ಒಂದೇ ಕುಟುಂಬದ 4 ಮಂದಿ ನಾಪತ್ತೆ!* *ಇಕ್ಬಾಲ್- ನಸ್ರತ್ ಬಾನು- ಫಾಜಿಲ್- ಆದಿಲ್ ಏ.15ರಿಂದ ಕಣ್ಮರೆ!!* ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬುದ್ಧನಗರ ನಿವಾಸಿಗಳಾದ ಒಂದೇ ಕುಟುಂಬದ 4 ಮಂದಿ ಏ.15 ರಿಂದ ಕಾಣೆಯಾಗಿದ್ದಾರೆ. ಮೋಹಮ್ಮದ್ ಇಕ್ಬಾಲ್: 62 ವರ್ಷ, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿರುತ್ತಾರೆ. ನಸ್ರತ್ ಬಾನು: 54 ವರ್ಷ, 5.2 ಅಡಿ ಎತ್ತರ, ದಪ್ಪನೆ ಮೈಕಟ್ಟು, ಗೋಧಿ ಮೈಬಣ್ಣ, ಸೀಳು ತುಟಿ ಹೊಂದಿರುತ್ತಾರೆ. ಮೋಹಮ್ಮದ್…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಈ ಜಗತ್ತು ಎಷ್ಟು ಸುಂದರವಾಗಿದ್ದರೇನಂತೆ… ನಿನ್ನ ನೋಡಿದಾಗಲಷ್ಟೇ ನೆಮ್ಮದಿಯು! 2. ಯಾರು ಅತ್ತಿದ್ದಾರೆ ವೇಶ್ಯೆಯ ಸಮಾಧಿ ಬಳಿ ಹೋಗಿ? ಸಂಬಂಧವೇನಿದ್ದರೂ ಬದುಕಿರುವವರೆಗಷ್ಟೇ! 3. ಕಾಲ ಕಳೆದುಹೋಗುವುದಿಲ್ಲ; ಕಳೆದು ಹೋಗುವುದು ನಾನು- ನೀನಷ್ಟೇ! – *ಶಿ.ಜು.ಪಾಶ* 8050112067 (19/5/2026)

Read More

ಜೂನ್ 1ರಂದು ರಾಜ್ಯಾದ್ಯಂತ ಅದ್ಧೂರಿ ಶಾಲಾ ಪ್ರಾರಂಭೋತ್ಸವ: ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ ಕೆಪಿಎಸ್ ಶಾಲೆಗೆ ಮುಖ್ಯಮಂತ್ರಿಗಳಿಂದ ಶಿವಮೊಗ್ಗದಲ್ಲಿ ಉದ್ಘಾಟನೆ* – *46,000 ಸರ್ಕಾರಿ ಶಾಲೆಗಳ ಶಿಕ್ಷಕರು, ಪ್ರಾಂಶುಪಾಲರು ಮತ್ತು ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ವಿಡಿಯೋ ಸಂವಾದ*

ಜೂನ್ 1ರಂದು ರಾಜ್ಯಾದ್ಯಂತ ಅದ್ಧೂರಿ ಶಾಲಾ ಪ್ರಾರಂಭೋತ್ಸವ: ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ ಕೆಪಿಎಸ್ ಶಾಲೆಗೆ ಮುಖ್ಯಮಂತ್ರಿಗಳಿಂದ ಶಿವಮೊಗ್ಗದಲ್ಲಿ ಉದ್ಘಾಟನೆ* – *46,000 ಸರ್ಕಾರಿ ಶಾಲೆಗಳ ಶಿಕ್ಷಕರು, ಪ್ರಾಂಶುಪಾಲರು ಮತ್ತು ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ವಿಡಿಯೋ ಸಂವಾದ* ಬೆಂಗಳೂರು: ಹೊಸ ಶೈಕ್ಷಣಿಕ ವರ್ಷದ ಸಿದ್ಧತೆಗಳ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ಅವರು ರಾಜ್ಯದ 46,000 ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪಿಯು ಕಾಲೇಜು ಪ್ರಾಂಶುಪಾಲರು ಹಾಗೂ ಡಿಡಿಪಿಐ,…

Read More