*ನನಗೀಗಲೂ ನೆನಪಿದೆ; ಎಂ.ಕೆ.ಸುರೇಶ್ ಕುಮಾರ್ (ಚಾಲುಕ್ಯ ಬಾರ್ ಸುರೇಶ್) ಎಂಬ ದೈತ್ಯ ವ್ಯಕ್ತಿಯ ಭೇಟಿ!*
*ನನಗೀಗಲೂ ನೆನಪಿದೆ; ಎಂ.ಕೆ.ಸುರೇಶ್ ಕುಮಾರ್ (ಚಾಲುಕ್ಯ ಬಾರ್ ಸುರೇಶ್) ಎಂಬ ದೈತ್ಯ ವ್ಯಕ್ತಿಯ ಭೇಟಿ!* ನಾನಾಗ ನನ್ನ ತಾತಾ, ಅಪ್ಪ ಸೇರಿದಂತೆ ಅವಿಭಕ್ತ ಕುಟುಂಬದಲ್ಲಿದ್ದೆ. ಹುಡುಗ ಸಣ್ಣವನು. ಮನೆ ಇದ್ದಿದ್ದು ರವಿವರ್ಮ ರಸ್ತೆಯಲ್ಲಿ. ರವಿವರ್ಮ ರಸ್ತೆಗೆ ಶಿವಮೊಗ್ಗ ನಗರಸಭೆ ಕೌನ್ಸಿಲರ್ ಆಗ್ತಿದ್ದಿದ್ದು ಓರ್ವ ಬ್ರಾಹ್ಮಣ ಅಜ್ಜಿ. ನಾನಾಗ ಅವರ ಮನೆಗೆ ನಮ್ಮ ತಾತಾ/ ಅಪ್ಪನ ಸೌದೆ ಡಿಪೋ ಸೌದೆಯನ್ನು ಮಣದ ಲೆಕ್ಕದಲ್ಲಿ ಕಬ್ಬಿಣದ ಕಾಲ್ಗಾಡಿಯಲ್ಲಿ ಒಯ್ದು ಹಾಕುತ್ತಿದ್ದೆ. ಅವರು ಒಣಕೊಬ್ಬರಿ, ಬೆಲ್ಲ ಕೊಡ್ತಿದ್ದ ನೆನಪು, ಅದೂ ಹಿಂಬಾಗಿಲಿನಿಂದ!…


