ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಕವಿಸಾಲು

*ಕವಿಸಾಲು* (24/06/2026) 1. ದುಃಖವನ್ನೂ ಸಿಂಗರಿಸಿಡಬೇಕಿಲ್ಲಿ… 2. ಜೀವನಪರ್ಯಂತ ಬಡ್ಡಿ ಕಟ್ಟುತ್ತಲೇ ಇರುತ್ತದೆ ಕಣ್ಣು… ಪ್ರೇಮವೆಂಬುದು ಅಂಥ ಸಾಲವು! 3. ದುರಂತವೆಂದರೆ ನೀನು ಜೊತೆಗಿಲ್ಲ… ಆದರೂ ನಾ ಏಕಾಂಗಿಯಲ್ಲ! – *ಶಿ.ಜು.ಪಾಶ* 8050112067

Read More

ಸತ್ಯಬಿಚ್ಚಿಟ್ಟ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ವೈ ಎಚ್ ನಾಗರಾಜ್ ಸ್ವಾಗತ

ಸತ್ಯಬಿಚ್ಚಿಟ್ಟ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ವೈ ಎಚ್ ನಾಗರಾಜ್ ಸ್ವಾಗತ ಶಿವಮೊಗ್ಗ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಅಡ್ಡ ಮತದಾನದ ಕುರಿತು ಹೇಳಿಕೆ ನೀಡುವಾಗ ಕೆಲವು ಸತ್ಯಗಳನ್ನು ಹೇಳಿರುವದು ಸ್ವಾಗತಾರ್ಹ ಎಂದು ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಕೊನೆಗೂ ಬಿಜೆಪಿಯ ಮಾಜಿ ಹಿರಿಯ ನಾಯಕರೊಬ್ಬರು, ಸತ್ಯದ ಪರವಾಗಿ ನಿಂತು ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಆಮಿಷ ತೋರಿಸಿ ಅಪರೇಷನ್ ಕಮಲದ ಮೂಲಕ ಹಣ…

Read More

*ಧರ್ಮಸ್ಥಳಕ್ಕೆ ಶಾಸಕರನ್ನು ಕರೆದೊಯ್ಯುವ ಬದಲು ರಾಮಮಂದಿರ ನಿಧಿ ದುರ್ಬಳಕೆಯ ಸತ್ಯಾಸತ್ಯತೆ ಬಹಿರಂಗ ಪಡಿಸೋದಕ್ಕೆ ಬಿಜೆಪಿ ಕರೆದೊಯ್ಯಲಿ; ಹೆಚ್.ಸಿ.ಯೋಗೇಶ್* *ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವ ಬಿಜೆಪಿಯ ದ್ವಂದ್ವ ನಿಲುವು ಖಂಡನೀಯ – ಹೆಚ್‌.ಸಿ. ಯೋಗೇಶ್*

*ಧರ್ಮಸ್ಥಳಕ್ಕೆ ಶಾಸಕರನ್ನು ಕರೆದೊಯ್ಯುವ ಬದಲು ರಾಮಮಂದಿರ ನಿಧಿ ದುರ್ಬಳಕೆಯ ಸತ್ಯಾಸತ್ಯತೆ ಬಹಿರಂಗ ಪಡಿಸೋದಕ್ಕೆ ಬಿಜೆಪಿ ಕರೆದೊಯ್ಯಲಿ; ಹೆಚ್.ಸಿ.ಯೋಗೇಶ್* *ವಿದ್ಯಾರ್ಥಿಗಳ ಭವಿಷ್ಯದ ವಿಚಾರದಲ್ಲೂ ರಾಜಕೀಯ ಮಾಡುತ್ತಿರುವ ಬಿಜೆಪಿಯ ದ್ವಂದ್ವ ನಿಲುವು ಖಂಡನೀಯ – ಹೆಚ್‌.ಸಿ. ಯೋಗೇಶ್* ನೀಟ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಮೂವರು ವಿದ್ಯಾರ್ಥಿಗಳ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಹಾಗೂ ಕೆಪಿಸಿಸಿ ವಿರುದ್ಧ ಬಿಜೆಪಿ ನಾಯಕರು ನಡೆಸುತ್ತಿರುವ ರಾಜಕೀಯ ಆರೋಪಗಳು ಅತ್ಯಂತ ಖಂಡನೀಯವಾಗಿವೆ ಎಂದು ಕಾಂಗ್ರೆಸ್ ಮುಖಂಡರಾದ ಹೆಚ್‌.ಸಿ. ಯೋಗೇಶ್ ಅವರು ತಿಳಿಸಿದ್ದಾರೆ. ನೀಟ್ ಪರೀಕ್ಷೆಗೆ ಹಾಜರಾಗಲು…

Read More

*ಅವಳಿ ನಗರಗಳ ಸೌಂದರ್ಯ ಹೆಚ್ಚಿಸಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಹೆಜ್ಜೆ* *ಹಸಿರೀಕರಣ ಮತ್ತು ಸೌಂದರ್ಯೀಕರಣಕ್ಕೆ ವಿಶೇಷ ಕ್ರಮ : ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್*

*ಅವಳಿ ನಗರಗಳ ಸೌಂದರ್ಯ ಹೆಚ್ಚಿಸಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಹೆಜ್ಜೆ* *ಹಸಿರೀಕರಣ ಮತ್ತು ಸೌಂದರ್ಯೀಕರಣಕ್ಕೆ ವಿಶೇಷ ಕ್ರಮ : ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್* ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಪ್ರಮುಖ ಬೀದಿಗಳು, ವರ್ತುಲಗಳನ್ನು ಆಕರ್ಷಕವಾಗಿರುವಂತೆ, ಎಲ್ಲೆಲ್ಲೂ ಹಸಿರು ವಾತಾವರಣ ಕಂಗೊಳಿಸುವಂತೆ, ಸ್ವಚ್ಚ-ಸುಂದರ ನಗರ ನಿರ್ಮಾಣ, ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ನಗರದಲ್ಲಿ ನಡೆಯುವ ಕ್ರೌರ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಸೂಡಾ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ಅವುಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಅದಕ್ಕಾಗಿ…

Read More

*ಪಿಯು ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ಸ್ಥಾನಪಲ್ಲಟಗೊಳಿಸುವ ಸರ್ಕಾರದ ಕ್ರಮ ವಿದ್ಯಾರ್ಥಿಗಳ ಭವಿಷ್ಯದ ಮೇಲೆಸಗುವ ನೇರ ದಾಳಿ* *ಕರಡು ನಿಯಮಗಳ ವಿರುದ್ಧ ರಾಜ್ಯವ್ಯಾಪಿ ಹೋರಾಟ – ಜುಲೈ ಮೊದಲ ವಾರದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಧರಣಿ*

*ಪಿಯು ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ಸ್ಥಾನಪಲ್ಲಟಗೊಳಿಸುವ ಸರ್ಕಾರದ ಕ್ರಮ ವಿದ್ಯಾರ್ಥಿಗಳ ಭವಿಷ್ಯದ ಮೇಲೆಸಗುವ ನೇರ ದಾಳಿ* *ಕರಡು ನಿಯಮಗಳ ವಿರುದ್ಧ ರಾಜ್ಯವ್ಯಾಪಿ ಹೋರಾಟ – ಜುಲೈ ಮೊದಲ ವಾರದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಧರಣಿ* 9 ಮತ್ತು 10ನೇ ತರಗತಿಗಳಿಗೆ ಪಾಠ ಬೋಧಿಸಲು ಪಿಯು ಉಪನ್ಯಾಸಕರನ್ನು ನಿಯೋಜಿಸುವ ಉದ್ದೇಶದಿಂದ ಸರ್ಕಾರ ಹೊರಡಿಸಿರುವ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ಕರಡು ನಿಯಮಗಳು-2026 ಅನ್ನು ಕರ್ನಾಟಕ ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ 10,000ಕ್ಕೂ ಹೆಚ್ಚು ಸರ್ಕಾರಿ ಹಾಗೂ ಅನುದಾನಿತ…

Read More

*ಶಿವಮೊಗ್ಗದ ಆಶ್ರಯ ಬಡಾವಣೆ ಬೊಮ್ಮನಕಟ್ಟೆಯ ಮನೆಯೊಂದರಲ್ಲಿ ಕಳ್ಳತನ ಪ್ರಕರಣ* *ಮೂರು ದಿನಗಳಲ್ಲೇ ಇಬ್ಬರು ಕಳ್ಳರು ಅಂದರ್* ವಿನೋಬನಗರ ಸಿಪಿಐ ಸಂತೋಷ್ ಕುಮಾರ್- ಪಿಎಸ್ ಐ ತಿರುಮಲೇಶ್ ತಂಡದ ಸಾಧನೆ

*ಶಿವಮೊಗ್ಗದ ಆಶ್ರಯ ಬಡಾವಣೆ ಬೊಮ್ಮನಕಟ್ಟೆಯ ಮನೆಯೊಂದರಲ್ಲಿ ಕಳ್ಳತನ ಪ್ರಕರಣ* *ಮೂರು ದಿನಗಳಲ್ಲೇ ಇಬ್ಬರು ಕಳ್ಳರು ಅಂದರ್* ವಿನೋಬನಗರ ಸಿಪಿಐ ಸಂತೋಷ್ ಕುಮಾರ್- ಪಿಎಸ್ ಐ ತಿರುಮಲೇಶ್ ತಂಡದ ಸಾಧನೆ ಶಿವಮೊಗ್ಗದ ಆಶ್ರಯ ಬಡಾವಣೆ ಬೊಮ್ಮನಕಟ್ಟೆಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ವಿನೋಬನಗರ ಪೊಲೀಸರು ಬಂಧಿಸಿದ್ದು, ಕದ್ದ ಮಾಲುಗಳನ್ನು ವಶಕ್ಕೆ ಪಡೆದಿದ್ದಾರೆ. ಜೂ.17ರಂದು ಈ ಕಳ್ಳತನ ನಡೆದಿತ್ತು‌.ಕಳ್ಳರ ಪತ್ತೆಗಾಗಿ ಎಸ್ ಪಿ ನಿಖಿಲ್, ಡಿವೈಎಸ್ ಪಿ ಸಂಜೀವ್ ಕುಮಾರ್, ಸಿಪಿಐ ಸಂತೋಷ್ ಕುಮಾರ್, ಎಸ್ ಐ ತಿರುಮಲೇಶ್…

Read More

 ಸಾರ್ವಜನಿಕರ ನೆಮ್ಮದಿಗೆ ಭಂಗ ತಂದರೆ ಸಹಿಸಲ್ಲ: ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆ ತಕ್ಷಣ ಸರಿಪಡಿಸಲು ಅಧಿಕಾರಿಗಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಕಡಕ್ ಡೆಡ್‌ಲೈನ್

 ಸಾರ್ವಜನಿಕರ ನೆಮ್ಮದಿಗೆ ಭಂಗ ತಂದರೆ ಸಹಿಸಲ್ಲ: ಖಾಸಗಿ ಬಸ್ ನಿಲ್ದಾಣದ ಅವ್ಯವಸ್ಥೆ ತಕ್ಷಣ ಸರಿಪಡಿಸಲು ಅಧಿಕಾರಿಗಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಕಡಕ್ ಡೆಡ್‌ಲೈನ್. ಶಿವಮೊಗ್ಗ: “ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾಗುವ ಮೂಲಸೌಕರ್ಯಗಳು ಜನಸಾಮಾನ್ಯರಿಗೇ ಕಿರುಕುಳ ನೀಡುವಂತಾಗುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಆಡಳಿತ ವ್ಯವಸ್ಥೆಯಲ್ಲಿನ ಇಂತಹ ಬೇಜವಾಬ್ದಾರಿತನಕ್ಕೆ ತಕ್ಷಣವೇ ಬ್ರೇಕ್ ಬೀಳಬೇಕು” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ನಗರದ ಪ್ರಮುಖ ಕೇಂದ್ರವಾಗಿರುವ…

Read More

ಕೆಪಿಸಿಸಿ ಗದ್ದುಗೆಗೆ ಬಂದ ಮೊದಲ‌ ಪ್ರಖರ ಚಿಂತಕ

ಕೆಪಿಸಿಸಿ ಗದ್ದುಗೆಗೆ ಬಂದ ಮೊದಲ‌ ಪ್ರಖರ ಚಿಂತಕ —————————————————————– ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಪರ್ವವೊಂದು ಆರಂಭವಾಗಲಿದೆ. ಇಂದಿರಾ ಗಾಂಧಿ ಕಾಲದಿಂದಲೂ ಪ್ರಶ್ನಾತೀತ‌ ಮತ್ತು ಅಚಲ ನಿಷ್ಠೆಯಿಂದ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ಬಿ.ಕೆ.ಹರಿಪ್ರಸಾದ್ ಈಗ ಕೆಪಿಸಿಸಿ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.ಅವರಿಗೆ ಈಗ ಎಪ್ಪತ್ತೊಂದು ವರ್ಷ. ಮುಂದೆ‌ ಮುಖ್ಯಮಂತ್ರಿಯಾಗಬಹುದೆಂಬ ಆಸೆ, ನಿರೀಕ್ಷೆಗಳಿರುವುದು ಸಾಧ್ಯವೇ ಇಲ್ಲದಂಥ ವಾತಾವರಣದಲ್ಲಿ ಜವಾಬ್ದಾರಿಗೆ ಗೌರವದಿಂದ ಒಪ್ಪಿಕೊಂಡಿದ್ದಾರೆ.ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಹರಿಪ್ರಸಾದ್ ವ್ಯಕ್ತಿತ್ವಕ್ಕೆ ತಕ್ಕಂತೆ ಸಂಕಲ್ಪ ಸಮಾವೇಶ ಎಂದು ಅರ್ಥಪೂರ್ಣವಾಗಿ ಕರೆಯಲಾಗಿದೆ. ಆರ್. ಗುಂಡೂರಾವ್…

Read More

ಕವಿಸಾಲು

*ಕವಿಸಾಲು* (20/06/2026) 1. ದ್ವೇಷ ಸಾಧಿಸಿಯೇನು ಮಾಡುವೆ? ತಾಳ್ಮೆ ತಗೋ ದಯೆ ತೋರು ಕ್ಷಮೆ ಕೊಡು ಮರೆತು ಬಿಡು… 2. ಹಸ್ತರೇಖೆಗಳು ಎಷ್ಟೊಂದು ವಿಚಿತ್ರ… ಮುಷ್ಠಿಯಲ್ಲಿವೆಯಾದರೂ ಹಿಡಿತದಲ್ಲಿಲ್ಲ!! 3. ಸತ್ತಾಗ ಸಿಕ್ಕ ನಾಲ್ಕು ಹೆಗಲುಗಳ ಕಂಡು ಮಮ್ಮಲ ಮರುಗಿತು ಹೆಣವು… ಜೀವವಿದ್ದಾಗ ಸಿಕ್ಕಿದ್ದರೆ ಸಾಕಿತ್ತಲ್ಲ ಒಂದೇ ಒಂದು ಹೆಗಲು! – *ಶಿ.ಜು.ಪಾಶ* 8050112067

Read More