ಶಿ.ಜು.ಪಾಶ/Shi.ju.pasha MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

*ಎಂಥವರಿಂದಲೂ ಸುಧಾರಣೆ ಕಾಣದ ಮೆಗ್ಗಾನ್ ಆಸ್ಪತ್ರೆ;* *ಹೊಸ ಡಿಸಿ ಪ್ರಭುಲಿಂಗ ಕವಳಿಕಟ್ಟಿಯವರ ಪ್ರವೇಶದಿಂದ ಸರಿಯಾಗುವುದೇ?*

*ಎಂಥವರಿಂದಲೂ ಸುಧಾರಣೆ ಕಾಣದ ಮೆಗ್ಗಾನ್ ಆಸ್ಪತ್ರೆ;* *ಹೊಸ ಡಿಸಿ ಪ್ರಭುಲಿಂಗ ಕವಳಿಕಟ್ಟಿಯವರ ಪ್ರವೇಶದಿಂದ ಸರಿಯಾಗುವುದೇ?* ಶಿವಮೊಗ್ಗದ ಹೊಸ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಇವತ್ತು ಸಂಜೆ ಭೇಟಿ ಮಾಡಲೇಬೇಕಾದ, ಸಾವಿರಾರು ಸಮಸ್ಯೆಗಳಿರುವ ಸ್ಥಳವಾದ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮೆಗ್ಗಾನ್ ಆಸ್ಪತ್ರೆ ಎಂಬುದು ನಿಗೂಢ ಪ್ರಪಂಚ. ಅಲ್ಲಿಗೆ ಭೇಟಿ ನೀಡಿರುವ ಡಿಸಿ ಪ್ರಭುಲಿಂಗ ಕವಳಿಕಟ್ಟಿಯವರಿಗೆ ಆಸ್ಪತ್ರೆಯ ಆಡಳಿತ ಮಂಡಳಿಯ ಪ್ರಭಾವಿಗಳು ದಾರಿ ತಪ್ಪಿಸುವ ಪ್ರಯತ್ನ ಮಾಡಿದರಾದರೂ ಅದನ್ನು ಅರ್ಥ ಮಾಡಿಕೊಂಡ ಡಿಸಿ ಕಡಕ್ ಆಗಿ ವರ್ತಿಸಿದರೆ ಸಾವಿರಾರು ರೋಗಿಗಳಿಗೆ…

Read More

*ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ನೂತನ ಡಿಸಿ- ಎಸ್ ಪಿಗೆ ಸನ್ಮಾನ- ಸಂವಾದ* *ಪ್ರವಾಸಿ ತಾಣಗಳ‌ ಅಭಿವೃದ್ಧಿಗೆ ಆದ್ಯತೆ ಎಂದ ಡಿಸಿ ಪ್ರಭುಲಿಂಗ ಕವಳಿಕಟ್ಟಿ* *ಸಾಹಿತ್ಯ ಓದುತ್ತಲೇ ಖಾಕಿ ಪ್ರವೇಶಿಸಿದ್ದೇನೆ ಎಂದ ಎಸ್ ಪಿ ನಿಖಿಲ್ .ಬಿ.* *ಮತ್ತೇನೆಲ್ಲಾ ಅಂದ್ರು ಈ ಇಬ್ಬರು?*

*ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ನೂತನ ಡಿಸಿ- ಎಸ್ ಪಿಗೆ ಸನ್ಮಾನ- ಸಂವಾದ* *ಪ್ರವಾಸಿ ತಾಣಗಳ‌ ಅಭಿವೃದ್ಧಿಗೆ ಆದ್ಯತೆ ಎಂದ ಡಿಸಿ ಪ್ರಭುಲಿಂಗ ಕವಳಿಕಟ್ಟಿ* *ಸಾಹಿತ್ಯ ಓದುತ್ತಲೇ ಖಾಕಿ ಪ್ರವೇಶಿಸಿದ್ದೇನೆ ಎಂದ ಎಸ್ ಪಿ ನಿಖಿಲ್ .ಬಿ.* *ಮತ್ತೇನೆಲ್ಲಾ ಅಂದ್ರು ಈ ಇಬ್ಬರು?* ಪ್ರಾಕೃತಿಕ ಸೌಂದರ್ಯ, ಸಾಂಸ್ಕೃತಿಕ ವೈಭವ ಹಾಗೂ ಐತಿಹಾಸಿಕ ಮಹತ್ವದಿಂದ ಪ್ರಸಿದ್ಧವಾಗಿರುವ ಶಿವಮೊಗ್ಗ ಜಿಯಲ್ಲಿರುವ, ಆದರೆ ಜನಮನಕ್ಕೆ ಇನ್ನೂ ತಲುಪದಿರುವ ಅನೇಕ ಎಲೆಮರೆಕಾಯಿಯಂತಿರುವ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆ…

Read More

*ರೋಗಿಷ್ಟ ಕೋಳಿ ಮರಿ ವಿತರಿಸಿದ್ದಕ್ಕೆ ದಂಡ*

*ರೋಗಿಷ್ಟ ಕೋಳಿ ಮರಿ ವಿತರಿಸಿದ್ದಕ್ಕೆ ದಂಡ* ಅನಾರೋಗ್ಯವಾಗಿರುವ ಕೋಳಿಮರಿಗಳನ್ನು ವಿತರಿಸಿ ನಷ್ಟ ಉಂಟು ಮಾಡಿದ ಬೆಂಗಳೂರಿನ ಕೋರ್ಮಲ ಹ್ಯಾಚರೀಸ್ ರವರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಶಿವಮೊಗ್ಗದ ತಬಸುಮ್ ಸುಲ್ತಾನರವರು ಕೋರ್ಮಲ ಹ್ಯಾಚರೀಸ್, ಕೆ.ಆರ್ ರಸ್ತೆ ಬೆಂಗಳೂರು ಇವರ ವಿರುದ್ದ ದೂರನ್ನು ಸಲ್ಲಿಸಿ ದಿ: 24-12-2024 ರಂದು ರೂ.1,63,200 ಗಳನ್ನು ಪಾವತಿಸಿ 4896 ಬ್ರಾಯಲರ್ ಕೋಳಿ ಮರಿಗಳನ್ನು ಖರೀದಿಸಿದ್ದರು. ದಿ: 25-12-2024 ರಂದು ಎದುರುದಾರರು ದೂರುದಾರರಿಗೆ ಕೋಳಿಮರಿಗಳನ್ನು ಕೊಡುವಾಗ ಸುಮಾರು…

Read More

*ಶಿವಮೊಗ್ಗ ಜಿಲ್ಲೆಗೆ ಬಂದ ಹೊಸ ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಎಸ್ ಪಿ ನಿಖಿಲ್ ‌.ಬಿ. ರವರಿಗೆ ಸ್ವಾಗತ ಕೋರುತ್ತಾ…*

*ಶಿವಮೊಗ್ಗ ಜಿಲ್ಲೆಗೆ ಬಂದ ಹೊಸ ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಎಸ್ ಪಿ ನಿಖಿಲ್ ‌.ಬಿ. ರವರಿಗೆ ಸ್ವಾಗತ ಕೋರುತ್ತಾ…* ಶಿವಮೊಗ್ಗಕ್ಕೆ ಬಂದ ಹೊಸ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಮತ್ತು ಎಸ್ ಪಿ ನಿಖಿಲ್ .ಬಿ. ಕ್ರಿಯಾಶೀಲವಾಗಿದ್ದಾರೆ. ಅವರ ಮಾತುಗಳಲ್ಲಿ ಶಿವಮೊಗ್ಗದ ಜನತೆಯ ಸೇವೆ ಮಾಡುವ ಕನಸುಗಳು ಕಾಣುತ್ತವೆ. ಕೆಲಸದ ಚುರುಕುತನವಿದೆ. ಸಾಹಿತ್ಯದ ವಿಶ್ವ ಮಾನವತೆಯ ತುಣುಕುಗಳು ಕಾಣಸಿಗುತ್ತವೆ. ಕೋಮು ದ್ವೇಷಕ್ಕೆ ಮಶಾಲು ಹಿಡಿದು ಕಾಯುತ್ತಿರುವ ಕೆಲ ರಾಜಕಾರಣಿಗಳಿಂದಾಗಿ ಸೂಕ್ಷ್ಮ ಪ್ರದೇಶವೇ ಆಗಿ ಹೋಗಿರುವ ಶಿವಮೊಗ್ಗ ಜಿಲ್ಲೆ ಕೇವಲ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಸಿಗರೇಟು ಪ್ಯಾಕಿನ ಮೇಲೆ ಬರೆದಂತೆ ಮನುಷ್ಯನ ಮುಖದ ಮೇಲೂ ಬರೆಯಬೇಕಿನ್ನು Human attachments Are injuries to health! 2. ನನ್ನಂಥ ಗ್ರಾಹಕ ಸಿಕ್ಕಾನೆಲ್ಲಿ? ದುಃಖವನ್ನೂ ಖರೀದಿಸುತ್ತೇನೆ ಮತ್ತೊಬ್ಬರ ಖುಷಿಗಾಗಿ! 3. ಮೊದಲು ಮುಗುಳ್ನಗುವ ಹೃದಯವಿದ್ದ ಜಾಗದಲ್ಲೀಗ ದುಃಖತಪ್ತ ಪ್ರೇಮವಿದೆ! – *ಶಿ.ಜು.ಪಾಶ* 8050112067 (7/1/2025)

Read More

*ಚಾಕು ತೋರಿಸಿ ಚಿನ್ನದ ತಾಳಿಗಳನ್ನು ಎಗರಿಸಿದ್ದ ಕಳ್ಳನ ಬೇಟೆಯಾಡಿದ ಭದ್ರಾವತಿ ಪೊಲೀಸರು*

*ಚಾಕು ತೋರಿಸಿ ಚಿನ್ನದ ತಾಳಿಗಳನ್ನು ಎಗರಿಸಿದ್ದ ಕಳ್ಳನ ಬೇಟೆಯಾಡಿದ ಭದ್ರಾವತಿ ಪೊಲೀಸರು* ಗೃಹಿಣಿಗೆ ಚಾಕು ತೋರಿಸಿ ತಾಳಿ ಸಮೇತ ಬಂಗಾರ ದೋಚಿದ್ದ ಕಳ್ಳನನ್ನು ಭದ್ರಾವತಿ ನ್ಯೂ ಟೌನ್ ಪೊಲೀಸರು ಬಂಧಿಸಿದ್ದು, ಆತನಿಂದ 1.50 ಲಕ್ಷ ರೂ.,ಗಳ ಮೌಲ್ಯದ ತಾಳಿ ಮತ್ತು ಚಿನ್ನದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜ.5 ರಂದು ಈ ಘಟನೆ ನಡೆದಿದ್ದು, ಭದ್ರಾವತಿ ಜೇಡಿಕಟ್ಟೆಯ ವಾಸಿ ಶ್ರೀಮತಿ ಭಾಗ್ಯ ಮನೆ ಪಕ್ಕದಲ್ಲಿರೋ ಡ್ರಮ್ಮಿನಿಂದ ನೀರು ತೆಗೆದುಕೊಳ್ಳುವಾಗ ಕಳ್ಳ ಹರಿಹರ ಮೂಲದ ಪ್ರತಾಪ್(25) ಚಾಕು ತೋರಿಸಿದ್ದ. ಚಾಕು…

Read More

ಅಪರೂಪದ ರಕ್ತದಾನಕ್ಕೆ ಗಂಗಾವತಿಯಿಂದ ಬಂದ ರಕ್ತದಾನಿ; ಭದ್ರಾವತಿಯ ಕೊಂಗಮ್ಮಗೆ ಕೊನೆಗೂ ಸಿಕ್ಕಿತು ಬಾಂಬೆ ಬ್ಲಡ್‌

ಅಪರೂಪದ ರಕ್ತದಾನಕ್ಕೆ ಗಂಗಾವತಿಯಿಂದ ಬಂದ ರಕ್ತದಾನಿ; ಭದ್ರಾವತಿಯ ಕೊಂಗಮ್ಮಗೆ ಕೊನೆಗೂ ಸಿಕ್ಕಿತು ಬಾಂಬೆ ಬ್ಲಡ್‌ ಶಿವಮೊಗ್ಗ : ನಗರದ ನಾರಾಯಣ ಹೃದಯಾಲಯದಲ್ಲಿ ಹೊಟ್ಟೆ ನೋವಿನ ಚಿಕಿತ್ಸೆಗೆ ದಾಖಲಾಗಿದ್ದ ಭದ್ರಾವತಿಯ ರೋಗಿಯೊಬ್ಬರಿಗೆ ಅಗತ್ಯವಾಗಿ ಬೇಕಾಗಿದ್ದ ವಿರಾಳತಿ ವಿರಳ ʼಬಾಂಬೆ ಬಡ್ಲ್ʼ ಕೊಡಲು ರಕ್ತದಾನಿಯೊಬ್ಬರು ದೂರದ ಗಂಗಾವತಿಯಿಂದ ಶಿವಮೊಗ್ಗಕ್ಕೆ ಬಂದು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರಲ್ಲದೆ, ಇವರ ಈ ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಶಿವಮೊಗ್ಗದ ಯಶಸ್ಸಿ ರಕ್ತದಾನಿಗಳ ಬಳಗ ಮತ್ತು ನಾರಾಯಣ ಹೃದಯಾಲಯದ ಸಿಬ್ಬಂದಿ…

Read More

*ಕರ್ನಾಟಕದಲ್ಲಿ ದಾಖಲೆ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ* *ಸಾವಿರ ನಾಟಿಕೋಳಿ ಬಿರ್ಯಾನಿ ಹಂಚಿ ಸಂಭ್ರಮಿಸಿದ ಕಾಂಗ್ರೆಸ್ಸಿಗರು!* *ಶಿವಮೊಗ್ಗದ ಬಸ್ ನಿಲ್ದಾಣ- ಮೆಗ್ಗಾನ್ ಆಸ್ಪತ್ರೆ ಬಳಿ ಬಿರ್ಯಾನಿಗೆ ಮುಗಿಬಿದ್ದ ಜನ…*

*ಕರ್ನಾಟಕದಲ್ಲಿ ದಾಖಲೆ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ* *ಸಾವಿರ ನಾಟಿಕೋಳಿ ಬಿರ್ಯಾನಿ ಹಂಚಿ ಸಂಭ್ರಮಿಸಿದ ಕಾಂಗ್ರೆಸ್ಸಿಗರು!* *ಶಿವಮೊಗ್ಗದ ಬಸ್ ನಿಲ್ದಾಣ- ಮೆಗ್ಗಾನ್ ಆಸ್ಪತ್ರೆ ಬಳಿ ಬಿರ್ಯಾನಿಗೆ ಮುಗಿಬಿದ್ದ ಜನ…* ಸಿಎಂ ಆಗಿ ದೇವರಾಜ ಅರಸು ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದು, ಮುಖ್ಯಮಂತ್ರಿಯಾಗಿ ಹೆಚ್ಚು ಅವಧಿ ಸೇವೆ ಸಲ್ಲಿಸಿದ ಕೀರ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್ ರವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಸಾವಿರ ನಾಟಿ ಕೋಳಿ ಬಿರ್ಯಾನಿಯನ್ನು ಹಂಚಿ ಸಂಭ್ರಮಿಸಿದರು. 7 ವರ್ಷ…

Read More

*ದೇವರಾಜ ಅರಸು ದಾಖಲೆ ಉಡೀಸ್!* *ಹೊಸ ಇತಿಹಾಸ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ*

*ದೇವರಾಜ ಅರಸು ದಾಖಲೆ ಉಡೀಸ್!* *ಹೊಸ ಇತಿಹಾಸ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ* ಸಿಎಂ ಆಗಿ ದೇವರಾಜ ಅರಸು ದಾಖಲೆಯನ್ನು ಸಿದ್ದರಾಮಯ್ಯ ಮುರಿದಿದ್ದು, ಮುಖ್ಯಮಂತ್ರಿಯಾಗಿ ಹೆಚ್ಚು ಅವಧಿ ಸೇವೆ ಸಲ್ಲಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. 7 ವರ್ಷ 7 ತಿಂಗಳು 20 ದಿನಗಳ ಕಾಲ ದೇವರಾಜ ಅರಸು ಸಿಎಂ ಆಗಿದ್ದರು. ಇದೀಗ ದೇವರಾಜ ಅರಸು ದಾಖಲೆಯನ್ನು ಸಿದ್ದರಾಮಯ್ಯ ಬ್ರೇಕ್​​ ಮಾಡಿದ್ದಾರೆ. 2013ರಲ್ಲಿ ಮೊದಲ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದ ಸಿದ್ದರಾಮಯ್ಯ, 2013ರ ಮೇ 13ರಿಂದ 2018ರ ಮೇ 17ರವರೆಗೆ…

Read More

ಜಮೀನು ವಿಚಾರದಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಭದ್ರಾವತಿಯ ನಾಗರಾಜ್ ಮತ್ತು ಶೀಲಾರಿಗೆ 3 ವರ್ಷ ಕಠಿಣ ಸಜೆ, 40 ಸಾವಿರ ರೂ.,ಗಳ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. *ಏನಿದು ಪ್ರಕರಣ?- ಇಲ್ಲಿದೆ ಸಂಪೂರ್ಣ ಪೊಲೀಸ್ ರಿಪೋರ್ಟ್…*

ಜಮೀನು ವಿಚಾರದಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಭದ್ರಾವತಿಯ ನಾಗರಾಜ್ ಮತ್ತು ಶೀಲಾರಿಗೆ 3 ವರ್ಷ ಕಠಿಣ ಸಜೆ, 40 ಸಾವಿರ ರೂ.,ಗಳ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. *ಏನಿದು ಪ್ರಕರಣ?- ಇಲ್ಲಿದೆ ಸಂಪೂರ್ಣ ಪೊಲೀಸ್ ರಿಪೋರ್ಟ್…* *ದಿನಾಂಕ: 30-11-2021 ರಂದು ದೂರುದಾರರಾದ ಬಸವರಾಜ್* ರವರು ಶಿವಮೊಗ್ಗದಿಂದ ಭದ್ರಾವತಿ ಹಿರಿಯೂರು ಗ್ರಾಮದಲ್ಲಿರುವ ತಮ್ಮ ಜಮೀನಿಗೆ ನೀರು ಹಾಯಿಸಲು ಬಂದಾಗ ,ರಾತ್ರಿ 10.00 ಗಂಟೆಯ ವೇಳೆಗೆ ಆರೋಪಿತರುಗಳು ಜಮೀನಿನಲ್ಲಿ ಬೆಳೆದ ಭತ್ತವನ್ನು ಮೆಷಿನ್ ಮುಖಾಂತರ ಕಟಾವು ಮಾಡಿಸುತ್ತಿದ್ದು, *ದೂರುದಾರರಿಗೂ ಮತ್ತು…

Read More