ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ* *ಸಂಸದ ರಾಘವೇಂದ್ರ ವಿರುದ್ಧ ಹರಿಹಾಯ್ದ ಸಚಿವ ಮಧು ಬಂಗಾರಪ್ಪ*
*ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿ*
*ಸಂಸದ ರಾಘವೇಂದ್ರ ವಿರುದ್ಧ ಹರಿಹಾಯ್ದ ಸಚಿವ ಮಧು ಬಂಗಾರಪ್ಪ*
ಜಾತಿ ಜನಗಣತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತೀರ್ಮಾನ ತೆಗೆದುಕೊಂಡಿದ್ದಾರೆ
ಅದರಲ್ಲಿ ಏನಾದ್ರೂ ಸಂಶಯ, ತಪ್ಪಿದ್ದರೆ ಸಿಎಂ ಹಾಗೂ ನನ್ನ ಗಮನಕ್ಕೂ ತರಬಹುದು
ಕೇಂದ್ರ ಸರ್ಕಾರ ಕೂಡ ಜಾತಿ ಜನಗಣತಿ ಮಾಡುತ್ತಿದೆ
ರಾಹುಲ್ ಗಾಂಧಿಯವರು ಒತ್ತಾಯ ಹೇರಿದಾಗ ತಕ್ಷಣವೇ ಜಾತಿ ಜನಗಣತಿಗೆ ಆದೇಶಿಸಿದರು
ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ ಬದ್ಧವಾದ ಸಮಾನತೆ ಇರಬೇಕು
ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಜಾತಿಜನಗಣತಿ ಮಾಡಲಾಗುತ್ತಿದೆ
ಸಿಎಂ ಸಿದ್ಧರಾಮಯ್ಯರವರು ಬಹಳ ಉತ್ತಮವಾಗಿ ರೂಪಿಸಿದ್ದಾರೆ
ಸಾರ್ವಜನಿಕರು ಗಣತಿಗೆ ಅಧಿಕಾರಿಗಳು ಮನೆಗೆ ಬಂದಾಗ ಸರಿಯಾದ ಮಾಹಿತಿ ನೀಡಿ
ಈಗಾಗಲೇ ಶರಾವತಿ ಮುಳುಗಡೆ ಸಂತ್ರಸ್ತರ ಜಾಗಗಳ ಸರ್ವೆ ನಡೆಯುತ್ತಿದೆ
ಶೇ. 75 ರಷ್ಟು ಸಮಸ್ಯೆ ಬಗೆಹರಿಸಲಾಗಿದ್ದರೂ ಕೂಡ ಶೇ. 25 ರಷ್ಟು ಗೊಂದಲ ಇದೆ.
ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಬಳಿ ರೈತರು ಚರ್ಚಿಸಬಹುದು
ಗೊಂದಲಗಳಿದ್ದರೆ ಅಧಿಕಾರಿಗಳ ಬಳಿ ಮಾತನಾಡಿ ಪರಿಹರಿಸಿಕೊಳ್ಳಿ
*ಸಂಸದ ರಾಘವೇಂದ್ರ ವಿರುದ್ಧ ಹರಿಹಾಯ್ದ ಸಚಿವ ಮಧು ಬಂಗಾರಪ್ಪ*
ನಮ್ಮ ಜಿಲ್ಲೆಯಲ್ಲಿ ವರ್ಗಾವಣೆಗೆ ಹಣ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ
ಸಂಸದ ರಾಘವೇಂದ್ರ ಆಧಾರರಹಿತವಾಗಿ ಆರೋಪ ಮಾಡಬಾರದು
ಅವರ ತಂದೆ ಮುಖ್ಯಮಂತ್ರಿಗಳಿದ್ದಾಗ ಈ ಇಬ್ಬರು ಅಣ್ಣತಮ್ಮ ಇದೇ ಕೆಲಸ ಮಾಡಿದ್ದರು ಅನಿಸುತ್ತೆ
ದಾಖಲೆ ಇಟ್ಟುಕೊಂಡು ಆರೋಪ ಮಾಡಬೇಕು
ಸ್ವೇಚ್ಛಾಚಾರವಾಗಿ ಭಾಷಣ ಮಾಡುವುದನ್ನು ರಾಘವೇಂದ್ರ ನಿಲ್ಲಿಸಬೇಕು
ಯಾವುದೇ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದುಕೊಂಡು ಮಾತನಾಡಬೇಕು
ಮಧು ಬಂಗಾರಪ್ಪ ಬಗ್ಗೆ ಮಾತನಾಡುವಾಗ ಹುಷಾರಾಗಿ ಇರ್ಬೇಕು
ಜೋಗ ಅಭಿವೃದ್ಧಿಗೆ ನೀವು ನಿಮ್ಮಪ್ಪನ ಮನೆಯಿಂದ ಹಣ ತಂದಿಲ್ಲ
ಅಥವಾ ನಾನು ಕೂಡ ನಮ್ಮಪ್ಪನ ಮನೆಯಿಂದ ತಂದಿಲ್ಲ
ನಮ್ಮಪ್ಪ ಬಂಗಾರಪ್ಪ ಕೂಡ ಜೋಗ ಅಭಿವೃದ್ಧಿಗೆ ಕನಸು ಕಂಡಿದ್ದಾರೆ
ಸಂಸದ ರಾಘವೇಂದ್ರರಿಗೆ ಒಂದು ಕೆಟ್ಟ ಚಾಳಿ ಇದೆ
ಸೇತುವೆ ಗುದ್ದಲಿ ಪೂಜೆ ಮಾಡಿ, ಅವರೇ ಟೇಪು ಹಿಡಿದು ರೆಡಿ ಇರ್ತಾರೆ ಅನಿಸುತ್ತೆ
ಅವರೇ ಹೋಗಿ ಸೇತುವೆ ಉದ್ಘಾಟಿಸುತ್ತಾರೆ
ಸಂಸದ ರಾಘವೇಂದ್ರ ಇದೇ ರೀತಿ ತಮ್ಮ ಚಾಳಿ ಮುಂದುವರೆಸಿದರೆ ನಾನು ಕೂಡ ಅಗ್ರೆಸಿವ್ ಆಗಿ ಹೋಗಬೇಕಾಗುತ್ತದೆ
ಬಿ.ವೈ. ರಾಘವೇಂದ್ರ ಬೆಳಿಗ್ಗೆ ಎದ್ದ ಕೂಡಲೇ ಅವರದೇ ಸರ್ಕಾರವಿದೆ ಎಂದು ಹೇಳಿಕೊಂಡು ಎದ್ದೆಳುತ್ತಾರೆ ಅನಿಸುತ್ತೆ
ರಾಘವೇಂದ್ರರವರು ಇವೆಲ್ಲವೂ ಬಿಡಬೇಕಾಗುತ್ತದೆ
ರಾಜ್ಯದಲ್ಲಿ ಅವರ ಸರ್ಕಾರ ಈಗ ಇಲ್ಲ
ರಾಘವೇಂದ್ರ ಇನ್ನೂ ಕೂಡ ಅಧಿಕಾರದ ಅಮಲಿನಿಂದ ಕೆಳಗೆ ಇಳಿದಿಲ್ಲ ಅನಿಸುತ್ತೆ