ಶಿವಮೊಗ್ಗ ಟ್ರಾಫಿಕ್ ಠಾಣೆಗೆ ಬರುತ್ತಿದ್ದಾರೆ ಇನ್ಸ್ ಪೆಕ್ಟರ್ ಗಾಯತ್ರಿ*

*ಶಿವಮೊಗ್ಗ ಟ್ರಾಫಿಕ್ ಠಾಣೆಗೆ ಬರುತ್ತಿದ್ದಾರೆ ಇನ್ಸ್ ಪೆಕ್ಟರ್ ಗಾಯತ್ರಿ*

ಶಿವಮೊಗ್ಗಕ್ಕೆ ಸಂಚಾರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಶ್ರೀಮತಿ ಆರ್.ಗಾಯತ್ರಿ ವರ್ಗವಾಗಿದ್ದಾರೆ.

ಈ ಹಿಂದೆ ಕುವೆಂಪು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರೂ ಆಗಿದ್ದ ಗಾಯತ್ರಿ, ವಿದ್ಯಾಭ್ಯಾಸ ಮುಗಿಸಿ ಸಬ್ ಇನ್ಸ್ ಪೆಕ್ಟರ್ ಆಗಿ ಗಮನ ಸೆಳೆದರು.
ಕುವೆಂಪು ವಿವಿಯ 2000ನೇ ಇಸವಿಯ ಅಕ್ಟೋಬರ್ 30 ರಂದು ನಡೆದ ವಿದ್ಯಾರ್ಥಿ ಸೆನೆಟ್( ಎನ್ ಎಸ್ ಯು ಐ) ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಾಯತ್ರಿ ಗೆದ್ದಿದ್ದರು.

ಸೌಹಾರ್ದದ ವಾತಾವರಣ ನಿರ್ಮಿಸುವಲ್ಲಿ ನಿಷ್ಣಾತರಾದ ಗಾಯತ್ರಿಯಂಥ ಅಧಿಕಾರಿ ಶಿವಮೊಗ್ಗದಂಥ ಸೂಕ್ಷ್ಮ ಜಾಗಕ್ಕೆ ಆಗಮಿಸುತ್ತಿರುವುದು ಸದ್ಯದ ಅನಿವಾರ್ಯವಾಗಿದೆ.