ಗಪ್ ಚುಪ್ ತುಷಾರ- ಯಾಕೀ ಮೌನಾವತಾರ?* *ಉಪ ಆಯುಕ್ತ ತುಷಾರ್ ಕೈಗೆ ಸಿಕ್ಕದ ಶಿವಮೊಗ್ಗ ಮಹಾ‌ನಗರ ಪಾಲಿಕೆಯ ಆಡಳಿತ ಶಾಖೆ!* *ಹೋಟೆಲ್ಲು-ಊಟ-ಹರಟೆಯಲ್ಲೇ ತಲ್ಲೀನ ಈ ಸಿಬ್ಬಂದಿ-ಆದರೂ ತುಷಾರರಿಂದ ಕ್ರಮವಿಲ್ಲ ಯಾಕೆ?*

*ಗಪ್ ಚುಪ್ ತುಷಾರ- ಯಾಕೀ ಮೌನಾವತಾರ?*

*ಉಪ ಆಯುಕ್ತ ತುಷಾರ್ ಕೈಗೆ ಸಿಕ್ಕದ ಶಿವಮೊಗ್ಗ ಮಹಾ‌ನಗರ ಪಾಲಿಕೆಯ ಆಡಳಿತ ಶಾಖೆ!*

*ಹೋಟೆಲ್ಲು-ಊಟ-ಹರಟೆಯಲ್ಲೇ ತಲ್ಲೀನ ಈ ಸಿಬ್ಬಂದಿ-ಆದರೂ ತುಷಾರರಿಂದ ಕ್ರಮವಿಲ್ಲ ಯಾಕೆ?*

ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಫೈಲುಗಳಿಗೆ ಕೈ ಹಾಕುವ ಮಟ್ಟಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಕುಸಿದಿದೆ. ಉಪ ಆಯುಕ್ತರಾದ ತುಷಾರ್ ಕೈಯಿಂದ ಪಾಲಿಕೆಯ ಆಡಳಿತ ಜಾರುತ್ತಿದೆ!

ಆಡಳಿತ ಶಾಖೆಯಲ್ಲಿ ಆಡಿದ್ದೇ ಆಟ ಎನ್ನುವಂಥ ವಾತಾವರಣ ಸೃಷ್ಟಿಯಾಗುತ್ತಿದೆ. ಕೋರ್ಟ್ ಸೆಕ್ಷನ್ ಅಶೋಕ ಎಂಬ ಮಹಾನುಭಾವರಂತೂ ಸಾಮ್ರಾಟ್ ಅಶೋಕನಂತೆ ಹೆಣ್ಣು ಹೈಕಳು ಸಿಬ್ಬಂದಿಗಳನ್ನು ಜೊತೆಗಿಟ್ಟುಕೊಂಡು ಹೋಟೆಲ್ಲು, ಹರಟೆ ಎಂದೆಲ್ಲ ಅಡ್ಡಾಡುತ್ತಿದ್ದರೂ ಈ ತುಷಾರ್ ಎಂಬ ನಿವೃತ್ತಿ ಅಂಚಿನ ಉಪ ಆಯುಕ್ತರಿಗೆ ಏನೂ ಅನಿಸುವುದಿಲ್ಲ. ಬದಲಿಗೆ, ಏನಾದ್ರೂ ಮಾಡ್ಕೊಳ್ಳಿ ಎಂಬಂತೆ ಮೌನವಹಿಸಿದ್ದರ ಹಿಂದಿನ ಮರ್ಮ ಅರ್ಥವಾಗುತ್ತಿಲ್ಲ!

ಜೂನ್ 4 ರ ಮಧ್ಯಾಹ್ನ ಇಡೀ ಆಡಳಿತ ಶಾಖೆ ಊಟಕ್ಕೆಂದು ಎದ್ದು ಹೋಗಿದ್ಯಾವಾಗೋ ಬಂದಿದ್ಯಾವಾಗೋ…ತುಷಾರ್ ಯಾಕೆ ಪ್ರಶ್ನಿಸುತ್ತಿಲ್ಲ?

ಉಪ ಆಯುಕ್ತ ತುಷಾರ್ ರವರ ಹೆಗಲಿಗೆ ಇಂಥ ಜವಾಬ್ದಾರಿಗಳಿದ್ದರೂ ಆ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ತುಷಾರ್ ಸೋಲುತ್ತಿದ್ದಾರೆ!
ತುಷಾರ್ ರವರ ಇಂಥ ಬೇಜವಾಬ್ದಾರಿತನ ಅಶೋಕ್ ರಂಥವರ ಪಾಲಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಟದ ಮೈದಾನವಾಗುತ್ತಿದೆ.

ಗುಡುಗು ಸಿಡಿಲಿಂದ ಆಡಳಿತ ಶಾಖೆಯ ಒಂದು ಕಂಪ್ಯೂಟರ್ ಕೆಟ್ಟು ಕೂತಿದ್ದು, ಅದನ್ನು ಆಪರೇಟ್ ಮಾಡುವ ಸವಿತಾರವರು ದುಃಖತಪ್ತರಾಗಿ ಕಂಡರೆ ಅಶೋಕ್ ಪಾಲಿಗೆ ಅದು ಊಟಕ್ಕೆ ಕರೆದೊಯ್ಯುವ ಪ್ರಮುಖ ನೆಪವಾಗಿಬಿಡುವುದು ದುರಂತವೇ ಸೈ.

ಪಾಲಿಕೆಯ ಸಿಬ್ಬಂದಿಗಳ ಸಂಬಳವನ್ನೆಲ್ಲ ಮಾಡಬೇಕಾದ ಪ್ರಮುಖ ಜವಾಬ್ದಾರಿ ಕೂಡ ಈ ಆಡಳಿತ ಶಾಖೆಯ ಮೇಲಿದೆ. ಆದರೂ, ಶಿಸ್ತಿಲ್ಲದ ಈ ವಿಭಾಗದ ಸಿಬ್ಬಂದಿ ಬೆಳಿಗ್ಗೆ ಕೆಲಸಕ್ಕೆ ಬರೋಕೆ 11 ಗಂಟೆ ಆಗಲೇಬೇಕು.

ಕೋರ್ಟ್ ಸೆಕ್ಷನ್ನಿನ ಅಶೋಕ, (ಇ ಎಸ್ ಟಿ) ಎಸ್ ಡಿ ಎ ಸವಿತಾ, ಎಫ್ ಡಿ ಎ ಸುಶ್ಮಿತಾರವರೆಲ್ಲ ಆಡಳಿತ ವಿಭಾಗ ಚಿತ್ರನ್ನ ಆಗುತ್ತಿರುವುದಕ್ಕೆ ಪ್ರಯತ್ನಿಸುತ್ತಿದ್ದರೆ, ಅದಕ್ಕೆ ಕಡಿವಾಣ ಹಾಕಬೇಕಾದ ಉಪ ಆಯುಕ್ತ ತುಷಾರ್ ಮಾತ್ರ ಗಪ್ ಚುಪ್!

ಪಾಲಿಕೆ ಆಯುಕ್ತರಾದ ಶ್ರೀಮತಿ ಕವಿತಾ ಯೋಗಪ್ಪನವರ್ ಕೂಡಲೇ ಈ ಆಡಳಿತ ಶಾಖೆಯ ಮೇಲೆ ಚಾಟಿ ಬೀಸಲಿ…