ವಿಧ್ಯಾರ್ಥಿಗಳು ಭವಿಷ್ಯದಲ್ಲಿ ಇತರರಿಗೆ ದಾನ ಮಾಡುವಷ್ಟು ಯಶ್ವಸಿ ಯಾಗಬೇಕು; ಡಾ ವೈ ವಿಜಯ್ ಕುಮಾರ್ ಶೈಕ್ಷಣಿಕ ಸಾಧಕರಿಗೆ ಲ್ಯಾಪ್ಟಾಪ್ ಮತ್ತು ನಗದು ಬಹುಮಾನ ವಿತರಿಸಿದ ಮಲ್ನಾಡ್ ಚಾರಿಟಬಲ್ ಟ್ರಸ್ಟ್
ವಿಧ್ಯಾರ್ಥಿಗಳು ಭವಿಷ್ಯದಲ್ಲಿ ಇತರರಿಗೆ ದಾನ ಮಾಡುವಷ್ಟು ಯಶ್ವಸಿ ಯಾಗಬೇಕು; ಡಾ ವೈ ವಿಜಯ್ ಕುಮಾರ್
ಶೈಕ್ಷಣಿಕ ಸಾಧಕರಿಗೆ ಲ್ಯಾಪ್ಟಾಪ್ ಮತ್ತು ನಗದು ಬಹುಮಾನ ವಿತರಿಸಿದ ಮಲ್ನಾಡ್ ಚಾರಿಟಬಲ್ ಟ್ರಸ್ಟ್
ಶಿವಮೊಗ್ಗ ಮಲ್ನಾಡ್ ಎಜುಕೇಷನಲ್
ಅಂಡ್ ಚ್ಯಾರಿಟೆಬಲ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ವರ್ಷ 2024-25ರಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳೊಂದಿಗೆ ನಗದು ಬಹುಮಾನಗಳನ್ನು ನೀಡಿ ಅವರ ಸಾಧನೆಗೆ ಪ್ರಶಂಸಿಸಲಾಯಿತು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜವಾಹರಲಾಲ್ ನೆಹರು ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ವೈ. ವಿಜಯ್ ಕುಮಾರ್ ಮಾತನಾಡಿ, “ವಿದ್ಯಾಭ್ಯಾಸದ ಮುಖ್ಯ ಉದ್ದೇಶ ಕೇವಲ ಪದವಿಯ ಪಡೆಯುವುದಲ್ಲದೆ ಕೌಶಲ್ಯಾಭಿವೃದ್ಧಿ ನಿರಂತರವಾಗಿ ಬೆಳಸುವುದು ಮುಖ್ಯ ,” ಎಂದು ಹೇಳಿದರು. ವಿದ್ಯಾರ್ಥಿಗಳು ಪದವೀಧರರಾದ ನಂತರ ವಿದೇಶಗಳತ್ತ ಮುಖ ಮಾಡುವ ಬದಲಿಗೆ, ಭಾರತದಲ್ಲಿಯೇ ಲಭ್ಯವಿರುವ ಸಂಪತ್ತಿನ ಪ್ರಯೋಜನವನ್ನು ಪಡೆಯಬೇಕು ಎಂದರು.
“ಇಂದು ಲ್ಯಾಪ್ಟಾಪ್ ಬಹುಮಾನವಾಗಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಭವಿಷ್ಯದಲ್ಲಿ ಇತರರಿಗೆ ದಾನ ಮಾಡುವಷ್ಟು ಯಶಸ್ವಿಯಾಗಬೇಕು,” ಎಂದು ಸಂದೇಶ. ನೀಡಿದರು
ಆದಿ ಚಂಚಂಗಿರಿ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಗುರುರಾಜ್ ಮಾತನಾಡುತ್ತಾ, “ಇದ್ದಲು ಮತ್ತು ವಜ್ರ ಎರಡೂ ಒಂದೇ ಪದಾರ್ಥದಿಂದ ತಯಾರಾಗುತ್ತವೆ, ಆದರೆ ವಜ್ರ ತನ್ನ ಒತ್ತಡದ ಶಕ್ತಿ ಮತ್ತು ಬೆಳಕು ಹಂಚುವ ಸಾಮರ್ಥ್ಯದ ಮೂಲಕ ಅಮೂಲ್ಯವಾಗುತ್ತದೆ. ವಿದ್ಯಾರ್ಥಿಗಳು ವಜ್ರದಂತೆ ಜಗತ್ತು ಮೆಚ್ಚುವ ವ್ಯಕ್ತಿಗಳಾಗಬೇಕು” ಎಂದರು. ಅವರು ಕನಸುಗಳನ್ನು ನಿದ್ದೆಯಲ್ಲಿ ಕಾಣದೆ ಕನಸನ್ನು ಎಚ್ಚರವಿದ್ದಾಗ ನೋಡಬೇಕೆಂದು ಹಿತವಚನ ನೀಡಿದರು.
ಡಾ. ಆಫ್ತಾಬ್ ಅಹ್ಮದ್ ಮಾಲ್ದಾರ್ ಅವರು ಮಾತನಾಡಿ, “ಕಾಲದ ಬೆಲೆಯನ್ನು ಅರಿಯದವನು ಯಶಸ್ಸಿನ ಓಟದಿಂದ ಹೊರಬಿದ್ದವನಾಗುತ್ತಾನೆ” ಎಂದು ಸಲಹೆ ನೀಡಿದರು. “ಇಂದಿನ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ಉಪಕರಣಗಳು ಹೆಚ್ಚು ವ್ಯಾಪಕವಾಗಿರುವ ಕಾರಣ, ಕೇವಲ ಶೈಕ್ಷಣಿಕ ಪದವಿಗಳು ಸಾಕಾಗುವುದಿಲ್ಲ, ಬದಲಾಗಿ ಮಾನವೀಯ ಕೌಶಲ್ಯಗಳೆ ಅವಶ್ಯಕ” ಎಂದು ಹೇಳಿದರು.
ಅವರು ವಿದ್ಯಾರ್ಥಿಗಳಿಗೆ ಹೃದಯಸ್ಪರ್ಶಿ ಕೌಶಲ್ಯಗಳು — ಭಾವನಾತ್ಮಕ ಬುದ್ಧಿಮತ್ತೆ, ಸಂವಹನ ಕೌಶಲ್ಯ, ಸಮಸ್ಯೆ ಬಗೆಹರಿಸುವ ಶಕ್ತಿ, ವಿಮರ್ಶಾತ್ಮಕ ಚಿಂತನೆ ಮತ್ತು ಸಮಾಜ ಸೇವೆಯ ಬಲ — ಇವುಗಳ ಅಗತ್ಯತೆಯನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಲ್ನಾಡ್ ಟ್ರಿಸ್ಟ್ ಅಧ್ಯಕ್ಷ ಮೊಹಮ್ಮದ್ ಇಬ್ರಾಹಿಂ ಅವರು ತಮ್ಮ ಭಾಷಣದಲ್ಲಿ, “ಒಟ್ಟಾಗಿ ಕೆಲಸ ಮಾಡುವ ಶಕ್ತಿ ಯಶಸ್ಸಿನ ಮೂಲವಾಗಿದೆ.
“ನಾವು ಸಮಾಜದಿಂದ ಏನಾದರೂ ಪಡೆಯುತ್ತಿದ್ದರೆ, ಅದರ ಸಾಲವನ್ನು ತೀರಿಸಲು ಕೊಡುಗೆ ನೀಡುವ ಗುಣವನ್ನೂ ಬೆಳಸಬೇಕು,” ಎಂದು ಅವರು ವಿದ್ಯಾರ್ಥಿಗಳಿಗೆ ಪಾಠ ಹೇಳಿದರು.
ಟ್ರಸ್ಟ್ನ ಅಧ್ಯಕ್ಷ ಎಜಾಜ್ ಅಹ್ಮದ್ ಅವರು ಟ್ರಸ್ಟ್ನ ಉದ್ದೇಶ ಮತ್ತು ಗುರಿಗಳನ್ನು ವಿವರಿಸಿದರು. ಆಡಳಿತಾಧಿಕಾರಿ ಎಸ್ ಎನ್ ಎಜಾಜ್ ಅಹ್ಮದ್ ಅವರು ಸಂಸ್ಥೆಯ ವಿವಿಧ ಚಟುವಟಿಕೆಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಕಾರ್ಯದರ್ಶಿ ಮುದಸ್ಸಿರ್ ಅಹ್ಮದ್, ಇಫ್ತಿಖಾರ್ ಅಹ್ಮದ್ ಖಾನ್, ಮೊಹಮ್ಮದ್ ಲಿಯಾಖತ್ ಮತ್ತು ಇಂಪೀರಿಯಲ್ ಎಜುಕೇಶನಲ್ ಫೌಂಡೇಶನ್ನ ಅಧ್ಯಕ್ಷ ಇಕ್ಬಾಲ್ ಹಬೀಬ್ ಸೇಠ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಯಿತು