*ಚಾಕು ತೋರಿಸಿ ಚಿನ್ನದ ತಾಳಿಗಳನ್ನು ಎಗರಿಸಿದ್ದ ಕಳ್ಳನ ಬೇಟೆಯಾಡಿದ ಭದ್ರಾವತಿ ಪೊಲೀಸರು*

*ಚಾಕು ತೋರಿಸಿ ಚಿನ್ನದ ತಾಳಿಗಳನ್ನು ಎಗರಿಸಿದ್ದ ಕಳ್ಳನ ಬೇಟೆಯಾಡಿದ ಭದ್ರಾವತಿ ಪೊಲೀಸರು*

ಗೃಹಿಣಿಗೆ ಚಾಕು ತೋರಿಸಿ ತಾಳಿ ಸಮೇತ ಬಂಗಾರ ದೋಚಿದ್ದ ಕಳ್ಳನನ್ನು ಭದ್ರಾವತಿ ನ್ಯೂ ಟೌನ್ ಪೊಲೀಸರು ಬಂಧಿಸಿದ್ದು, ಆತನಿಂದ 1.50 ಲಕ್ಷ ರೂ.,ಗಳ ಮೌಲ್ಯದ ತಾಳಿ ಮತ್ತು ಚಿನ್ನದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜ.5 ರಂದು ಈ ಘಟನೆ ನಡೆದಿದ್ದು, ಭದ್ರಾವತಿ ಜೇಡಿಕಟ್ಟೆಯ ವಾಸಿ ಶ್ರೀಮತಿ ಭಾಗ್ಯ ಮನೆ ಪಕ್ಕದಲ್ಲಿರೋ ಡ್ರಮ್ಮಿನಿಂದ ನೀರು ತೆಗೆದುಕೊಳ್ಳುವಾಗ ಕಳ್ಳ ಹರಿಹರ ಮೂಲದ ಪ್ರತಾಪ್(25) ಚಾಕು ತೋರಿಸಿದ್ದ.

ಚಾಕು ತೋರಿಸಿದ ಪ್ರತಾಪ್ ಮಹಿಳೆಯ 75ಸಾವಿರ ರೂ., ಬೆಲೆಬಾಳುವ ಎರಡು ತಾಳಿ ಮತ್ತು ಒಂದು ಲಕ್ಷ್ಮೀ ತಾಳಿ, ಬಂಗಾರದ 4 ಗುಂಡುಗಳಿರೋ ಕರಿಮಣಿ ಮಾಂಗಲ್ಯ ಸೇರಿ, ಚಾಕು ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭದ್ರಾವತಿ ಡಿವೈಎಸ್ ಪಿ ಪ್ರಕಾಶ್ ರಾಥೋಡ್, ಸಿಪಿಐ ಶ್ರೀಮತಿ ನಾಗಮ್ಮರವರ ಮೇಲ್ವಿಚಾರಣೆಯಲ್ಲಿ ಪಿಎಸ್ ಐ ರಮೇಶ್, ಸಿಬ್ಬಂದಿಗಳಾದ ಕವಿತಾ ಪಿಎಸ್ ಐ, ಎ ಎಸ್ ಐ ಮಂಜಪ್ಪ, ಆದರ್ಶ, ರವಿಕಿರಣ್, ಪ್ರಸನ್ನ, ಪ್ರಕಾಶರವರಿದ್ದ ತಂಡ ಈ ಕಾರ್ಯಾಚರಣೆ ಮಾಡಿದೆ.

ಎಸ್ ಪಿ ನಿಖಿಲ್ .ಬಿ. ಪೊಲೀಸರ ಈ ಕೆಲಸಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.