ವಿಷ ಕುಡಿದ ಮಹಿಳೆಯ ಜೀವ ಉಳಿಸಿದ ಪೊಲೀಸರಿಬ್ಬರಿಗೆ ಸನ್ಮಾನಿಸಿದ ಎಸ್ ಪಿ ನಿಖಿಲ್*
*ವಿಷ ಕುಡಿದ ಮಹಿಳೆಯ ಜೀವ ಉಳಿಸಿದ ಪೊಲೀಸರಿಬ್ಬರಿಗೆ ಸನ್ಮಾನಿಸಿದ ಎಸ್ ಪಿ ನಿಖಿಲ್*
ಕಳೆನಾಶಕ ವಿಷ ಸೇವನೆ ಮಾಡಿದ್ದ ಮಲವಗೊಪ್ಪ ಗ್ರಾಮದ ಮಹಿಳೆಯೊಬ್ಬರನ್ನು ತಮ್ಮ ಕರ್ತವ್ಯ ನಿಷ್ಠೆ ಹಾಗೂ ಸಮಯ ಪ್ರಜ್ಞೆಯಿಂದ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿದ ಪೊಲೀಸರಾದ ಶಬ್ಬೀರ್ ಬೇಗ್ ಮತ್ತು ಜಯಂತ್ ರವರಿಗೆ ಎಸ್ ಪಿ ನಿಖಿಲ್ ಬಿ. ಅಭಿನಂದಿಸಿ ಸನ್ಮಾನಿಸಿದರು.
ವಿಷ ಕುಡಿದ ಮಹಿಳೆ ನರಳುತ್ತಿರುವ ಮಾಹಿತಿ ಪಡೆದು ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿ, ಆಕೆಯ ಜೀವ ಉಳಿಸಿದ ಇ.ಆರ್.ಎಸ್.ಎಸ್ ನ ಅಧಿಕಾರಿಗಳಾದ ಶಬ್ಬೀರ್ ಬೇಗ್, ಸಿ.ಹೆಚ್.ಸಿ ತುಂಗಾನಗರ ಪೊಲೀಸ್ ಠಾಣೆ ಹಾಗೂ ಜಯಂತ್ ಎ.ಹೆಚ್.ಸಿ ಡಿಎಆರ್ ಶಿವಮೊಗ್ಗ ರವರುಗಳಿಗೆ ಎಸ್ ಪಿ ನಿಖಿಲ್. ಬಿ. ಐಪಿಎಸ್ ಇಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ, ಸನ್ಮಾನಿಸಿ* ಅಭಿನಂದಿಸಿದರು.


