*ಕೇಂದ್ರ ಸರ್ಕಾರದ ಬಜೆಟ್; ಕಾಂಗ್ರೆಸ್ ನ ಹೆಚ್. ಸಿ.ಯೋಗೇಶ್ ಪ್ರತಿಕ್ರಿಯೆ ಏನು?*
*ಕೇಂದ್ರ ಸರ್ಕಾರದ ಬಜೆಟ್; ಕಾಂಗ್ರೆಸ್ ನ ಹೆಚ್. ಸಿ.ಯೋಗೇಶ್ ಪ್ರತಿಕ್ರಿಯೆ ಏನು?*
ಉದ್ಯೋಗಕ್ಕೆ ಯಾವುದೇ ರೀತಿಯ ಒತ್ತು ನೀಡದ, ಯಾವುದೇ ರೀತಿಯ ಹೊಸ ಯೋಜನೆಗಳನ್ನು ಮಾಡದ, ಹೊಸ ರೈಲ್ವೆ ಹಳಿಗಳನ್ನು ಮಾಡದೆ ಇರುವ ಹಳೇ ರೈಲ್ವೆ ಹಳಿಗಳಲ್ಲೇ ವೇಗವಾದ ರೈಲುಗಳ ಸಂಚಾರವೆಂದು ಸುಳ್ಳು ಹೇಳುತ್ತಿರುವ, ಮಧ್ಯಮ ವರ್ಗದವರು ಹಾಗೂ ಕೆಳ ವರ್ಗದವರಿಗೆ ಯಾವುದೇ ರೀತಿಯ ಉತ್ಸಾಹವು ತುಂಬುವ ಯೋಜನೆಗಳಿಲ್ಲದ ಅವೈಜ್ಞಾನಿಕವಾದ ಕೇಂದ್ರ ಬಜೆಟ್ ಇದು…
ಹೀಗೆಂದು ಟೀಕಿಸಿದವರು ಕಾಂಗ್ರೆಸ್ ಮುಖಂಡರೂ ಕಳೆದ ವಿಧಾನಸಭಾ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಹೆಚ್.ಸಿ.ಯೋಗೇಶ್.
2047 ರ ದೂರದೃಷ್ಟಿ ಇರುವ ಬಜೆಟ್ ಇದಾಗಿರುತ್ತದೆ ಎಂದು ಹೇಳಿದ್ದರು. ಆದರೆ, 2026 ರ ಈ ವರ್ಷಕ್ಕೆ ಯಾವುದೇ ರೀತಿಯ ಉತ್ತಮ ಯೋಜನೆಗಳು, ಉತ್ಸಾಹವೇ ಇಲ್ಲದಂತಹ ಬಜೆಟ್ ಇದಾಗಿದೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆಯನ್ನು ನೀಡುವ ಎರಡನೇ ರಾಜ್ಯ ಕರ್ನಾಟಕವಾಗಿದ್ದು ಆದರೆ ನಿರ್ಮಲ ಸೀತಾರಾಮನ್ ರವರಿಗೆ ಮತ ನೀಡಿದ ಶಾಸಕರುಗಳು ಇಂದು ಯೋಚಿಸಬೇಕಾಗಿದೆ ಎಂದಿದ್ದಾರೆ.
ರಾಜ್ಯಕ್ಕೆ ಯಾವುದೇ ಕೊಡುಗೆಯನ್ನು ನೀಡದೇ ಈ ಬಜೆಟ್ ಹಾಗೂ ನರೇಂದ್ರ ಮೋದಿ ಸರ್ಕಾರ ವಿಫಲಗೊಂಡಿದೆ ಎಂದು ಟೀಕಿಸಿದ್ದಾರೆ.


