ಇಸ್ಪೀಟ್ ನರಸಿಂಹ ಭೀಕರ ಮರ್ಡರ್ ಹಿಂದೆ; ಯಾಕೆ ಕೆಂಪಾಯ್ತು ಮತ್ತೆ ಶಿವಮೊಗ್ಗ?
*ನರಸಿಂಹ ಕೊಲೆ ಆರೋಪಿ ಮಧು ಕಾಲಿಗೆ ಪೊಲೀಸ್ ಫೈರಿಂಗ್*
*1. ಘಟನೆ ನಡೆದಿದ್ದು ಯಾವಾಗ:*
14-6-2026, ಬೆಳ್ಳಂಬೆಳಗ್ಗೆ
*2. ಆರೋಪಿ ಯಾರು:*
ಮಧು ಅಲಿಯಾಸ್ ಹನುಮಂತು – ರೌಡಿಶೀಟರ್ ಮತ್ತು ನರಸಿಂಹ ಕೊಲೆ ಪ್ರಕರಣದ ಪ್ರಮುಖ ಆರೋಪಿ
*3. ಫೈರಿಂಗ್ಗೆ ಕಾರಣ:*
ನರಸಿಂಹ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಕೋಟೆ ಠಾಣೆ ಪೊಲೀಸರು ಬಂಧಿಸಿದ್ದರು: ಅಂಬು ಅಲಿಯಾಸ್ ಅನಿಲ್, ಮಧು, ರವಿ, ಕತ್ತೆ ಕಾರ್ತಿಕ್, ಶಬರೀಶ್.
ಈ ಪೈಕಿ ಮಧುನನ್ನು ಮಹಜರು ನಡೆಸಲು ಕರೆದೊಯ್ದಿದ್ದಾಗ, ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ.
*4. ಏನಾಯಿತು:*
ಮಹಜರ್ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಮಧು ಅಲಿಯಾಸ್ ಹನುಮಂತು ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
*5. ಹಿನ್ನೆಲೆ:*
12-6-2026 ರಂದು ಶಿವಮೊಗ್ಗ ಗಾಂಧಿ ಬಜಾರ್ನ ಲಷ್ಕರ್ ಮೊಹಲ್ಲಾ ಬಳಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಇಸ್ಪೀಟ್ ಆಟವಾಡಿಸುತ್ತಿದ್ದ ರೌಡಿಶೀಟರ್ ನರಸಿಂಹನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು.



