*ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಜನ್ಮದಿನ ಜೋರು…ಬಲು ಜೋರು…* *ಸೆ.17ರ ನಾಳೆಯಿಂದ ಒಂಭತ್ತು ದಿನ ಎಲ್ಲೆಲ್ಲಿ ಯಾವ ಯಾವ ಕಾರ್ಯಕ್ರಮಗಳು ನಡೆಯಲಿವೆ?* *ಇಲ್ಲಿದೆ ಸಂಪೂರ್ಣ ವಿವರ…*

*ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಜನ್ಮದಿನ ಜೋರು…ಬಲು ಜೋರು…*

*ಸೆ.17ರ ನಾಳೆಯಿಂದ ಒಂಭತ್ತು ದಿನ ಎಲ್ಲೆಲ್ಲಿ ಯಾವ ಯಾವ ಕಾರ್ಯಕ್ರಮಗಳು ನಡೆಯಲಿವೆ?*

*ಇಲ್ಲಿದೆ ಸಂಪೂರ್ಣ ವಿವರ…*

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಸುಂದರೇಶ್ ಅವರ ಜನ್ಮದಿನದ ಪ್ರಯುಕ್ತ ಹೆಚ್ ಎಸ್ ಸುಂದರೇಶ್ ಅಭಿಮಾನಿ ಬಳಗ ವತಿಯಿಂದ 9 ದಿನಗಳ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ದಿನಾಂಕ:- 17 ಗುರುವಾರ
1. ರವೀಂದ್ರನಗರ ಗಣಪತಿ ದೇವಸ್ಥಾನ 10.00 ಗಂಟೆಗೆ
2. ಪಂಚಮುಖಿ ಆಂಜನೇಯ ದೇವಸ್ಥಾನ. 10.30 ಕ್ಕೆ
3. ಅಭಿಮಾನಿಗಳು, ಹಿತೈಷಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಸೂಡಾ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಿಣೆ ಮಾಡಲಾಗುವುದು. 11.00 ಗಂಟೆಯಿಂದ 2.00 ಮತ್ತು ಸಂಜೆ 5.00 ಗಂಟೆಯಿಂದ 8.00 ಗಂಟೆ.

ದಿನಾಂಕ:- 18 ಶುಕ್ರವಾರ ವಿವಿಧ ಅನಾಥಾಶ್ರಮ, ವೃದ್ಧಾಶ್ರಮ, ಅರೈಕೆ ಕೇಂದ್ರದಲ್ಲಿ ಹುಟ್ಟುಹಬ್ಬ ಆಚರಿಸಣೆ.
1.ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ಶಾಲೆ. ವಿಧ್ಯಾನಗರ.
2. ಶಾರದಾದೇವಿ ಅಂದರ ವಿಕಾಸ ಕೇಂದ್ರ. ಗೋಪಾಳ.
3. ಜೀವನ ಸಂಜೆ ರುದ್ರಶ್ರಮ ಗೋಪಾಳ.
4. ಹ್ಯಾಪಿ ಹೋಂ ಮಿಷನ್ ಕಾಂಪೌಂಡ್.

ದಿನಾಂಕ:- 19 ಶನಿವಾರ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕೂಮಾರ್ ಅವರ ಕಾರ್ಯಕ್ರಮ ತೀರ್ಥಹಳ್ಳಿ.

ದಿನಾಂಕ:- 20 ಭಾನುವಾರ ಹುಟ್ಟುಹಬ್ಬ ಪ್ರಯುಕ್ತ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ‘ಆರೋಗ್ಯೋತ್ಸವ’ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ.

ದಿನಾಂಕ:- 21 ಸೋಮವಾರ
1. ನೋವಾ ಚಾರಿಟ್ರಬಲ್ ಟ್ರಸ್ಟ್ ವೃದ್ದಾಶ್ರಮ ಸೋಮಿನಕೊಪ್ಪ.
2. ಗುಡ್ ಲಕ್ ಆರೈಕೆ ಕೇಂದ್ರ ಆಲ್ಕೋಳ.
3. ತಾಯಿ ಮನೆ ಮಕ್ಕಳ ಆರೈಕೆ ಕೇಂದ್ರ ಆಲ್ಕೋಳ.

ದಿನಾಂಕ:- 22, 23,24
ಶಿವಮೊಗ್ಗ ನಗರದ ವಿವಿಧ ವಾರ್ಡ ಗಳಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು 40 ಕಡೆ ಹುಟ್ಟುಹಬ್ಬ ಕಾರ್ಯಕ್ರಮ.

ದಿನಾಂಕ:- 25 ರಂದು ಗಾಂಧಿ ಬಜಾರ್ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನ ಮೆರವಣಿಗೆಯಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ.

ಆರೋಗ್ಯವೇ ಭಾಗ್ಯ.
ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರ
ಆರೋಗ್ಯೋತ್ಸವ 2026
ಹೆಚ್. ಎಸ್. ಸುಂದರೇಶ್ ರವರ ಹುಟ್ಟುಹಬ್ಬದ ಶುಭಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರ
ಭಾಗವಹಿಸುವ ಪ್ರಮುಖ ಆಸ್ಪತ್ರೆಗಳು ಮತ್ತು ಸಂಸ್ಥೆಗಳು

• ಸೆಕ್ಯೂರ್ ಹಾಸ್ಪಿಟಲ್ – ಸಾಮಾನ್ಯ ಆರೋಗ್ಯ ಮತ್ತು ತುರ್ತು ಚಿಕಿತ್ಸಾ ಸಲಹೆ
• ಚಂದ್ರಗಿರಿ ಹಾಸ್ಪಿಟಲ್ – ಸಮಗ್ರ ಆರೋಗ್ಯ ತಪಾಸಣೆ
• ಶಂಕರ ಕಣ್ಣಿನ ಆಸ್ಪತ್ರೆ – ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಸಲಹೆ
• ಮಾತೃ ವಾತ್ಸಲ್ಯ ಹಾಸ್ಪಿಟಲ್ – ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ವಿಭಾಗ
• ಆರಾಧನಾ ಆರ್ಥೋಪೆಡಿಕ್ ಸೆಂಟರ್ – ಮೂಳೆ, ಕೀಲು ಹಾಗೂ ಬೆನ್ನುಹುರಿ ಸಮಸ್ಯೆಗಳ ಪರಿಹಾರ
• ಸುಬ್ಬಯ್ಯ ಮೆಡಿಕಲ್ ಕಾಲೇಜು – ವಿಶೇಷ ತಜ್ಞ ವೈದ್ಯರಿಂದ ತಪಾಸಣೆ
• ಸುಬ್ಬಯ್ಯ ಡೆಂಟಲ್ ಕಾಲೇಜು – ಸಂಪೂರ್ಣ ದಂತ ಆರೋಗ್ಯ ತಪಾಸಣೆ ಮತ್ತು ಸಲಹೆ
• ಆಶಾ ಜ್ಯೋತಿ ಬ್ಲಡ್ ಬ್ಯಾಂಕ್ – ಉಚಿತ ರಕ್ತ ಗುಂಪು ತಪಾಸಣೆ ಮತ್ತು ರಕ್ತದಾನ ಶಿಬಿರ

ಶಿಬಿರದ ವಿವರಗಳು

• ದಿನಾಂಕ: 20.09.2026
• ಸಮಯ: ಬೆಳಿಗ್ಗೆ 10.00 ರಿಂದ ಸಂಜೆ 4.00 ರವರೆಗೆ
• ಸ್ಥಳ: ಆದಿಚುಂಚನಗಿರಿ ಸಮುದಾಯ ಭವನ.
ವಿಶೇಷ ಸೂಚನೆಗಳು

• ಶಿಬಿರದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಉಚಿತವಾಗಿ ವೈದ್ಯಕೀಯ ಸಲಹೆ ಮತ್ತು ತಪಾಸಣೆ ನೀಡಲಾಗುವುದು.
• ನಿಮ್ಮ ಹಳೆಯ ವೈದ್ಯಕೀಯ ದಾಖಲೆಗಳು (Medical Reports) ಇದ್ದಲ್ಲಿ ಜೊತೆಯಲ್ಲಿ ತರತಕ್ಕದ್ದು.

ಸರ್ವರೂ ಆಗಮಿಸಿ, ಉಚಿತ ಆರೋಗ್ಯ ಸೇವೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.