ಎಂ.ಶ್ರೀಕಾಂತ್ ರವರೀಗ ಅಲಂಕಾರ ಪುರುಷ!

ಎಂ.ಶ್ರೀಕಾಂತ್ ರವರೀಗ ಅಲಂಕಾರ ಪುರುಷ!

ಕಾಂಗ್ರೆಸ್ ನ ಪ್ರಮುಖ ನಾಯಕರಾದ ಎಂ.ಶ್ರೀಕಾಂತ್ ರವರು ಶಿವಮೊಗ್ಹದಲ್ಲಿ ಇಂದಿನಿಂದ ಆರಂಭವಾಗಿರುವ 5 ದಿನಗಳ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಗತ್ಪ್ರಸಿದ್ಧ ಜಾತ್ರೆಗೆ ಈವರೆಗಿನ ಇತಿಹಾಸದಲ್ಲಿ ಮಾಡಿರದ ವಿಶೇಷ ಅಲಂಕಾರ ಹಾಗೂ ಲೈಟಿಂಗ್ಸ್ ಮಾಡಿ ಗಮನ ಸೆಳೆಯುತ್ತಿದ್ದಾರೆ.

ಅದರ ಒಂದಿಷ್ಟು ಝಲಕುಗಳು ಇಲ್ಲಿವೆ…ದೇವಿಯ ದರ್ಶನಕ್ಕೆ ಗಾಂಧಿ ಬಜಾರಿಗೆ ಅಥವಾ ಕೋಟೆ ಬಳಿಯ ಮಾರಿಗದ್ದುಗೆಗೆ ಹೋದ ಭಕ್ತರೂ ಈ ಅಲಂಕಾರಗಳನ್ನು ಕಣ್ ತುಂಬಿಕೊಂಡು ಪ್ರಸನ್ನಚಿತ್ತರಾಗಬಹುದು.

ಅಷ್ಟರ ಮಟ್ಟಿಗೆ ಎಂ.ಶ್ರೀಕಾಂತ್ ರವರ ದೇವಿಯ ಆವಾಸ ಅಲಂಕಾರ ಗಮನ ಸೆಳೆಯುತ್ತಿದೆ ಮತ್ತು ಭಕ್ತರ ಹೊಗಳಿಕೆಗೆ ಪಾತ್ರವಾಗುತ್ತಿದೆ.

ಸಮಾಜ ಸೇವಕರೂ ಆಗಿರುವ ಎಂ.ಶ್ರೀಕಾಂತ್ ರವರೀಗ ಅಲಂಕಾರ ಪುರುಷ ಆಗಿಬಿಟ್ಟಿದ್ದಾರೆ!