ವಿಚ್ಛೇದಿತ ಹೆಂಡತಿ- ಅತ್ತೆಗೆ ಚಾಕು ಇರಿದು ಕೊಲೆಗೆತ್ನಿಸಿದ ಆರೋಪಿಗೆ ಎರಡು ವರ್ಷಗಳ ಶಿಕ್ಷೆ*
*ವಿಚ್ಛೇದಿತ ಹೆಂಡತಿ- ಅತ್ತೆಗೆ ಚಾಕು ಇರಿದು ಕೊಲೆಗೆತ್ನಿಸಿದ ಆರೋಪಿಗೆ ಎರಡು ವರ್ಷಗಳ ಶಿಕ್ಷೆ*
ವಿಚ್ಛೇದಿತ ಪತ್ನಿಗೆ ಹಾಗೂ ಅವಳೊಂದಿಗಿದ್ದ ಮಕ್ಕಳು ಹಾಗೂ ಅತ್ತೆಗೆ ಹಿಂಸಿಸಿ ಚಾಕುವಿನಿಂದ ಕೊಲೆ ಮಾಡಲೆತ್ನಿಸಿದ ಶಿವಮೊಗ್ಗ ವಿದ್ಯಾನಗರದ ವಾಸಿ ರಾಘವೇಂದ್ರನಿಗೆ ನ್ಯಾಯಾಲಯ 2 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ., ದಂಡ ವಿಧಿಸಿ ಆದೇಶಿಸಿದೆ.
*ರಾಘವೇಂದ್ರ, 38 ವರ್ಷ, ವಿಧ್ಯಾನಗರ ಶಿವಮೊಗ್ಗ ಟೌನ್* ಈತನು, ತನ್ನ ಹೆಂಡತಿಯೊಂದಿಗೆ *ವಿಚ್ಛೇದನ ಮಾಡಿಕೊಂಡಿದ್ದು,* ಇಬ್ಬರೂ ಪ್ರತ್ಯೇಕವಾಗಿ ವಾಸವಿರುತ್ತಾರೆ. ಆದರೆ *ಆರೋಪಿ ರಾಘವೇಂದ್ರನು ತನ್ನ ಹೆಂಡತಿಯ* ಮನೆಗೆ ಹೋಗಿ ಹೆಂಡತಿ ಮಕ್ಕಳು ಮತ್ತು ಆಕೆಯ ತಾಯಿಯ ಜೊತೆಗೆ ಆಗ್ಗಾಗ್ಗೆ ಗಲಾಟೆ ಮಾಡುತ್ತಿದ್ದು, ಹಳೆ ದ್ವೇಶದ ಹಿನ್ನೆಲೆಯಲ್ಲಿ ದಿನಾಂಕಃ 02-06-2017 ರಂದು *ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗುಡಿ* ಯಲ್ಲಿರುವ ತನ್ನ ಹೆಂಡತಿಯ ಮೆನಗೆ ಹೋಗಿ ಆಕೆ ಮತ್ತು ಆಕೆಯ ತಾಯಿಯನ್ನು *ಕೊಲೆ ಮಾಡುವ ಉದ್ದೇಶದಿಂದ ಚಾಕು ವಿನಿಂದ* ಮಾರಣಾಮತಿಕ ಹಲ್ಲೆ ಮಾಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ *ಗುನ್ನೆ ಸಂಖ್ಯೆ 073/2017 ಕಲಂ 504, 354, 307 ಕಾಯ್ದೆ* ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಇಮ್ರಾನ್ ಬೇಗ್, ಪಿಎಸ್ಐ* (ಹಾಲಿ ಪೊಲೀಸ್ ನಿರೀಕ್ಷಕರು ತೀರ್ಥಹಳ್ಳಿ ಪೊಲೀಸ್ ಠಾಣೆ) ರವರು ಪ್ರಕರಣದ *ತನಿಖೆ ಪೂರೈಸಿ* ಆರೋಪಿತನ ವಿರುದ್ಧ *ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು* ಸಲ್ಲಿಸಿದ್ದರು.
ಘನ ನ್ಯಾಯಾಲಯದಲ್ಲಿ *ಸರ್ಕಾರದ ಪರವಾಗಿ ಶಾಂತರಾಜ್, ಸರ್ಕಾರಿ ಅಭಿಯೋಜಕರವರು,* ವಾದ ಮಂಡಿಸಿದ್ದು, *ಘನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ* ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಢ ಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ಯಶವಂತ್ ಕುಮಾರ್ ರವರು ಇಂದು ಪ್ರಕರಣದ ಆರೋಪಿ *ರಾಘವೇಂದ್ರ, ಶಿವಮೊಗ್ಗ ಜಿಲ್ಲೆ* ಈತನಿಗೆ *2 ವರ್ಷ ಸಾಧಾ ಕಾರಾಗೃಹವಾಸ ಶಿಕ್ಷೆ ಮತ್ತು ರೂ 20,000/- ದಂಡ* ವಿಧಿಸಿ ಆದೇಶಿಸಿದ್ದಾರೆ.