ಎ.ಆರ್.ಅವಿನಾಶ್, ವ್ಯವಸ್ಥಾಪಕ ನಿರ್ದೇಶಕರು, ದೇಶ್ ನೀಟ್ ಅಕಾಡೆಮಿ, ಶಿವಮೊಗ್ಗ ಪತ್ರಿಕಾಗೋಷ್ಠಿ ಈ ವರ್ಷ ದೇಶ್ ನೀಟ್ ಅಕಾಡೆಮಿಯಿಂದ 45 ಜನ ವೈದ್ಯರ ಕೊಡುಗೆ; ನೀಟ್ ನಲ್ಲಿ ಅಭೂತಪೂರ್ವ ಸಾಧನೆ
ಎ.ಆರ್.ಅವಿನಾಶ್, ವ್ಯವಸ್ಥಾಪಕ ನಿರ್ದೇಶಕರು, ದೇಶ್ ನೀಟ್ ಅಕಾಡೆಮಿ, ಶಿವಮೊಗ್ಗ ಪತ್ರಿಕಾಗೋಷ್ಠಿ
ನೀಟ್ ತರಬೇತಿ ತಪಸ್ಸು ಇದ್ದಂಗೆ. ತಪಸ್ಸಿನ ಜಾಗವಾಗಿ ದೇಶ್ ನೀಟ್ ಅಕಾಡೆಮಿ ನಿರ್ಮಿಸಿದ್ದೇವೆ.
130 ಜನ ಅಭ್ಯರ್ಥಿಗಳು ಕಳೆದ ವರ್ಷ ಪ್ರವೇಶ ಪಡೆದಿದ್ದು, 35 ಜನ ಸರ್ಕಾರಿ ಕೋಟಾದಲ್ಲಿ ಅಡ್ಮಿಷನ್ ಆಗಲಿದ್ದಾರೆ. ಒಟ್ಟು 45 ಜನ ಡಾಕ್ಟರ್ ಗಳಾಗಿ ಕ್ಯಾಂಪಸ್ ನಿಂದ ಹೊರಗೆ ಹೋಗ್ತಿದಾರೆ. ಇದು ದೇಶ್ ನೀಟ್ ಅಕಾಡೆಮಿಯ ದೊಡ್ಡ ಸಾಧನೆ ಎಂದು ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಎ.ಆರ್.ಅವಿನಾಶ್ ಹೇಳಿದರು.
ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಆಲ್ ಇಂಡಿಯಾ ನೀಟ್ ನಲ್ಲಿ 686 ಅಂಕ ಪಡೆದವರೇ ಹೆಚ್ಚು. ಇದರಲ್ಲಿ ದೇಶ್ ನೀಟ್ ಅಕಾಡೆಮಿಯ ಸಕ್ಸಸ್ ರೇಟ್ ಶೇ.30 ರಷ್ಟಿದೆ. ಮುಂದಿನ ದಿನಗಳಲ್ಲಿ ಶೇ.50 ರ಼ಷ್ಟು ಫಲಿತಾಂಶ ಖಂಡಿತ ಕೊಡ್ತೇನೆ. ನಿರಾಳವಾಗಿ ನಮ್ಮ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಆ ವ್ಯವಸ್ಥೆ ನಿರ್ಮಿಸುವುದು ನನ್ನ ವಿಶೇಷ ಪ್ರಯತ್ನವಾಗಲಿದೆ ಎಂದರು.
ಕರ್ನಾಟಕದಲ್ಲಿ ನೀಟ್ ಗಾಗಿ 900 ಪ್ರವೇಶಗಳನ್ನು ಹೆಚ್ಚಿಸಲಾಗಿದೆ. ಈ ಬಾರಿಯ ನೀಟ್ ಪರೀಕ್ಷೆಯಲ್ಲಿ 1,17,781 ತೇರ್ಗಡೆಗೊಂಡಿದ್ದಾರೆ.25 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ಅದರಲ್ಲಿ ನಮ್ಮ ಅಕಾಡೆಮಿಯ ಸಾಧನೆ ನಿಮ್ಮ ಮುಂದಿದೆ ಎಂದು ವಿವರಿಸಿದರು.
ಕೊಡಗು ಮೂಲದ, ದೇಶ್ ನೀಟ್ ಅಕಾಡೆಮಿಯ ವಿದ್ಯಾರ್ಥಿ ದಿಶೀಲ್ ಡಿ.ಕೆ ಮಾತನಾಡಿ,
ಡಾಕ್ಟರ್ ಆಗಿ ನೋಡಬೇಕೆಂಬ ತಂದೆಯ ಆಸೆ ಈಗ ಈಡೇರುತ್ತಿದೆ. ಅಪ್ಪ ಆಟೋ ಡ್ರೈವರ್ , ತಾಯಿ ಅಂಗನವಾಡಿ ಕಾರ್ಯಕರ್ತೆ.ಕಷ್ಟಪಟ್ಟು ಡಾಕ್ಟರೇ ಆಗಬೇಕೆಂದು ಓದಿಸುತ್ತಿದ್ದಾರೆ. ಹಿಂದೆ ಓದಿದ ಅಕಾಡೆಮಿಯಲ್ಲಿ ಹಣವೂ ಹಾಳಾಯ್ತು.
ಎನ್ಸಿ ಆರ್ ಟಿ ಓದ್ಬೇಕು. ಹೇಗೆ ಓದ್ಬೇಕು ಅಂತ ಗೊತ್ತಿರ್ಲಿಲ್ಲ. ಆದರೂ ಕೊನೆಯದಾಗಿ ದೇಶ್ ನೀಟ್ ಆಕಾಡೆಮಿಗೆ ಬಂದೆ. ತಾಯಿಯ ಕಣ್ಣೀರಿನ ಕಥೆ ಕೇಳಿ ಅವಿನಾಶ್ ಸರ್ ನನಗೆ ಕಡಿಮೆ ಶುಲ್ಕದಲ್ಲಿ ಸೀಟ್ ಕೊಟ್ಟರು. ಇಂತಹ ಎಂಡಿಯನ್ನು ಯಾವ ಆಕಾಡೆಮಿಯಲ್ಲೂ ನಾನು ನೋಡಿಲ್ಲ. ನನಗೆ
450 ಅಂಕ ಬರುತ್ತೆ. ನನ್ನ ತಂದೆ ತುಂಬ ಸಂತಸ ಪಟ್ಟರು ಎಂದರು
ಪಿಯು ಮಕ್ಕಳಿಗೆ ಟ್ಯೂಷನ್ 50% ಶುಲ್ಕ ಕಡಿಮೆ ಮಾಡ್ತೇನೆ.300ರಿಂದ 350 ಅಂಕ ಪಡೆದ ಮಕ್ಕಳಿಗೆ 30% ಶುಲ್ಕ ಕಡಿಮೆ ಮಾಡಲು ನಿರ್ಧರಿಸುತ್ತೇನೆ.
ಅತೀ ಬಡ ವಿದ್ಯಾರ್ಥಿಗಳ ಪೋಷಕರಿಗೆ ಹಾಸ್ಟೆಲ್ ಶುಲ್ಕದಲ್ಲಿ ಕಡಿಮೆ ಮಾಡುವುದು ಖಚಿತ ಎಂದು ಅವಿನಾಶ್ ವಿವರಿಸಿದರು.