ವಾಮಾಚಾರ…ಚಲಿಸಿದ ನಿಂಬೆ ಹಣ್ಣು, ಬೆಲ್ಲ…ಹೌಹಾರಿದ ರವಿ ಕುಮಾರ್ ಮಗಳು ತುಳಸಿ…ಏನಿದು ಕಥೆ?

ವಾಮಾಚಾರ…ಚಲಿಸಿದ ನಿಂಬೆ ಹಣ್ಣು, ಬೆಲ್ಲ…ಹೌಹಾರಿದ ರವಿ ಕುಮಾರ್ ಮಗಳು ತುಳಸಿ…

ಏನಿದು ಕಥೆ?

ದ್ವಿಚಕ್ರ ವಾಹನದಲ್ಲಿ ಬಂದ ಪುರುಷ ಮತ್ತು ಮಹಿಳೆ ವಾಮಾಚಾರ ಮಾಡಿದ ಬೆಲ್ಲ, ನಿಂಬೆಹಣ್ಣು ಎಸೆದು ಕಣ್ಮರೆಯಾಗುತ್ತಾರೆ. ಆಗ ಯುವತಿಯಬ್ಬಳು ಮನೆಯಿಂದ ಹೊರಕ್ಕೆ ಬರುತ್ತಾಳೆ. ಇದ್ದಕ್ಕಿದ್ದ ಹಾಗೆ ವಾಮಾಚಾರದ ನಿಂಬೆ ಹಣ್ಣು ಮತ್ತು ಬೆಲ್ಲ ಚಲಿಸುವುದು ಕಂಡಿದೆ!

ಇದು ನಡೆದಿರುವುದು ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಶಿಪುರದಲ್ಲಿ. ಕಾಶಿಪುರದ ನಿವಾಸಿ ರವಿಕುಮಾರ್ ಹನುಮಂತಪ್ಪರವರ ಮನೆಯ ಮುಂದೆ.

ರವಿಕುಮಾರ್ ಮನೆಯ ಮುಂದೆ ವಾಮಾಚಾರ ಮಾಡಿ ದ್ವಿಚಕ್ರ ವಾಹನದಲ್ಲಿ ನಿಂಬೆಹಣ್ಣು, ಬೆಲ್ಲ ಎಸೆದು ಹೋಗಿದ್ದಾರೆ. ರವಿಕುಮಾರ್ ಮಗಳು ತುಳಸಿ ಪೂಜೆ ಮಾಡುವ ಹೊತ್ತಲ್ಲಿ ಈ ವಾಮಾಚಾರದ ಲಿಂಬೆಹಣ್ಣು, ಬೆಲ್ಲ ಚಲಿಸಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

ವಾಮಾಚಾರ ಮಾಡಿದ ಪೊಟ್ಟಣ ಚಲಿಸಿದಗದನ್ನೇ ಆಧಾರವಾಗಿಟ್ಟುಕೊಂಡು ಆತಂಕಗೊಂಡ ಕುಟುಂಬ ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.

ಪೊಲೀಸರು ಮುಂದೇನು ಮಾಡಲಿದ್ದಾರೆ? ವಾಮಾಚಾರ ಮಾಡಿದ ಪೊಟ್ಟಣ ಎಸೆದು ಹೋದ ಆ ಪುರುಷ ಮತ್ತು ಮಹಿಳೆಯನ್ನು ಬಂಧಿಸುತ್ತಾರಾ? ಕಾದು ನೋಡಬೇಕಿದೆ.