ಪೀರ್ ಪಾಷ- ಮಂಜುನಾಥ್ ರಿಗೆ ಎಕ್ಸಲೆನ್ಸ್ ಅವಾರ್ಡ್;* *ಇಂದು ಸಂಜೆ ಶಿವಮೊಗ್ಗದ ಕಂಟ್ರಿಕ್ಲಬ್ ನಲ್ಲಿ ಪ್ರಶಸ್ತಿ ಪ್ರದಾನ*

*ಪೀರ್ ಪಾಷ- ಮಂಜುನಾಥ್ ರಿಗೆ ಎಕ್ಸಲೆನ್ಸ್ ಅವಾರ್ಡ್;*

*ಇಂದು ಸಂಜೆ ಶಿವಮೊಗ್ಗದ ಕಂಟ್ರಿಕ್ಲಬ್ ನಲ್ಲಿ ಪ್ರಶಸ್ತಿ ಪ್ರದಾನ*

ನಿವೃತ್ತ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಸಿಗಂದೂರು ಕೇಬಲ್ ಸ್ಟೇ ಸೇತುವೆಯ ವಿಶೇಷ ಅಧಿಕಾರಿ ಪೀರ್ ಪಾಷರವರಿಗೆ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪಿಎಆರ್ ಎಕ್ಸಲೆನ್ಸ್ ಪ್ರಶಸ್ತಿ ಘೋಷಿಸಿದೆ.

ಪೀರ್ ಪಾಷರವರ ಜೊತೆ ಹಿರಿಯ ಗುತ್ತಿಗೆದಾರ ಎನ್.ಮಂಜುನಾಥ್ ರವರಿಗೂ ಈ ಪ್ರಶಸ್ತಿ ಲಭಿಸಿದ್ದು, ಫೆಬ್ರವರಿ 28 ರ ಇಂದು ಸಂಜೆ 6.30ಕ್ಕೆ ಶಿವಮೊಗ್ಗದ ಕಂಟ್ರಿಕ್ಲಬ್ ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಶಿವಮೊಗ್ಗ ಸೆಂಟರ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಎಂ.ಆರ್. ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿಡಬ್ಲೂಡಿ ಸೂಪರಿಡೆಂಟ್ ಇಂಜಿನಿಯರ್ ಎಸ್.ಗಣೇಶ್, ಅಸೋಸಿಯೇಷನ್ ನ ರಾಜ್ಯಾಧ್ಯಕ್ಷ ಶ್ರೀನಿವಾಸ ರೆಡ್ಡಿಯವರು ಆಗಮಿಸುವರು ಎಂದು ಕಾರ್ಯದರ್ಶಿ ಎಸ್.ಭರತ್ ತಿಳಿಸಿದ್ದಾರೆ.