ನಕಲಿ ಚಿನ್ನ ಅಡಮಾನದ 63 ಕೋಟಿ ರೂ.,ಗಳ ಅಕ್ರಮ ಹಗರಣ;* *10 ವರ್ಷಗಳ ನಂತರ ಮತ್ತೆ ಇಡಿ ದಾಳಿ* *ಮ್ಯಾನೇಜರ್ ಆಗಿದ್ದ ಶೋಭಾ- ಚಾಲಕನಾಗಿದ್ದ ಶಿವಕುಮಾರ್ ಮನೆಗಳ ಮೇಲೆ ದಾಳಿ*

*ನಕಲಿ ಚಿನ್ನ ಅಡಮಾನದ 63 ಕೋಟಿ ರೂ.,ಗಳ ಅಕ್ರಮ ಹಗರಣ;*

*10 ವರ್ಷಗಳ ನಂತರ ಮತ್ತೆ ಇಡಿ ದಾಳಿ*

*ಮ್ಯಾನೇಜರ್ ಆಗಿದ್ದ ಶೋಭಾ- ಚಾಲಕನಾಗಿದ್ದ ಶಿವಕುಮಾರ್ ಮನೆಗಳ ಮೇಲೆ ದಾಳಿ*

ನಕಲಿ ಚಿನ್ನ ಅಡಮಾನ ಪ್ರಕರಣ ಶಿವಮೊಗ್ಗದಲ್ಲಿ ಮತ್ತೆ ಸದ್ದು ಮಾಡಿದೆ.

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಡಿಸಿಸಿ ಬ್ಯಾಂಕ್)ನಲ್ಲಿ 2014 ರಲ್ಲಿ ನಡೆದಿದ್ದ ನಕಲಿ ಚಿನ್ನ ಅಡಮಾನ ಸಾಲ ಪ್ರಕರಣಕ್ಕೆ ಭರ್ತಿ ಹತ್ತು ವರ್ಷ ತುಂಬಿದ ಈ ಸಂದರ್ಭದಲ್ಲಿ ಇ.ಡಿ. ಅಧಿಕಾರಿಗಳು ಶಿವಮೊಗ್ಗದ ವಿವಿಧೆಡೆ ದಾಳಿ ಮಾಡಿದ್ದಾರೆ.

ಡಿಸಿಸಿ ಬ್ಯಾಂಕ್ ನಗರ ಶಾಖೆ ಮ್ಯಾನೇಜರ್ ಆಗಿದ್ದ ಶೋಭಾ, ಬ್ಯಾಂಕಿನ ಅಧ್ಯಕ್ಷರ ಕಾರು ಚಾಲಕನಾಗಿದ್ದ ಶಿವಕುಮಾರ್ ರವರ ಶಿವಮೊಗ್ಗದ ಮನೆಗಳ ಮೇಲೆ ಇ ಡಿ ದಾಳಿ ಮಾಡಿದೆ.

2014ರ ಈ ಪ್ರಕರಣ ಸಂಬಂಧ 2021ರಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಒಟ್ಟು 63 ಕೋಟಿ ರೂ.,ಗಳ ಹಗರಣ ಇದಾಗಿತ್ತು. ಹಗರಣದ ವೇಳೆ ನಗರ ಶಾಖೆ ಮ್ಯಾನೇಜರ್ ಆಗಿದ್ದಾಕೆ ಶೋಭಾ. ಪ್ರಕರಣದ ತನಿಖೆ ಮುಂದುವರೆಸಿದ್ದ ಇಡಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಆರ್.ಎಂ.ರಿಗೆ ಸಮನ್ಸ್ ಜಾರಿಗೊಳಿಸಿತ್ತು.

ಈ ಸಮನ್ಸ್ ವಿರುದ್ಧ ಮಂಜುನಾಥ ಗೌಡರು ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಕೋರಿದ್ದರು. ಆದರೆ, ಅರ್ಜಿ ವಜಾಗೊಂಡಿತ್ತು.

ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಕಾಮಾಕ್ಷಿ ಬೀದಿಯಲ್ಲಿರು ಶಿವಕುಮಾರ್ ಮನೆ, ಗೋಪಾಲಗೌಡ ಬಡಾವಣೆಯಲ್ಲಿರುವ ಶೋಭಾ ಮನೆ ಮೇಲೆ ಇದೀಗ ಇಡಿ ದಾಳಿ ಮಾಡಿದೆ.