ಹೀಗೆ ನಾ ಭಾಷಣ ಮಾಡೋದು ಮಹಾ ವಿನಾಶದ ಸೂಚನೆಯೋ ಅಥವಾ ಜಗದೋದ್ಧಾರಕ ಮುನ್ಸೂಚನೆಯೋ…*

*ಹೀಗೆ ನಾ ಭಾಷಣ ಮಾಡೋದು ಮಹಾ ವಿನಾಶದ ಸೂಚನೆಯೋ ಅಥವಾ ಜಗದೋದ್ಧಾರಕ ಮುನ್ಸೂಚನೆಯೋ…*

ಏ.14- ಒಂದು ಕಡೆ ಭಾರತದ ಬೆಳಕು ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ…ಇನ್ನೊಂದು ಕಡೆ ಪ್ರೆಸ್ ಟ್ರಸ್ಟ್ ಶಿವಮೊಗ್ಗದ ಪ್ರಶಸ್ತಿ ಪ್ರದಾನ ಸಮಾರಂಭದ ಸಂಭ್ರಮ…ಆ ಸಂಭ್ರಮದೊಳಗೆ ಮತ್ತೊಂದು ಸಂಭ್ರಮ ವಿತ್ತು- ನನ್ನ ಪ್ರೀತಿಯ ಲೇಖಕ ನಾಡೋಜ ಕುಂ.ವೀರಭದ್ರಪ್ಪ ಮತ್ತು ಬಹಳ ಹತ್ತಿರವಿದ್ದೂ ದೂರ ಇರುವ ರಾಜಕಾರಣಿ ಬಿ.ಎಲ್.ಶಂಕರ್ ರವರ ಜೊತೆಗಿದ್ದು ಅರ್ಥಪೂರ್ಣ ಕ್ಷಣಗಳನ್ನು ಕಳೆಯುವುದು…

ಕುಂವೀ ಬಗ್ಗೆ ಪರಿಚಯಿಸುವ ಜವಾಬ್ದಾರಿ ನನಗೆ ಸಿಕ್ಕಿತ್ತು! ಬಹು ತಯಾರಿ ಮಾಡಿಕೊಂಡೇ ಹೋಗಿದ್ದೆ…ಮಾತಾಡಿದೆ- ಅಷ್ಟರಲ್ಲಿ ಸಮಯದ ಅಭಾವವಿದೆ ಎಂಬ ಪ್ರೀತಿಪಾತ್ರರ ಚೀಟಿ ಬಂತು. ಪರಿಚಯ ಭಾಷಣಕ್ಕೆ ಇಡೀ ಜಗತ್ತಲ್ಲಿ ಈ ಥರದ ಚೀಟಿ ಬಂದಿದ್ದು ನಿನಗೆ ಮಾತ್ರ…ವಿಶ್ವದಾಖಲೆ ಮಾಡಿದೀ ಅಂತ ಛೇಡಿಸಿದರು ಮಿತ್ರರು!

ನಾನ್ಯಾವಾಗಿಂದ ಹೀಗೆಲ್ಲ ತಲೆ ತಿನ್ನೋಕೆ ಆರಂಭಿಸಿದೆನೋ ಗೊತ್ತಿಲ್ಲ…ಮಹಾ ಮೌನಿಯಾದ ನಾನು ಹೀಗೆಲ್ಲ ಕೊರೆಯುವ ಮಟ್ಟಕ್ಕೆ ಭಾಷಣಕ್ಕಿಳಿದಿರೋದು ಮಹಾ ಪ್ರಳಯದ ಸೂಚನೆಯೋ ಅಥವಾ ಜಗದೋದ್ಧಾರದ ಮುನ್ಸೂಚನೆಯೋ…ನೀವೇ ಹೇಳಬೇಕು…

– *ಶಿ.ಜು.ಪಾಶ*
8050112067
(15/4/2025)