*ಮದ್ಯಪಾನ ಚಟ- ತಾಯಿಯೊಂದಿಗೆ ಜಗಳ;* *ನೇಣಿಗೆ ಕೊರಳೊಡ್ಡಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ 112 ವಾಹನದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವಿನಯ್ ಕುಮಾರ್ ಮತ್ತು ಸಂತೋಷ್ ಕುಮಾರ್*

*ಮದ್ಯಪಾನ ಚಟ- ತಾಯಿಯೊಂದಿಗೆ ಜಗಳ;*

*ನೇಣಿಗೆ ಕೊರಳೊಡ್ಡಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ 112 ವಾಹನದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವಿನಯ್ ಕುಮಾರ್ ಮತ್ತು ಸಂತೋಷ್ ಕುಮಾರ್*

ತಾಯಿಯೊಂದಿಗೆ ಜಗಳ ಮಾಡಿಕೊಂಡ ಯುವಕ ಮನೆ ಬಾಗಿಲು ಹಾಕಿಕೊಂಡು ನೇಣಿಗೆ ಶರಣಾಗಲು ಪ್ರಯತ್ನಿಸುತ್ತಿದ್ದಾಗ ಇ ಆರ್ ಎಸ್ ಎಸ್-112 ಗೆ ಬಂದ ಮಾಹಿತಿ ಆಧರಿಸಿ ಪೊಲೀಸರು ಜೀವ ಉಳಿಸಿದ ಘಟನೆ ಭದ್ರಾವತಿ ವೀರಾಪುರ ಗ್ರಾಮದಲ್ಲಿ ನಡೆದಿದೆ.

ಮೇ.7ರಂದು ವೀರಾಪುರದ ಮಹಿಳೆಯೊಬ್ಬರು ಮನೆ ಬಾಗಿಲು ಹಾಕಿಕೊಂಡು ಮಗ ನೇಣು ಹಾಕಿಕೊಳ್ಳುತ್ತಿದ್ದಾನೆಂದು ತುರ್ತು ಸಹಾಯವಾಣಿಗೆ ಫೋನ್ ಮಾಡಿದ್ದರು.

ಕೂಡಲೇ ವಾಹನದ ಅಧಿಕಾರಿಗಳಾದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವಿನಯ್ ಕುಮಾರ್ ಮತ್ತು ಸಂತೋಷ್ ಕುಮಾರ್ ಸ್ಥಳಕ್ಕೆ ಧಾವಿಸಿ ಬಂದು, ಮನೆ ಬಾಗಿಲು ತೆಗೆಸಿ ನೇಣಿಗೆ ಶರಣಾಗಲು ಹೊರಟಿದ್ದ ಯುವಕನನ್ನು ಕಾಪಾಡಿದ್ದಾರೆ.

ಈ ಯುವಕ ಚಾಲಕನಾಗಿದ್ದು, ಕೆಲ ದಿನಗಳಿಂದ ಕೆಲಸವಿಲ್ಲದೇ ಮದ್ಯಪಾನದ ಚಟಕ್ಕೆ ಬಿದ್ದಿದ್ದ. ತನ್ನ ತಾಯಿ ಹಣ ನೀಡದಿದ್ದಾಗ ಜಗಳ ಮಾಡಿಕೊಂಡು ನೇಣಿಗೆ ಶರಣಾಗಲು ಹೊರಟಿದ್ದ.

ನಿಷ್ಠೆಯಿಂದ ಮಾನವೀಯತೆ ಮೆರೆದ ಇಬ್ಬರು ಪೊಲೀಸರಿಗೂ ಎಸ್ ಪಿ ಮಿಥುನ್ ಕುಮಾರ್ ಪ್ರಶಂಸಿಸಿ ಅಭಿನಂದಿಸಿದ್ದಾರೆ.