ವಿಶೇಷ ವರದಿ- ಭಾಗ-1* *ಆಹಾರ ಮತ್ತು ನಾಗರೀಕ ಇಲಾಖೆಯಲ್ಲಿ ಓಡಾಡುತ್ತಿವೆ ಹೆಗ್ಗಣ?* *ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಮಾರುತಿ ದರ್ಬಾರ್!* *ಜಿಲ್ಲಾ ವ್ಯವಸ್ಥಾಪಕ ಮಹೇಂದ್ರ ಮಾರುತಿ ಕೌಟುಂಬಿಕ ಪ್ರೇಮಕ್ಕೆ ಅಡೆತಡೆ ಒಡ್ಡದೇ ಫಿದಾ ಆಗುತ್ತಿದ್ದಾರಾ?*
*ವಿಶೇಷ ವರದಿ- ಭಾಗ-1*
*ಆಹಾರ ಮತ್ತು ನಾಗರೀಕ ಇಲಾಖೆಯಲ್ಲಿ ಓಡಾಡುತ್ತಿವೆ ಹೆಗ್ಗಣ?*
*ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಮಾರುತಿ ದರ್ಬಾರ್!*
*ಜಿಲ್ಲಾ ವ್ಯವಸ್ಥಾಪಕ ಮಹೇಂದ್ರ ಮಾರುತಿ ಕೌಟುಂಬಿಕ ಪ್ರೇಮಕ್ಕೆ ಅಡೆತಡೆ ಒಡ್ಡದೇ ಫಿದಾ ಆಗುತ್ತಿದ್ದಾರಾ?*

ಶಿವಮೊಗ್ಗ ಜಿಲ್ಲೆಯ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಮಾರುತಿ ದರ್ಬಾರ್ ಆರಂಭವಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಸಗಟು ಮಳಿಗೆಯ ವ್ಯವಸ್ಥಾಪಕರಾಗಿದ್ದ ಕಿರಿಯ ಸಹಾಯಕ ಎ.ಮಾರುತಿ ಕಳೆದ ಮೇ 19 ರಂದು ಶಿಕಾರಿಪುರ ಸಗಟು ಮಳಿಗೆ ಮತ್ತು ಹೆಚ್ಚುವರಿಯಾಗಿ ತೀರ್ಥಹಳ್ಳಿ ಸಗಟು ಮಳಿಗೆಯ ವ್ಯವಸ್ಥಾಪಕರನ್ನಾಗಿ ನಿಯೋಜಿಸಿ ಆದೇಶಿಸಲಾಗಿತ್ತು.
ಇಲ್ಲಿಗೆ ನಿಯೋಜನೆಯಾಗಿದ್ದೇ ತಡ ಎ.ಮಾರುತಿಯವರು ತಮ್ಮ ಇಲಾಖೆಯ ಉಗ್ರಾಣಗಳನ್ನು ತಮ್ಮ ಸಂಬಂಧಿಕರಿಗೆ ವಹಿಸಿಕೊಡುತ್ತಿದ್ದಾರಾ?
ಜಿಲ್ಲಾ ವ್ಯವಸ್ಥಾಪಕ ಮಹೇಂದ್ರರವರ ಗಮನದಲ್ಲಿ ಮಾರುತಿಯವರ ಅನಧಿಕೃತ ಹೆಜ್ಜೆ ಗುರುತುಗಳು ಇದ್ದರೂ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಅವರು ಮುಂದಾಗುತ್ತಿಲ್ಲ. ಮೊದಲೇ ಆಹಾರದ ಸರಬರಾಜು ಇಲಾಖೆಯಾಗಿರುವುದರಿಂದ ಸ್ವಲ್ಪ ಎಚ್ಚರ ತಪ್ಪಿದರೂ ಇಲ್ಲಿ ಹೆಗ್ಗಣಗಳು ಕಾಣಿಸಿಕೊಳ್ಳುವ ಸತ್ಯ ಜಿಲ್ಲಾ ಮ್ಯಾನೇಜರ್ ಮಹೇಂದ್ರರವರಿಗೇನೂ ಗೊತ್ತಿಲ್ಲ ಅಂತೇನಿಲ್ಲ.
ಕೆ.ಆರ್.ನಾಗರಾಜ್ ನಿವೃತ್ತಿಯ ಸಂದರ್ಭದಲ್ಲಿ ನಡೆದಿದ್ದೇನು? ಅವರ ನಿವೃತ್ತಿಯ ನಂತರ ಹೆಗ್ಗಣಗಳು ಹೇಗೆಲ್ಲ ಓಡಾಡಿ ಹೆಜ್ಜೆ ಗುರುತು ಮೂಡಿಸಿವೆ?- ಈ ಬಗ್ಗೆ ಈಗಾಗಲೇ ಪತ್ರಿಕೆಗೆ ದಾಖಲೆಗಳು, ಮಾಹಿತಿಗಳು ದಕ್ಕಿವೆ.
ಈ ಬಗ್ಗೆ ಏನೂ ಗೊತ್ತಿಲ್ಲದಂತೆ ನಟನೆಗಿಳಿದಿರುವ ಡಿಸ್ಟ್ರಿಕ್ಟ್ ಮ್ಯಾನೇಜರ್ ಮಹೇಂದ್ರರಿಗೆ ಒಂದಿಷ್ಟು ಮಾಹಿತಿ ನೀಡಿ ನೋಡಿದಾಗ ಆಗಿದ್ದೇ ಬೇರೆ! ಯಪರಾ ತಪರಾ ನೋಟಿಸ್ ನೀಡುವ ಮೂಲಕ ಮೈಗೆ ಎಣ್ಣೆ ಹಚ್ಚಿಕೊಳ್ಳಲು ಹೊರಟಿದ್ದಾರೆ ಮಹೇಂದ್ರ!
ಆಗಿರುವ ಅನಾಚಾರದ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕಾದ ಮಹೇಂದ್ರರವರು ಮಾರುತಿಯವರ ಕೌಟುಂಬಿಕ ಪ್ರೇಮಕ್ಕೆ ಅಡೆತಡೆ ಒಡ್ಡದೇ ಫಿದಾ ಆಗುತ್ತಿದ್ದಾರಾ?
ಕುತೂಹಲ ಇರಲಿ…