ಜಮೀನು ವಿವಾದದ ಕೊಲೆ;* *ಹೊಳೆಹೊನ್ನೂರಿನ 7 ಜನರಿಗೆ ಜೈಲು ಶಿಕ್ಷೆ* *ಏನೆಲ್ಲಾ ಶಿಕ್ಷೆ ನೀಡಿದೆ ಕೋರ್ಟ್*

*ಜಮೀನು ವಿವಾದದ ಕೊಲೆ;*

*ಹೊಳೆಹೊನ್ನೂರಿನ 7 ಜನರಿಗೆ ಜೈಲು ಶಿಕ್ಷೆ*

*ಏನೆಲ್ಲಾ ಶಿಕ್ಷೆ ನೀಡಿದೆ ಕೋರ್ಟ್*

ಜಮೀನು ವಿಚಾರದಲ್ಲಿ ಹೊಂದಿದ್ದ ದ್ವೇಷದಿಂದ ಕೊಲೆ ಮಾಡಿದ್ದ 7 ಜನ ಆರೋಪಿಗಳಿಗೆ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.

ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ *ಭದ್ರಾಪುರ ಗ್ರಾಮದ* ವಾಸಿಗಳಾದ ನಾಗರಾಜ ಹಾಗೂ ಬಡ್ಡಿ ಪರಮೇಶ್ವರಪ್ಪ ಈ ಎರಡೂ ಕುಟುಂಬಗಳ ಮಧ್ಯೆ ಜಮೀನಿನ ವಿಚಾರವಾಗಿ ಹಿಂದಿನಿಂದಲೂ ವೈಮನಸ್ಸಿದ್ದು, ಹಳೆಯ ದ್ವೇಶದ ಕಾರಣಕ್ಕೆ, 2020 ಮಾರ್ಚ್ 5 ರಂದು ರಾತ್ರಿ *ಬಡ್ಡಿ ಪರಮೇಶ, ಜಗದೀಶ, ರಮೇಶ, ಮಂಜಪ್ಪ , ಗೌತಮ್, ಅಭಿಷೇಕ್, ಶರತ್, ವಿಕ್ರಮ್, ಸಂಜಯ್ ಹಾಗೂ ಕೃತಿಕ್ ರವರುಗಳು ಸೇರಿಕೊಂಡು ಮಾರಕಾಸ್ತ್ರಗಳಿಂದ ನಾಗರಾಜ್ ರವರ ತಂದೆಯಾದ ಕರಿಯಪ್ಪ,* 65 ವರ್ಷ, ಭದ್ರಾಪುರ ಗ್ರಾಮ ಭದ್ರಾವತಿ ರವರ ಮೈ ಕೈ ಹಾಗೂ ತಲೆಗೆ ಹಲ್ಲೆ ಮಾಡಿ *ಕೊಲೆ ಮಾಡಿರುತ್ತಾರೆಂದು* ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0059/2020 ಕಲಂ 143, 147, 148, 504, 341, 323, 324, 307, 302, 506 ಸಹಿತ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಇ ಓ ಮಂಜುನಾಥ್,ಭದ್ರಾವತಿ ಗ್ರಾಮಾಂತರ ವೃತ್ತ ರವರು ತನಿಖೆ ನಡೆಸಿದ್ದು, ಲಕ್ಷ್ಮಿ ಪತಿ ಆರ್ ಎಲ್.* ಪಿ. ಐ. ಹೊಳೆಹೊನ್ನೂರು ಪೊಲೀಸ್ ಠಾಣೆ ರವರು ತನಿಖೆ ಪೂರೈಸಿ ದೋಷಾ ರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ *ಶ್ರೀಮತಿ ರತ್ನಮ್ಮ ಪಿ,* ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದು, *ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ* ಶಿವಮೊಗ್ಗ (ಪೀಠಾಸೀನ ಭದ್ರಾವತಿ)ಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧಿಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ* ರವರು ಆರೋಪಿತರಾದ *1) ಪರಮೇಶ, 2) ಜಗಧೀಶ್, 3) ರಮೇಶ, 4) ಗೌತಮ್, 5) ಅಭಿಷೇಕ, 6) ವಿಕ್ರಮ್ ಮತ್ತು 7) ಸಂಜಯ್* ರವರುಗಳಿಗೆ *ಐ ಪಿ ಸಿ ಕಲಂ 143 ಗೆ 06 ತಿಂಗಳು ಕಾರವಾಸ 2000 ರೂಪಾಯಿ ದಂಡ, ಕಲಂ 147 ಗೆ 2 ವರ್ಷ ಕಾರವಾಸ 10000 ರೂಪಾಯಿ ದಂಡ, ಕಲಂ 148 ಐಪಿ ಸಿ ಗೆ 03 ವರ್ಷ ಕಾರವಾಸ 15000 ರೂಪಾಯಿ ದಂಡ, ಕಲಂ 504 ಐಪಿ ಸಿ ಗೆ 02 ವರ್ಷ ಕಾರವಾಸ 10000 ರೂಪಾಯಿ ದಂಡ, ಕಲಂ 341 ಐಪಿ ಸಿ ಗೆ 01 ತಿಂಗಳು ಕಾರವಾಸ 500 ರೂಪಾಯಿ ದಂಡ, ಕಲಂ 323 ಐಪಿ ಸಿ ಗೆ 01 ವರ್ಷ ಕಾರವಾಸ 1000 ರೂಪಾಯಿ ದಂಡ, ಕಲಂ 324 ಐಪಿ ಸಿ ಗೆ 03 ವರ್ಷ ಕಾರವಾಸ 15000 ರೂಪಾಯಿ ದಂಡ, ಕಲಂ 307 ಐಪಿ ಸಿ ಗೆ 10ವರ್ಷ ಕಾರವಾಸ 25000 ರೂಪಾಯಿ ದಂಡ, *ಕಲಂ 302 ಐಪಿ ಸಿ ಗೆ ಜೀವಾವಧಿ ಶಿಕ್ಷೆ ಹಾಗೂ 50,000 ರೂಪಾಯಿ ದಂಡ,* ಕಲಂ 506 ಐಪಿ ಸಿ ಗೆ 02 ವರ್ಷ ಕಾರವಾಸ 10000 ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.