ಇಂದು ಸಾಗರ ತಾಲ್ಲೂಕಿನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ತಹಶೀಲ್ದಾರರ ಆದೇಶ
ಇಂದು ಸಾಗರ ತಾಲ್ಲೂಕಿನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ
ತಹಶೀಲ್ದಾರರ ಆದೇಶ
ಜೂನ್ 16 ರ ಇಂದು ಸಾಗರ ತಾಲೂಕಿನಾದ್ಯಂತ ಮಳೆ ಮತ್ತು ಗಾಳಿ ವ್ಯಾಪಕವಾಗಿರುವುದರಿಂದ ಅಂಗನವಾಡಿ, ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಈ ದಿನ ರಜೆ ಘೋಷಿಸಲಾಗಿದೆ ಎಂದು ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಆದೇಶದಲ್ಲಿ ತಿಳಿಸಿದ್ದಾರೆ.
ರಜಾದಿನದಲ್ಲಿನ ತರಗತಿ ಪಠ್ಯವನ್ನು ಮುಂದಿನ ಅವದಿಯಲ್ಲಿ ಸರಿದೂಗಿಸುವಂತೆ ತಿಳಿಸಿದೆ ಸಾಗರ ತಹಶೀಲ್ದಾರರು ಸೂಚಿಸಿದ್ದಾರೆ.