ಬೈಕ್ ನಲ್ಲಿ ಬಂದು ಅಜ್ಜಿಯ ಸರ ಎಗರಿಸಿದ್ದ ಕಳ್ಳನ ಬಂಧನ* *ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಕೆಲಸಗಾರ ಈ ಕಳ್ಳ!* *ಒಂದೇ ದಿನದಲ್ಲಿ ಕಳ್ಳನನ್ನು ಹಿಡಿದ ಜಯನಗರ ಠಾಣೆ ಇನ್ಸ್ ಪೆಕ್ಟರ್ ಸಿದ್ದೇಗೌಡರ ತಂಡ*
*ಬೈಕ್ ನಲ್ಲಿ ಬಂದು ಅಜ್ಜಿಯ ಸರ ಎಗರಿಸಿದ್ದ ಕಳ್ಳನ ಬಂಧನ*
*ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಕೆಲಸಗಾರ ಈ ಕಳ್ಳ!*
*ಒಂದೇ ದಿನದಲ್ಲಿ ಕಳ್ಳನನ್ನು ಹಿಡಿದ ಜಯನಗರ ಠಾಣೆ ಇನ್ಸ್ ಪೆಕ್ಟರ್ ಸಿದ್ದೇಗೌಡರ ತಂಡ*

ವೃದ್ಧ ಮಹಿಳೆಯಬ್ಬರ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ ಕಳ್ಳನನ್ನು ಜಯನಗರ ಪೊಲೀಸರು ಬಂಧಿಸಿದ್ದು, ಅಪಹರಿಸಿದ್ದ ಚಿನ್ನದ ಸರವನ್ನು ವಶಕ್ಕೆ ಪಡೆದಿದ್ದಾರೆ.
ಸೆಪ್ಟೆಂಬರ್ 11ರಂದು ಬೆಳಗ್ಗೆ 83 ವರ್ಷದ ಶಿವಮೊಗ್ಗ ರವೀಂದ್ರ ನಗರದ ವಾಸಿ ಮಹಿಳೆಯೊಬ್ಬರು ರವೀಂದ್ರ ನಗರ ರೈಲ್ವೆ ಟ್ರ್ಯಾಕ್ ಪಕ್ಕದ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಯಾರೋ ಒಬ್ಬ ವ್ಯಕ್ತಿ ಬೈಕ್ ನಲ್ಲಿ ಬಂದು ಕೊರಳಲ್ಲಿದ್ದ 25 ಗ್ರಾಂ ತೂಕದ 150000/- ಬೆಲೆಬಾಳುವ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದ.
ಈ ಸಂಬಂಧ ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆ ಗುನ್ನೆ ನಂ: 0081/2025 ಕಲಂ 309(4) ಬಿ ಎನ್ ಎಸ್ ರೀತ್ಯಾ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ. ಕೆ. ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 1 ಎ ಜಿ ಕಾರಿಯಪ್ಪ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಎಸ್ ರಮೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ, ಶಿವಮೊಗ್ಗ ಉಪ ವಿಭಾಗ-ಬಿ ಡಿ ವೈ ಎಸ್ ಪಿ ಸಂಜೀವ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಜಯನಗರ ಪೊಲೀಸ್ ಠಾಣೆ ಪಿ.ಐ. ಸಿದ್ದೇಗೌಡ ಹೆಚ್ ಎಂ,ಪಿಎಸ್ಐ *ಶ್ರೀಮತಿ ಕೋಮಲ ಬಿ ಆರ್,* ಎ ಎಸ್ ಐ ಕರಿಬಸಪ್ಪ ಸಿ ಆರ್ ರವರು ಹಾಗೂ ಸಿಬ್ಬಂದಿಯವರಾದ ಎಚ್ ಸಿ ನಾಗರಾಜ್ ಕೆ, ಸಿ ಪಿ ಸಿ- ವಸಂತ ಜಿ, ಸಚಿನ್ ಎಚ್ ಎಸ್, ವೀರೇಶ್ ಬಿ ಎಂ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ಈ ತನಿಖಾ ತಂಡವು ಸೆಪ್ಟೆಂಬರ್ 12 ರಂದು ಆರೋಪಿ ಹರೀಶ್ ಬಿ ಎಚ್ (39 ವರ್ಷ, ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಕೆಲಸ ವಾಸ ರೇಣುಕಾ ನಿಲಯ ರವೀಂದ್ರ ನಗರ 6ನೇ ಕ್ರಾಸ್ ಶಿವಮೊಗ್ಗ, ಸ್ವಂತ ಊರು ಬೇವಿನಹಳ್ಳಿ ಬಾಣಾವರ ಹೋಬಳಿ ಅರಸೀಕೆರೆ ತಾಲೂಕು) ಈತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಆರೋಪಿತನ ಬಂಧನದಿಂದ ಜಯನಗರ ಪೊಲೀಸ್ ಠಾಣೆಯ ಒಟ್ಟು ಮೂರು ಸರಗಳ್ಳತನ ಪ್ರಕರಣಗಳು ಪತ್ತೆ ಆಗಿವೆ.
ಮೂರು ಪ್ರಕರಣಗಳಲ್ಲಿ ಸರಗಳ್ಳತನವಾಗಿದ್ದು *ಒಟ್ಟು 71 ಗ್ರಾಂ ನ 3 ಬಂಗಾರದ ಸರಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಅಂದಾಜು ಮೌಲ್ಯ 710000/- ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸ್ಪ್ಲೆಂಡರ್ ಬೈಕ್ ಅನ್ನು ಮೌಲ್ಯ 30000/- ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಈ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.