ಶಿವಮೊಗ್ಗದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ;* *ಐದು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ದೊಡ್ಡಪೇಟೆ ಪೊಲೀಸರು* *ಅಪ್ರಾಪ್ತರೇ ಕೊಲೆಗೆ ಯತ್ನಿಸಿದರಾ?*

*ಶಿವಮೊಗ್ಗದ ಅಮ್ಜದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ;*

*ಐದು ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ದೊಡ್ಡಪೇಟೆ ಪೊಲೀಸರು*

*ಅಪ್ರಾಪ್ತರೇ ಕೊಲೆಗೆ ಯತ್ನಿಸಿದರಾ?*

ಶಿವಮೊಗ್ಗದ ಅಮ್ಜದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಸೆ.2ರ ರಾತ್ರಿ ಹಲ್ಲೆಯಾಗಿದ್ದು, ಜೀವನ್ಮರಣದ ಮಧ್ಯೆ ಇರುವ ಈತನಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸರು 5 ಜನರನ್ನು ಬಂಧಿಸಿದ್ದಾರೆ.

ಹಲ್ಲೆ ಮಾಡಿದವರಲ್ಲಿ ಅಪ್ರಾಪ್ತರಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೊಲೆಯತ್ನಕ್ಕೆ ಕಾರಣ ತಿಳಿದು ಬಂದಿಲ್ಲ.

ಶಿವಮೊಗ್ಗದ ಆರ್ ಎಂ ಎಲ್ ನಗರದ ಭಾರತ್ ಫೌಂಡ್ರಿ ಹಿಂಭಾಗದಲ್ಲಿ ಶಾಹಿದ್ ಎಂಬಾತನ ಜೊತೆ ಅಮ್ಜದ್ ನಿಂತಿದ್ದಾಗ ನುಗ್ಗಿಬಂದ ಹಂತಕರು ಮಾರಕಾಸ್ತ್ರಗಳಿಂದ ಎಡೆಬಿಡದೇ ಹಲ್ಲೆ ಮಾಡಿದ್ದರು.

ಕೈ ಬೆರಳುಗಳು, ಮತ್ತೊಂದು ಕೈ ಕತ್ತರಿಸಲ್ಪಟ್ಟಿದ್ದು, ಹೊಟ್ಟೆಗೂ ಚಾಕು ಹಾಕಲಾಗಿತ್ತು. ಅಮ್ಜದನ ಸ್ಥಿತಿ ಈಗಲೂ ಗಂಭೀರವಾಗಿದೆ.

ಅಮ್ಜದನ ಜೊತೆ ಇದ್ದ ಶಾಹಿದನಿಗೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು.

ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.