ಸಮತೋಲನ ಕಳಕೊಂಡ ಸಿಎಂ ಸಿದ್ದರಾಮಯ್ಯ- ಡಿ.ಎಸ್.ಅರುಣ್ ಟೀಕೆ
ಸಮತೋಲನ ಕಳಕೊಂಡ ಸಿಎಂ ಸಿದ್ದರಾಮಯ್ಯ- ಡಿ.ಎಸ್.ಅರುಣ್ ಟೀಕೆ ಶಿವಮೊಗ್ಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮತೋಲನ ಕಳೆದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಚಿಂತನೆಗಳೇ ಬದಲಾಗುತ್ತಿವೆ. ಅಹಂಕಾರ ಮನೆಮಾಡಿದೆ. ನಾನೊಬ್ಬನೇ, ನನ್ನದೇ ಸರ್ಕಾರ ಎಂಬ ದರ್ಪದಲ್ಲಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಬೈಯುತ್ತಾರೆ. ಪೊಲೀಸ್ ಅಧಿಕಾರಿಗಳ ಮೇಲೆಯೇ ಕೈಮಾಡಲು ಹೋಗುತ್ತಾರೆ. ಇವರು ಯಾವ ದೇಶದಲ್ಲಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಇವರಿಗೆ ಅರಿವಿದೆಯೇ? ಹೀಗೇ ಪೊಲೀಸರಿಗೆ ಮಾತನಾಡಿದರೆ ಅವರ…