Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಸಿಎಂ ರಾಜೀನಾಮೆ, ನಿವೇಶನಗಳ ಹಂಚಿಕೆ ರದ್ದು, ಸಿಬಿಐ ತನಿಖೆಗೆ ಆಗ್ರಹ12ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ-ವಿಜಯೇಂದ್ರ

ಸಿಎಂ ರಾಜೀನಾಮೆ, ನಿವೇಶನಗಳ ಹಂಚಿಕೆ ರದ್ದು, ಸಿಬಿಐ ತನಿಖೆಗೆ ಆಗ್ರಹ 12ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ-ವಿಜಯೇಂದ್ರ ಬೆಂಗಳೂರು: ಮೈಸೂರಿನ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮೂಡಾ) ಅವ್ಯವಹಾರಕ್ಕೆ ಸಂಬಂಧಿಸಿ ಬಿಜೆಪಿ ವತಿಯಿಂದ ಇದೇ 12ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಕಟಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಖುಷಿ ಬಂದಂತೆ ನಿವೇಶನ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ…

Read More

ನೂತನ ಎಂ ಎಲ್ ಸಿ ಬಲ್ಕೀಷ್ ಬಾನು ಕಾರ್ಯಾಲಯದ ಉದ್ಘಾಟನೆ ಜುಲೈ 11ಕ್ಕೆ*

*ನೂತನ ಎಂ ಎಲ್ ಸಿ ಬಲ್ಕೀಷ್ ಬಾನು ಕಾರ್ಯಾಲಯದ ಉದ್ಘಾಟನೆ ಜುಲೈ 11ಕ್ಕೆ* ಜುಲೈ 11ರ ಗುರುವಾರದಂದು ಬೆಳಗ್ಗೆ 11:30 ಶಿವಮೊಗ್ಗ ಎ.ಸಿ.ಕಛೇರಿ ಆವರಣದಲ್ಲಿ ನೂತನ ವಿಧಾ‌ನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕೀಷ್ ಬಾನುರವರ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಛೇರಿಯ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪ ಉದ್ಘಾಟಿಸಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕರುಗಳಾದ ಬಿ ಕೆ ಸಂಗಮೇಶ್ವರ್, ಬೇಳೂರು ಗೋಪಾಲಕೃಷ್ಣ, ಪಕ್ಷದ ಜಿಲ್ಲಾಧ್ಯಕ್ಷರು,…

Read More

ಶಿವಮೊಗ್ಗ ಮೆಡಿಕಲ್ ಕಾಲೇಜು ಸಿಮ್ಸ್ ಮೇಲೆ 3 ಲಕ್ಷ ರೂ ದಂಡ!ಏನಕ್ಕೆ ದಂಡ? ದಂಡ ಹಾಕಿದ್ದು ಯಾರು?

ಶಿವಮೊಗ್ಗ ಮೆಡಿಕಲ್ ಕಾಲೇಜು ಸಿಮ್ಸ್ ಮೇಲೆ 3 ಲಕ್ಷ ರೂ ದಂಡ! ಏನಕ್ಕೆ ದಂಡ? ದಂಡ ಹಾಕಿದ್ದು ಯಾರು? ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರ ಕೊರತೆ ಸೇರಿದಂತೆ ಅನೇಕ ಮೂಲಸೌಕರ್ಯಗಳ ಕೊರತೆ ಇರುವುದು ತಿಳಿದುಬಂದಿದೆ. ಪರಿಣಾಮವಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗವು 27 ವೈದ್ಯಕೀಯ ಕಾಲೇಜುಗಳಿಗೆ ಭಾರಿ ಮೊತ್ತದ ದಂಡ ವಿಧಿಸಿದೆ. ಯಾವೆಲ್ಲ ಕಾಲೇಜುಗಳಿಗೆ ದಂಡ ವಿಧಿಸಲಾಗಿದೆ.ಮೂಲಸೌಕರ್ಯ ಕೊರತೆ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದ್ದೇನು ಎಂಬ ಮಾಹಿತಿ ಇಲ್ಲಿದೆ. ಕರ್ನಾಟಕದಾದ್ಯಂತ ಸುಮಾರು 27…

Read More

ಆಯನೂರು ಬಳಿ ಕೆರೆಗೆ ಬಿದ್ದ ಕಾರು- ಕುಟುಂಬ ಪಾರು

ಕೆರೆಗೆ ಬಿದ್ದ ಕಾರು- ಕುಟುಂಬ ಪಾರು ಸಾಗರ ತಾಲ್ಲೂಕಿನ ಆಯನೂರು ಬಳಿಯ ಪೆಟ್ರೋಲ್ ಬಂಕ್ ಎದುರಿನ‌ ಕೆರೆಗೆ ಇಂದು ಬೆಳಿಗ್ಗೆ ಕಾರೊಂದು ಬಿದ್ದಿದ್ದು, ಕಾರಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬ ಸಣ್ಣಪುಟ್ಟ ಗಾಯಗಳಾಗಿ, ಜೀವಹಾನಿಯಿಂದ ಪಾರಾಗಿದೆ. ಕೂಡಲೇ ಅಪಘಾತ ಸ್ಥಳಕ್ಕೆ ತೆರಳಿದ ಪೊಲೀಸರು, ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Read More

ಕವಿಸಾಲು

*ಕವಿಸಾಲು** ಸಂಬಂಧಗಳಿಗೂ ಆಯಸ್ಸಿರುತ್ತೆ ಹೃದಯವೇ, ಕೆಲವೊಂದು ಸಾಯುವವರೆಗೂ ಜೊತೆಗಿದ್ದು ನಿಭಾಯಿಸುತ್ತವೆ, ಇನ್ನು ಕೆಲವೊಂದು ಬದುಕಿದ್ದಾಗಲೇ ಉಸಿರು ಚೆಲ್ಲಿ ಹೆಣವಾಗಿರುತ್ತವೆ! – *ಶಿ.ಜು.ಪಾಶ* 8050112067 (9/7/24)

Read More

ಬೆಳ್ಳಂ ಬೆಳಿಗ್ಗೆ ಆರೋಪಿ ರಜಾಕ್ ಕಾಲಿಗೆ ಗುಂಡು ಹೊಡೆದ ಪೊಲೀಸರು…ಏನಿದು ಪ್ರಕರಣ?

ಬೆಳ್ಳಂ ಬೆಳಿಗ್ಗೆ ಆರೋಪಿ ರಜಾಕ್ ಕಾಲಿಗೆ ಗುಂಡು ಹೊಡೆದ ಪೊಲೀಸರು… ಏನಿದು ಪ್ರಕರಣ? ಶಿವಮೊಗ್ಗ ಬಿ ಉಪ ವಿಭಾಗದ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ ಪ್ರಕರಣ ವರದಿತಾಗಿದೆ. ಆರೋಪಿ ರಜಾಕ್ ವಿರುದ್ಧ ಕೊಲೆ ಯತ್ನ ಮತ್ತು ಎನ್‌ಡಿಪಿಎಸ್ ಸೇರಿದಂತೆ 5 ಪ್ರಕರಣಗಳಿದ್ದು, 109 ಬಿಎನ್‌ಎಸ್ (ಕೊಲೆ ಯತ್ನ) ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ. ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಇಂದು ಹೊಳೆಹೊನ್ನೂರು ಇನ್ಸ್‌ಪೆಕ್ಟರ್ ಬಂಧಿಸಲು ಯತ್ನಿಸಿದಾಗ ಆರೋಪಿ ರಜಾಕ್…

Read More

ಮಕ್ಕಳಿಲ್ಲ- ಡಿಪ್ರೆಶನ್- ಕುಡಿತ- ಡಿ ಅಡಿಕ್ಷನ್- ದತ್ತು ಪ್ರಯತ್ನ…ಕೊನೆಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಬಿ ಸಿ ಪಾಟೀಲ್ ಅಳಿಯ…2008 ರಿಂದ ಈ ವರೆಗಿನ ದಾಂಪತ್ಯದ ಕಥೆ ಏನು? ಆತ್ಮಹತ್ಯೆಗೆ ನಿಜವಾಗಲೂ ಕಾರಣವೇನು?

ಮಕ್ಕಳಿಲ್ಲ- ಡಿಪ್ರೆಶನ್- ಕುಡಿತ- ಡಿ ಅಡಿಕ್ಷನ್- ದತ್ತು ಪ್ರಯತ್ನ… ಕೊನೆಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಬಿ ಸಿ ಪಾಟೀಲ್ ಅಳಿಯ… 2008 ರಿಂದ ಈ ವರೆಗಿನ ದಾಂಪತ್ಯದ ಕಥೆ ಏನು? ಆತ್ಮಹತ್ಯೆಗೆ ನಿಜವಾಗಲೂ ಕಾರಣವೇನು? ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದ ಸಮೀಪ ಬಿ.ಸಿ. ಪಾಟೀಲ್ ಅವರ ದೊಡ್ಡ ಮಗಳ ಗಂಡ ಪ್ರತಾಪ್ ಕುಮಾರ್ (41) ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಿನಲ್ಲಿ ಹೋಗಿದ್ದ…

Read More

ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಆತ್ಮಹತ್ಯೆ ಕಾರಣ ನಿಗೂಢ- ಡಿಪ್ರೆಷನ್ ಸಾವಿಗೆ ಕಾರಣ ಎಂದ ಪಾಟೀಲ್ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಶವಾಗಾರಾದಲ್ಲಿ ಮೃತದೇಹ

ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಆತ್ಮಹತ್ಯೆ ಕಾರಣ ನಿಗೂಢ- ಡಿಪ್ರೆಷನ್ ಸಾವಿಗೆ ಕಾರಣ ಎಂದ ಪಾಟೀಲ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಶವಾಗಾರಾದಲ್ಲಿ ಮೃತದೇಹ ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ, ಬಿಸಿ ಪಾಟೀಲ್ ದೊಡ್ಡ ಮಗಳ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಲ್ಲಿಸಿ ವಿಷ ಸೇವಿಸಿದ್ದಾರೆ. ಆದ್ರೆ, ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾದರೂ ಜೀವ ಉಳಿಯಲಿಲ್ಲ. ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ…

Read More

ನುಡಿದಂತೆ ನಡೆದ ಡಾ.ಗೀತಾ ಶಿವರಾಜ್ ಕುಮಾರ್ ದಂಪತಿ.. ಅಪಘಾತದಲ್ಲಿ ಸಾವುಕಂಡ 13 ಕುಟುಂಬಗಳಿಗೆ ತಲಾ ಒಂದು ಲಕ್ಷ ಪರಿಹಾರ ವಿತರಿಸಿ ಮಾದರಿಯಾದರು…

ನುಡಿದಂತೆ ನಡೆದ ಡಾ.ಗೀತಾ ಶಿವರಾಜ್ ಕುಮಾರ್ ದಂಪತಿ.. ಅಪಘಾತದಲ್ಲಿ ಸಾವುಕಂಡ 13 ಕುಟುಂಬಗಳಿಗೆ ತಲಾ ಒಂದು ಲಕ್ಷ ಪರಿಹಾರ ವಿತರಿಸಿ ಮಾದರಿಯಾದರು… ಹಾವೇರಿಯ  ಹೈವೆ ಮೇಲೆ ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲ್ಲರ್‌ವೊಂದು ಡಿಕ್ಕಿ ಹೊಡೆದು ೧೩ ಜನರ ಸಾವಿಗೆ ಕಾರಣವಾಗಿದ್ದ ಘಟನೆ ನಡೆದು ೧೦ ದಿನಗಳಾಗಿದ್ದು, ಇಂದು ನಟ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತರವರು ಗ್ರಾಮಕ್ಕೆ ಭೇಟಿ ನೀಡಿ  ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿ ಆರ್ಥಿಕ ನೆರವು ನೀಡಿದ್ದಾರೆ. ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಈ ಘಟನೆ…

Read More