ಬಿಜೆಪಿ ಟೀಕೆಗಳಿಗೆ ಫಲಾನುಭವಿಗಳದ್ದೇ ಉತ್ತರ; ಫೆ.24 ರಂದು ಪಂಚ ಗ್ಯಾರಂಟಿ ಸಮಾವೇಶ- ಹೆಚ್.ಎಸ್.ಸುಂದರೇಶ್ ಪತ್ರಿಕಾಗೋಷ್ಠಿ

ಕಷ್ಟಗಳಿಗೆ “ಕೈ” ಹಿಡಿದ ಕಾಂಗ್ರೆಸ್ ಸರ್ಕಾರದಿಂದ 5 ಗ್ಯಾರಂಟಿಗಳ ಬಗ್ಗೆ ಮತ್ತಷ್ಟು ವಿಶ್ವಾಸ ತುಂಬಲು ಶಿವಮೊಗ್ಗದಲ್ಲಿ ಫೆ.24ರಂದು ಬೆಳಿಗ್ಗೆ 11ಕ್ಕೆ ಅಲ್ಲಮಪ್ರಭು ಬಯಲು ಮಂಟಪ (ಫ್ರೀಡಂ ಪಾರ್ಕ್)ದಲ್ಲಿ ಜಿಲ್ಲಾ ಫಲಾನುಭವಿಗಳ ಸಮಾವೇಶವನ್ನು ಆಯೋಜಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.
ಅವರು ಇಂದು ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಕೋಟ್ಯಾಂತರ ಮಹಿಳೆಯರು ಮತ್ತು ಬಡವರು ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲೂ ಕೂಡ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಬಡವರು ಎಲ್ಲಾ 4 ಗ್ಯಾರಂಟಿಗಳ ಯೋಜನೆಗಳನ್ನು ಈಗಾಗಲೇ ಪಡೆಯುತ್ತಿದ್ದು, 5ನೇ ಯೋಜನೆಯಾದ ಯುವನಿಧಿಗೂ ನೊಂದಣಿ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಗ್ಯಾರAಟಿಗಳ ಯಶಸ್ಸನ್ನು ಸಹಿಸಸದ ಬಿಜೆಪಿಯುವರು ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಬಡವರ ಕಷ್ಟಗಳೇ ಗೊತ್ತಿಲ್ಲ ತಮ್ಮ ಆಡಳಿತದಲ್ಲಿ ಭ್ರಷ್ಟಚಾರ ಮಾಡಿ ಈಗ ಏನು ಮಾಡಬೇಕೆಂಬುದು ಗೊತ್ತಿಲ್ಲದೇ ತಲ್ಲಣದಿಂದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. ಅವರು ಏನೇ ಮಾಡಿದರು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಹಪಾಹಪಿತನ ಬಿಟ್ಟು ಬಡವರ ಕಷ್ಟಗಳಿಗೆ ಅನುಕೂಲವಾಗುವುದನ್ನು ಬಿಜೆಪಿಯವರು ಗಮನಿಸಬೇಕು ಎಂದರು.
ಧರ್ಮಗಳ ಬಗ್ಗೆ ವಿಷ ಬೀಜ ಬಿತ್ತಿ ಚುನಾವಣೆಯನ್ನು ಎದುರಿಸುವ ಕಾಲ ಮುಗಿದು ಹೋಗಿದೆ. ಈ ಬಿಜೆಪಿಯವರಿಗೆ ಮಾನ ರ‍್ಯಾದೆ ಇಲ್ಲ. ಇದೊಂದು ಹುಚ್ಚರ ಸಂತೆಯಾಗಿದೆ. ಯಾವ ಅಭಿವೃದ್ದಿ ಮಾಡಿದರು, ಏನೇ ಹೇಳಿದರೂ ಅದನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಅಧಿಕಾರ ಕಳೆದುಕೊಂಡು ಹುಚ್ಚರಾಗಿದ್ದಾರೆ ಎಂದು ಟೀಕಿಸಿದರು.
24ರಂದು ನಡೆಯುವ ಸಮಾವೇಶದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದರಲ್ಲಿ ಸುಮಾರು 30 ಸಾವಿರ ಮಹಿಳೆಯರು ಭಾಗವಹಿಸುತ್ತಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರುಗಳು, ಶಾಸಕರುಗಳು, ಪಕ್ಷದ ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಮುಖ್ಯಮAತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್‌ನಲ್ಲಿ ಶಿವಮೊಗ್ಗ ಜಿಲ್ಲೆಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಬಹುದೊಡ್ಡ ಬಜೆಟ್‌ನ್ನೇ ರಾಜ್ಯದಲ್ಲಿ ಮಂಡಿಸಿದ್ದಾರೆ. ಗ್ಯಾರಂಟಿಗಳ ನಡುವೆಯೂ ಮತ್ತೇ ಹೊಸ ಗ್ಯಾರಂಟಿಗಳನ್ನು ಕೂಡ ಸೇರಿಸಿದ್ದಾರೆ. ಇದು ಬಡವರ ಪರವಾದ ಪಕ್ಷವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಪ್ರಸನ್ನಕುಮಾರ್, ಎಂ. ಶ್ರೀಕಾಂತ್, ಕಲಗೋಡು ರತ್ನಾಕರ್. ಸಿ.ಹೆಚ್.ಚಂದ್ರಭೂಪಾಲ್, ಎಸ್.ಟಿ.ಚಂದ್ರಶೇಖರ್, ಕಲೀಂ ಪಾಶಾ, ಪಿ.ಎಸ್. ಗಿರೀಶ್ ರಾವ್, ಎಂ.ಪಿ.ದಿನೇಶ್ ಪಾಟೀಲ್, ಚಂದನ, ಅಡ್ಡು, ಶಿ.ಜು.ಪಾಶ, ಜಿ.ಪದ್ಮನಾಭ್, ಎನ್.ಡಿ.ಪ್ರವೀಣ್‌ಕುಮಾರ್ ಉಪಸ್ಥಿತರಿದ್ದರು.