*ಡೆಲ್ಲಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಅನುಯಲ್ ಸ್ಪೋರ್ಟ್ಸ್ ಡೇ* *ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆಟೋಟ ಅವಶ್ಯಕ; ಜಿ.ಡಿ.ಮಂಜುನಾಥ್*
*ಡೆಲ್ಲಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಅನುಯಲ್ ಸ್ಪೋರ್ಟ್ಸ್ ಡೇ*
*ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆಟೋಟ ಅವಶ್ಯಕ; ಜಿ.ಡಿ.ಮಂಜುನಾಥ್*
ಕ್ರೀಡೆ ಎಂದರೆ ಕೇವಲ ಮೈದಾನದಲ್ಲಿ ಓಡುವುದಲ್ಲ; ಇದು ಜೀವನದ ದೊಡ್ಡ ಪಾಠಶಾಲೆ. “ಸದೃಢ ಕಾಯದಲ್ಲಿ ಸದೃಢ ಮನಸ್ಸಿರುತ್ತದೆ” ಎಂಬ ಮಾತಿನಂತೆ, ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆಟೋಟಗಳು ಅತ್ಯಗತ್ಯ. ಕ್ರೀಡೆಯು ನಮಗೆ ಶಿಸ್ತು ಸಮಯ ಪ್ರಜ್ಞೆ ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸುವ ದೊಡ್ಡ ಗುಣವನ್ನು ಕಲಿಸುತ್ತದೆ ಎಂದು ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರಾದ ಜಿ.ಡಿ. ಮಂಜುನಾಥ್ ಹೇಳಿದರು.
ಡೆಲ್ಲಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ *ಅನುಯಲ್ ಸ್ಪೋರ್ಟ್ಸ್ ಡೇ* ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ನೀವು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೀರಿ. ಎಲ್ಲರೂ ಗೆಲ್ಲಲು ಸಾಧ್ಯವಿಲ್ಲದಿರಬಹುದು, ಆದರೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ. ಕ್ರೀಡೆಯಲ್ಲಿ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳಿ. ಜಗತ್ತಿನ ಚಾಂಪಿಯನ್ಗಳು ಅಂತಿಮವಾಗಿ ಯಶಸ್ವಿಯಾಗುವವರೆಗೆ ಪ್ರಯತ್ನಿಸುತ್ತಲೇ ಇರುತ್ತಾರೆ ಎಂಬುದು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ ಎಂದರು.
ಕ್ರೀಡಾಪಟುಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ವಿಶೇಷ ಅವಕಾಶಗಳಿದ್ದು ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. ಪೀಡೆಯಲ್ಲಿ ಸಕ್ರಿಯವಾಗಿ ತೋರಿಸಿ ತೊಡಗಿಸಿಕೊಂಡು ಸರ್ಕಾರದ ಕ್ರೀಡಾ ಕೂಟದಲ್ಲಿ ಹೆಚ್ಚಿನ ಅವಕಾಶ ಪಡೆದುಕೊಳ್ಳಿ.
ಮೈದಾನದಲ್ಲಿ ನೀವು ತೋರುವ ಒಗ್ಗಟ್ಟು ಮತ್ತು ನಾಯಕತ್ವದ ಗುಣಗಳು ಭವಿಷ್ಯದಲ್ಲಿ ನೀವು ಉತ್ತಮ ನಾಗರಿಕರಾಗಲು ನೆರವಾಗುತ್ತವೆ. ಮೇಜರ್ ಧ್ಯಾನ್ ಚಂದ್ ಅವರಂತಹ ಕ್ರೀಡಾ ಸಾಧಕರನ್ನು ಸ್ಮರಿಸುತ್ತಾ, ಅವರ ಶ್ರದ್ಧೆ ಮತ್ತು ದೇಶಭಕ್ತಿಯನ್ನು ನೀವು ಮೈಗೂಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಇಂದಿನ ಕ್ರೀಡಾಕೂಟವು ನಿಮ್ಮಲ್ಲಿ ಹೊಸ ಚೈತನ್ಯವನ್ನು ತುಂಬಲಿ. ಮೈದಾನದಲ್ಲಿ ಸೋಲು ಅಥವಾ ಗೆಲುವಿಗಿಂತ ನಿಮ್ಮ ಉತ್ಸಾಹ ಮತ್ತು ಸೌಹಾರ್ದತೆ ಶಾಶ್ವತವಾಗಿರಲಿ. ನಿಮ್ಮೆಲ್ಲರಿಗೂ ಶುಭವಾಗಲಿ ಎಂದು ಹಾರೈಸುತ್ತಾ, ಡೆಲ್ಲಿ ಇಂಟರ್ನ್ಯಾಷನಲ್ ಸಂಸ್ಥೆಯ ಅಧ್ಯಕ್ಷರಾದ ಡಾ. ಜಗದೀಶ್ ಗೌಡ ರವರು ಹಾಗೂ ಪ್ರಾಚಾರ್ಯರಾದ ರಮ್ಯ ರವರು ಶಾಲೆಯನ್ನು ಅತ್ಯಂತ ಶಿಸ್ತು ಬದ್ಧವಾಗಿ ನಿರ್ವಹಿಸುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಾಧನೆಯನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಜಗದೀಶ್ ಗೌಡ, ಪ್ರಾಂಶುಪಾಲರಾದ ಶ್ರೀಮತಿ ರಮ್ಯಾ ಹಾಗೂ ಜೆಎನ್ಎನ್ಸಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕುಮಾರಿ ಜೇಷ್ಠ. ಎಂ ಗೊರಕೋಡ್ ಉಪಸ್ಥಿತರಿದ್ದರು.


