*ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೆಸರಲ್ಲಿ ನಕಲಿ ಸಂದೇಶ* *ಡಿಸಿಗೂ ಸೈಬರ್ ವಂಚಕರ ಕಾಟ!*

*ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೆಸರಲ್ಲಿ ನಕಲಿ ಸಂದೇಶ*

*ಡಿಸಿಗೂ ಸೈಬರ್ ವಂಚಕರ ಕಾಟ!*

ನನ್ನ ಹೆಸರು ಮತ್ತು ಭಾವಚಿತ್ರವನ್ನು ಬಳಸಿಕೊಂಡು ಸೈಬರ್ ವಂಚಕರು ವಿದೇಶಿ ವ್ಯಾಟ್ಸಪ್ ಸಂಖ್ಯೆಯಿಂದ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ನಕಲಿ ಸಂದೇಶ ರವಾನಿಸುತ್ತಿದ್ದು, ವಂಚಕರ ಜಾಲಕ್ಕೆ ಬೀಳದೇ ಎಚ್ಚರಿಕೆಯಿಂದಿರಬೇಕೆಂದು ಸ್ವತಃ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಈ ರೀತಿ ಬರುತ್ತಿರುವ ಸಂದೇಶಗಳು ಸೈಬರ್ ವಂಚಕರ ಕೃತ್ಯ. ಹಾಗಾಗಿ, ಯಾರೂ ಈ ಸಂದೇಶಗಳಿಗೆ ಪ್ರತಿಕ್ರಿಯಿಸಬಾರದು. ಇಂತಹ ಸಂಖ್ಯೆಗಳಿಂದ ಹಣಕ್ಕೆ ಬೇಡಿಕೆ, ತಪ್ಪು ಸಂದೇಶ ಮತ್ತು ಸಹಾಯ ಕೋರಿ ಸಂದೇಶ ಬಂದರೆ ನಿರ್ಲಕ್ಷ್ಯಿಸಿ, ಇಂಥ ನಂಬರ್ ಗಳನ್ನು ಬ್ಲಾಕ್ ಮಾಡಬೇಕೆಂದು ಜಿಲ್ಲಾಧಿಕಾರಿ ಕೋರಿದ್ದಾರೆ.