ಯಾರು ಈ ಸಾಸ್ವೆಹಳ್ಳಿ ರಂಗರಾಜ್? ಏನು ಕವಿತೆ ಇದು?

ಮೀನು ದುಂಬಿ
“””””””””””””””””””””””
ಗೆಳತಿ
ನೀನು
ಮೀನು,

ಸಂಚಾರಿ
ನಿಯಮ
ಇಲ್ಲದೆ
ನೀರಲಿ
ಬಳುಕುವ
ಸ್ವೇಚ್ಛಾಚಾರಿ,
ಕೈಗೆಟಕದೆ
ನುಸುಳುವ
ಚಾಲಾಕಿ !!

ಸಖೀ
ನಾನು
ಜೇನು

ಹೂವಿಂದ
ಮಕರಂದ
ಹೀರಿಯೂ
ಪರಹಿತಕೆ
ಉಳಿಸಿ,
ಬರಿಗೈಲಿ
ತೆರಳುವ
ಶ್ರಮದುಂಬಿ

# ಸಾರಂಗರಾಜ್

*ಕಿರು ಪರಿಚಯ*

# ಮೂಲತಃ ಸಾಸ್ವೆಹಳ್ಳಿ
ಹುಟ್ಟಿ, ಬೆಳೆದದ್ದು ಶಿವಮೊಗ್ಗ
ಹಾಲಿ ವಾಸ ಶಿವಮೊಗ್ಗ

# ವೃತ್ತಿ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಗೋಜಿಗೆ ಹೋಗದ ಶಿಕ್ಷಕರನ್ನು ಗುರುತಿಸಿ ನೀಡಲಾದ
“ನಮ್ ಮೇಷ್ಟ್ರು ನಮ್ ಹೆಮ್ಮೆ” ಪ್ರಶಸ್ತಿಗೆ‌ ಭಾಜನ

# 5 ವರ್ಷ ಪತ್ರಿಕೋದ್ಯಮ ಸೇವೆ (ಅತ್ಯುತ್ತಮ ಮಾನವೀಯ ವರದಿ, ಪ್ರೆಸ್ ಗಿಲ್ಡ್ ಅವಾರ್ಡ್) ಹವ್ಯಾಸಿ ಬರಹಗಾರ

# ತಬಲಾ ವಾದಕ, ರಂಗಕರ್ಮಿ,
ನಮ್ ಟೀಮ್, ಕ.ಸಾ.ಪ., ಶಿಕ್ಷಕರ ಸಂಘ, ಇತರೆ ಅನೇಕ ಸಂಘಟನೆಗಳಲ್ಲಿ ಸೇವೆ