ಗೆದ್ದು ಮೋದಿ ಬಳಿಯೇ ಹೋಗ್ತೇನೆ;’ ಮನೆ ಬಳಿಯೇ ಚುನಾವಣಾ ಕಚೇರಿ ಆರಂಭಿಸಿದ ಕೆ.ಎಸ್.ಈಶ್ವರಪ್ಪ

ಗೆದ್ದು ಮೋದಿ ಬಳಿಯೇ ಹೋಗ್ತೇನೆ;’

ಮನೆ ಬಳಿಯೇ ಚುನಾವಣಾ ಕಚೇರಿ ಆರಂಭಿಸಿದ ಕೆ.ಎಸ್.ಈಶ್ವರಪ್ಪ

ನಾನು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ನಾನು ಗೆದ್ದ ನಂತರ ಪ್ರಧಾನಿ ಮೋದಿ ಬಳಿ ಹೋಗಿಯೇ ಹೋಗುತ್ತೇನೆ ಎಂದು ಬಂಡಾಯ ಅಭ್ಯರ್ಥಿ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ. ನಗರದಲ್ಲಿ ಈಶ್ವರಪ್ಪ ನಿವಾಸದಲ್ಲಿ ನೂತನ ಚುನಾವಣಾ ಕಚೇರಿ ಉದ್ಘಾಟನೆ ಮಾಡಿ ಬಳಿಕ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಲಾಗಿದೆ. ಹಾಗಾಗಿ ನನ್ನ ನಿವಾಸದಲ್ಲೇ ಕಚೇರಿ ಉದ್ಘಾಟನೆ ಮಾಡಿದ್ದೇವೆ. ನನ್ನ ಮಗನನ್ನು ಎಂಪಿ ಮಾಡುತ್ತೇನೆ ಎಂದು ಸುಳ್ಳು ಹೇಳಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸುಳ್ಳಿನ ಸರದಾರ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದಲ್ಲಿ ಕಾರ್ಯಕರ್ತರ ನೋವನ್ನು ಹೋಗಲಾಡಿಸಬೇಕು. ಪಕ್ಷದಿಂದ ತೆಗೆದು ಹಾಕಿದ್ರೆ ಗೆದ್ದ ನಂತರ ಮತ್ತೆ ಬಿಜೆಪಿ ಸೇರ್ತೆನೆ. ತೆಗೆದು ಹಾಕಲಿಲ್ಲ ಅಂದ್ರೆ ಪಕ್ಷದಲ್ಲೇ ಇರುತ್ತೇನೆ. ರಾಘವೇಂದ್ರ ಸೋಲಿನ ನಂತರ ಬಿಎಸ್​​ ವಿಜಯೇಂದ್ರ‌ ರಾಜ್ಯಾಧ್ಯಕ್ಷ ಕಳೆದುಕೊಳುತ್ತಾನೆ ಎಂದು ಕಿಡಿಕಾರಿದ್ದಾರೆ.