ಭದ್ರಾವತಿಯಲ್ಲಿ ಈಶ್ವರಪ್ಪರಿಗೆ ಜೆಡಿಎಸ್‌, ಕಾಂಗ್ರೆಸ್‌ ಬೆಂಬಲ ನೀಡುತ್ತಿರುವುದು ನಿಜವೇ?!

ಭದ್ರಾವತಿಯಲ್ಲಿ ಈಶ್ವರಪ್ಪರಿಗೆ ಜೆಡಿಎಸ್‌, ಕಾಂಗ್ರೆಸ್‌ ಬೆಂಬಲ

ನೀಡುತ್ತಿರುವುದು ನಿಜವೇ?!

ಭದ್ರಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಸೋಮವಾರ ಚುನಾವಣಾ ಪ್ರಚಾರ ನಡೆಸಿದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರುಗಳ ಮನೆಗೆ ಭೇಟಿ ನೀಡಿದರು. ಭದ್ರಾವತಿ ನಗರದ ಪೇಪರ್ ಟೌನ್ 29ನೇ ವಾರ್ಡಿನ ನಗರ ಸಭೆ ಸದಸ್ಯೆ ಜೆಡಿಎಸ್ ಪಕ್ಷದ ಜಯಶೀಲಾ ಸುರೇಶ್ ಮನೆಗೆ ಭೇಟಿ ನೀಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಈಶ್ವರಪ್ಪ ಮನವಿ ಮಾಡಿದರು.

ಈ ಸಂದರ್ಭ ಜೆಡಿಎಸ್ ಪಕ್ಷದ ಮುಖಂಡ ಸುರೇಶ್, ಮಾಜಿ ನಗರ ಸಭೆ ಸದಸ್ಯ ಆರ್.ಮಹೇಶ್, ಕೆ.ಪಿ.ಲತೇಶ್, ಕಾಂಗ್ರೆಸ್ ಪಕ್ಷದ ಮಾಜಿ ನಗರ ಸಭೆ ಸದಸ್ಯ ಸಿ.ವೇಣುಗೋಪಾಲ್ ಉಪಸ್ಥಿತರಿದ್ದರು.

ಹುತ್ತಾ ಕಾಲೋನಿಯಲ್ಲಿ ಜೆ.ಡಿಎಸ್ ಪಕ್ಷದ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಭದ್ರಾವತಿ ಸಂಘ ಪರಿವಾರದ ಮುಖ್ಯಸ್ಥರಾದ ಹುಚ್ಚಪ್ಪರವರ ಮನೆಗೆ ತೆರಳಿ ಬೆಂಬಲ ಕೋರಿದರು‌.

ಈಶ್ವರಪ್ಪರವರ ಮನವಿಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್. ಕಾಂಗ್ರೆಸ್ ಪಕ್ಷದ ಮುಖಂಡರು ಬೆಂಬಲ ನೀಡುವುದಾಗಿ ಭರವಸೆ ನೀಡಿದರು.