ಶೋಯಬ್ @ ಅಂಡಾ ಮೇಲೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು… ಬೀರನಕೆರೆಯಲ್ಲಿ ನಡೆಯಿತು ಘಟನೆ ಆಯುಧದಿಂದ ಹಲ್ಲೆ ಮಾಡಿದ ಅಂಡಾ ಮೇಲೆ ಗುಂಡು ಹಾರಿಸಿದ ಪಿಎಸ್ ಐ ಕುಮಾರ್

ಶೋಯಬ್ @ ಅಂಡಾ ಮೇಲೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು…

ಬೀರನಕೆರೆಯಲ್ಲಿ ನಡೆಯಿತು ಘಟನೆ

ಆಯುಧದಿಂದ ಹಲ್ಲೆ ಮಾಡಿದ ಅಂಡಾ ಮೇಲೆ ಗುಂಡು ಹಾರಿಸಿದ ಪಿಎಸ್ ಐ ಕುಮಾರ್

ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಶೋಯಬ್ @ ಅಂಡನನ್ನು ಬಂಧಿಸಿ ಕರೆತರುವಾಗ ಆರೋಪಿ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಇತ್ತೀಚೆಗಿನ ಲಷ್ಕರ್ ಮೊಹಲ್ಲಾ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಆರೋಪಿ ಶೋಯಬ್ @ ಅಂಡಾ ಇಂದು ಬೆಳಿಗ್ಗೆ ಪೊಲೀಸರ ಕಣ್ಣಿಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬೀರನಕೆರೆ ಗ್ರಾಮದ ಬಳಿ ಕಂಡುಬಂದಿದ್ದ.

ಯಾಸೀನ್ ಖುರೇಷಿ ಕೊಲೆ ಆರೋಪದ ಮೇಲೆ ಬಂಧಮಕ್ಕೊಳಗಾಗಿರುವ ಕುಖ್ಯಾತ ರೌಡಿ ಆದಿಲ್ ಸಹಚರನಾಗಿರುವ ಶೋಯಬ್ @ ಅಂಡಾನ ಮೇಲೆ ಈ ಹಿಂದೆಯೇ 5 ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 307 ಅಪರಾಧ ಎಸಗಿದ ಎರಡು ಪ್ರಕರಣಗಳು ಅಂಡಾ ಮೇಲಿವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹೇಳಿದ್ದಾರೆ.

ಇವತ್ತು ಬೆಳಿಗ್ಗೆ ಶಿವಮೊಗ್ಗ ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್ ಕುಮಾರ್ ಮತ್ತು ಹೆಡ್ ಕಾನ್ಸ್ ಟೆಬಲ್ ಅಣ್ಣಪ್ಪ ಬೀರನಕೆರೆಯಲ್ಲಿ ಅಂಡಾನನ್ನು ಬಂಧಿಸಲು ಪ್ರಯತ್ನಿಸಿದಾಗ ಅಂಡಾ ಪೊಲೀಸರ ಮೇಲೆಯೇ ಆಯುಧದಿಂದ ಹಲ್ಲೆ ಮಾಡಿ ಪರಾರಿ ಮಾಡಲು ಯತ್ನಿಸಿದ.
ಆಗ ಸಬ್ ಇನ್ಸ್ ಪೆಕ್ಟರ್ ಕುಮಾರ್ ಸ್ವಯಂ ರಕ್ಷಣೆಗಾಗಿ ಆರೋಪಿ ಅಂಡಾ ಮೇಲೆ ಗುಂಡು ಹಾರಿಸಿದ್ದಾರೆ.