ಎಮ್ಮೆಹಟ್ಟಿ ಮೃತರ ಮನೆಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ;ಸರ್ಕಾರದಿಂದ 2 ಲಕ್ಷ- ಶಿವಣ್ಣ ಫ್ಯಾಮಿಲಿಯಿಂದ ತಲಾ 1 ಲಕ್ಷ ಪರಿಹಾರ

ಎಮ್ಮೆಹಟ್ಟಿ ಮೃತರ ಮನೆಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ;

ಸರ್ಕಾರದಿಂದ 2 ಲಕ್ಷ- ಶಿವಣ್ಣ ಫ್ಯಾಮಿಲಿಯಿಂದ ತಲಾ 1 ಲಕ್ಷ ಪರಿಹಾರ

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾವೇರಿ ಬಳಿ ಅಪಘಾತದಲ್ಲಿ ಮೃತರಾದ ಎಮ್ಮೆ ಹಟ್ಟಿ ಗ್ರಾಮದ   ಮೃತ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಸರ್ಕಾರದಿಂದ ಎರಡು ಲಕ್ಷ ಘೋಷಣೆ ಆಗಿದೆ ನಾನು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಇನ್ನು ಹೆಚ್ಚಿನ ಸಹಾಯ ಮಾಡಲು ಮನವಿ ಮಾಡುತ್ತೇನೆ ಎಂದರು.

ಜೊತೆಗೆ, ವೈಯಕ್ತಿಕವಾಗಿ ಗೀತಾ ಶಿವರಾಜಕುಮಾರ್ ಮತ್ತು ಶಿವರಾಜ್ ಕುಮಾರ್ ರವರು ಮೃತರಾದ ಪ್ರತಿಯೊಬ್ಬರಿಗೂ ಒಂದು ಲಕ್ಷ ರೂಪಾಯಿಗಳನ್ನು ನೀಡುವ ಭರವಸೆ ನೀಡಿದ್ದಾರೆ.ಆ ಹಣವನ್ನು  ಶೀಘ್ರವಾಗಿ ಮೃತರ ಕುಟುಂಬಗಳಿಗೆ ತಲುಪಿಸುತ್ತೇನೆ ಎಂದು ಭರವಸೆ ನೀಡಿದರು.