ಸಚಿವ ಮಧು ಬಂಗಾರಪ್ಪ ಸಸ್ಪೆಂಡ್ ಮಾಡ್ತಾರಾ?ಲಂಚವನ್ನು ತನ್ನ ಫೋನ್ ಪೇ ಗೇ ಹಾಕಿಸಿಕೊಂಡ ಶಿವಮೊಗ್ಗ ತಹಶೀಲ್ದಾರ್ ಕಚೇರಿಯ ಅಧಿಕಾರಿ ಅಭಿನಂದನ್ ಜುಲಾಕಿ..

ಸಚಿವ ಮಧು ಬಂಗಾರಪ್ಪ ಸಸ್ಪೆಂಡ್ ಮಾಡ್ತಾರಾ?

ಲಂಚವನ್ನು ತನ್ನ ಫೋನ್ ಪೇ ಗೇ ಹಾಕಿಸಿಕೊಂಡ ಶಿವಮೊಗ್ಗ ತಹಶೀಲ್ದಾರ್ ಕಚೇರಿಯ ಅಧಿಕಾರಿ ಅಭಿನಂದನ್ ಜುಲಾಕಿ..

ಶಿವಮೊಗ್ಗದ ತಾಲ್ಲೂಕು ಕಚೇರಿ ಸರ್ವ ರೀತಿಯ ಲಂಚಗಳಿಗೂ ಕುಖ್ಯಾತವಾಗಿದೆ. ಇಲ್ಲಿ ಸಣ್ಣ ಕೆಲಸ ಆಗಬೇಕಾದರೂ ಕಾಸು ಕೊಡಲೇಬೇಕು. ಕಾಸಿಲ್ಲದಿದ್ದರೆ ನಿಮ್ಮ ಕೆಲಸವೋ ಫೈಲುಗಳ ಧೂಳಿನಲ್ಲೇ ಖಾಯಂ ಸಮಾಧಿ ಆಗಿರುತ್ತೆ.

ಶಿವಮೊಗ್ಗ ತಹಶೀಲ್ದಾರ್ ಕಚೇರಿಯಲ್ಲಿ ಎಸ್ ಡಿ ಎ ಆಗಿ ಕಾರ್ಯನಿರ್ವಹಿಸುತ್ತಿರುವ ಅಭಿನಂದನ್ ಜುಲಾಕಿ ಲಂಚದ ಹಣವನ್ನು ನೇರವಾಗಿ ತನ್ನ ಫೋನ್ ಪೇ ನಂಬರಿಗೇ ಹಾಕಿಸಿಕೊಂಡು ಮೊಂಡು ಧೈರ್ಯ ಮೆರೆದಿದ್ದಾನೆ!

ಗಾಡಿಕೊಪ್ಪದ ವಾಸಿ ಎಲ್.ಅಭಿಷೇಕ್ ಗಾಡಿಕೊಪ್ಪ ಗ್ರಾಮದ ಸರ್ವೇ ನಂಬರ್ 13,14,10,11ರ ಮೈಲಾರಪ್ಪ ಮತ್ತು ಯಶವಂತ ಪವಾರ್ ರವರ ಸಂಪೂರ್ಣ ದಾಖಲೆ ಹಾಗೂ ಪಹಣಿ, ಎಂ.ಆರ್ ಮತ್ತು ಮ್ಯುಟೇಷನ್ ಗಳ ದೃಢೀಕರಿಸಿದ ದಾಖಲೆಗಳನ್ನು ಮಾಹಿತಿ ಹಕ್ಕಿನಲ್ಲಿ ಕಳೆದ ಮೇ 13 ರಂದು ಕೇಳಿದ್ದಾರೆ.

ಇದಕ್ಕೆ ಯಾವುದೇ ರೀತಿಯ ಉತ್ತರ ಕಳಿಸದ ಎಸ್ ಡಿ ಎ ಅಭಿನಂದನ್ ಜುಲಾಕಿ, ಕಳಿಸಿರುವ ಬಗ್ಗೆ ಸುಳ್ಳು ಹೇಳುತ್ತಾ ಬಂದರು. ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಿ ಎಂದರು. ಮತ್ತೆ ಮೇ 31 ರಂದು ಅರ್ಜಿ ಸಲ್ಲಿಸಿದ್ದೆ. ತದನಂತರ, ಅಭಿನಂದನ್ ಜುಲಾಕಿ ಒತ್ತಾಯ ಮಾಡಿ ಫೋನ್ ಪೇ ನಂಬರ್ 9972343821 ಮೂಲಕ 1500₹ ಗಳನ್ನು ಫೋನ್ ಪೇ ಮಾಡಿಸಿಕೊಂಡಿದ್ದಾರೆ.

ಈ ಅಧಿಕಾರಿ ಅಭಿನಂದನ್ ಜುಲಾಕಿ ಒತ್ತಾಯಪೂರ್ವಕವಾಗಿ ಲಂಚ ಪಡೆದಿದ್ದು, ಇವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅಭಿಷೇಕ್ ಒತ್ತಾಯಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಮಂತ್ರಿಗಳ ಗಮನಕ್ಕೂ ಈ ವಿಚಾರ ಹೋಗಿದ್ದು ಅಭಿನಂದನ್ ಜುನಾಕಿ ಸಸ್ಪೆಂಡ್ ಆಗುತ್ತಾನಾ? ಕಾದು ನೋಡೋಣ…