ನುಡಿದಂತೆ ನಾಳೆ ಅಪಘಾತದಲ್ಲಿ ಸಾವು ಕಂಡ 13 ಕುಟುಂಬಗಳಿಗೆ ತಲಾ ಲಕ್ಷ ರೂ ಪರಿಹಾರ ವಿತರಿಸಿ ಮಾನವೀಯತೆ ಮೆರೆಯಲಿದ್ದಾರೆ ಶಿವರಾಜ್ ಕುಮಾರ್ ದಂಪತಿಗಳು…*

*ನುಡಿದಂತೆ ನಾಳೆ ಅಪಘಾತದಲ್ಲಿ ಸಾವು ಕಂಡ 13 ಕುಟುಂಬಗಳಿಗೆ ತಲಾ ಲಕ್ಷ ರೂ ಪರಿಹಾರ ವಿತರಿಸಿ ಮಾನವೀಯತೆ ಮೆರೆಯಲಿದ್ದಾರೆ ಶಿವರಾಜ್ ಕುಮಾರ್ ದಂಪತಿಗಳು…*

ಇತ್ತೀಚೆಗೆ ಹಾವೇರಿ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭದ್ರಾವತಿ ತಾಲ್ಲೂಕಿನ ಎಮ್ಮೆಹಟ್ಟಿ ಗ್ರಾಮದ ಒಂದೇ ಕುಟುಂಬದ 13 ಜನ ಸಾವು ಕಂಡಿದ್ದು, ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರೂ., ಪರಿಹಾರ ಘೋಷಿಸಿದ್ದ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ದಂಪತಿಗಳು ವೈಯಕ್ತಿಕವಾಗಿ ಭೇಟಿ ನೀಡಿ ಘೋಷಿಸಿದ್ದ ಪರಿಹಾರ ಹಸ್ತಾಂತರಿಸಲಿದ್ದಾರೆ.

ಜುಲೈ 8 ರ ಬೆಳಿಗ್ಗೆ 11.30 ಕ್ಕೆ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ದಂಪತಿಗಳು ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ವೈಯಕ್ತಿಕ ಪರಿಹಾರ ಧನ ಹಸ್ತಾಂತರಿಸಲಿದ್ದಾರೆ.

ಕಳೆದ ಜೂನ್ 29 ರಂದು ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದ ಸಚಿವರಾದ ಮಧು ಬಂಗಾರಪ್ಪರವರು, ಶಿವರಾಜ್ ಕುಮಾರ್ ದಂಪತಿಗಳು ಮೃತರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ.,ಗಳ ಪರಿಹಾರ ನೀಡುವರೆಂದು ಭರವಸೆ ನೀಡಿದ್ದರು.
ಅದರಂತೆ ಈಗ ಶಿವರಾಜ್ ಕುಮಾರ್ ದಂಪತಿಗಳು ಸ್ವತಃ ಎಮ್ಮೆಹಟ್ಟಿ ಗ್ರಾಮಕ್ಕೆ ಆಗಮಿಸಿ ಪರಿಹಾರದ ಹಣ ವಿತರಿಸಲಿದ್ದಾರೆ.