ನೂತನ ಎಂ ಎಲ್ ಸಿ ಬಲ್ಕೀಷ್ ಬಾನು ಕಾರ್ಯಾಲಯದ ಉದ್ಘಾಟನೆ ಜುಲೈ 11ಕ್ಕೆ*

*ನೂತನ ಎಂ ಎಲ್ ಸಿ ಬಲ್ಕೀಷ್ ಬಾನು ಕಾರ್ಯಾಲಯದ ಉದ್ಘಾಟನೆ ಜುಲೈ 11ಕ್ಕೆ*

ಜುಲೈ 11ರ ಗುರುವಾರದಂದು ಬೆಳಗ್ಗೆ 11:30 ಶಿವಮೊಗ್ಗ ಎ.ಸಿ.ಕಛೇರಿ ಆವರಣದಲ್ಲಿ ನೂತನ ವಿಧಾ‌ನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕೀಷ್ ಬಾನುರವರ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಛೇರಿಯ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪ ಉದ್ಘಾಟಿಸಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕರುಗಳಾದ ಬಿ ಕೆ ಸಂಗಮೇಶ್ವರ್, ಬೇಳೂರು ಗೋಪಾಲಕೃಷ್ಣ, ಪಕ್ಷದ ಜಿಲ್ಲಾಧ್ಯಕ್ಷರು, ಮಾಜಿ ಮಂತ್ರಿಗಳು. ಜಿಲ್ಲೆಯ ಎಲ್ಲಾ ನಿಗಮದ ಅಧ್ಯಕ್ಷರುಗಳು,ಜಿಲ್ಲೆಯ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿರುವರೆಂದು ಶ್ರೀಮತಿ ಬಲ್ಕೀಷ್ ಬಾನು ತಿಳಿಸಿದ್ದಾರೆ.