ಹರ್ ಘರ್ ತಿರಂಗಾ; ಮ್ಯಾರಥಾನ್ ಓಟನಶಾ ಮುಕ್ತ ಭಾರತದ ಪ್ರತಿಜ್ಞೆ

ಹರ್ ಘರ್ ತಿರಂಗಾ; ಮ್ಯಾರಥಾನ್ ಓಟ

ನಶಾ ಮುಕ್ತ ಭಾರತದ ಪ್ರತಿಜ್ಞೆ

ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಗರದ ನೆಹರೂ ಕ್ರೀಡಾಂಗಣದಿಂದ ಇಂದು ಮ್ಯಾರಾಥಾನ್ ಓಟ ಹಮ್ಮಿಕೊಳ್ಳಲಾಗಿತ್ತು.

ಈ ಓಟದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ  ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ  ಉಮೇಶ್ ಹೆಚ್., ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳಾದ
ಶ್ರೀಮತಿ ಶಶಿರೇಖಾ, ಆದಿಚುಂಚನಗಿರಿ‌ ಶಾಖಾ ಮಠದ ಮುಖ್ಯಸ್ಥರು, ಸಿಬ್ಬಂದಿಗಳು, ಕ್ರೀಡಾಳುಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ “ನಶಾ ಮುಕ್ತ ಭಾರತ” ದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.