ರಂಗಾಯಣ ಶಿವಮೊಗ್ಗದಿಂದ ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಸೆಪ್ಟೆಂಬರ್ 21,22, ಮತ್ತು 23 ರಂದು ಮೂರು ದಿನಗಳ ‘ನಾಟಕೋತ್ಸವ’ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ರಂಗಾಯಣ ನಿರ್ದೇಶಕ ಪ್ರಸನ್ನ ಡಿ.ಸಾಗರ

ರಂಗಾಯಣ ಶಿವಮೊಗ್ಗದಿಂದ ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಸೆಪ್ಟೆಂಬರ್ 21,22, ಮತ್ತು 23 ರಂದು ಮೂರು ದಿನಗಳ ‘ನಾಟಕೋತ್ಸವ’

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ರಂಗಾಯಣ ನಿರ್ದೇಶಕ ಪ್ರಸನ್ನ ಡಿ.ಸಾಗರ

ಶಿವಮೊಗ್ಗ ರಂಗಾಯಣವು ರಂಗಭೀಷ್ಮ ಬಿ.ವಿ.ಕಾರಂತರ ಜನ್ಮ ದಿನದ ನೆನಪಿನಲ್ಲಿ ಇದೇ ಸೆಪ್ಟೆಂಬರ್ 21.22 ಮತ್ತು 23 ರಂದು ಮೂರು ದಿನಗಳ ನಾಟಕೋತ್ಸವವನ್ನು ಅಶೋಕನಗರದಲ್ಲಿನ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಡಿ ಸಾಗರ ತಿಳಿಸಿದ್ದಾರೆ.

ಸೆ.21ರ ಶನಿವಾರ ಸಂಜೆ
6.30ಕ್ಕೆ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದ್ದು, ರಂಗಸಮಾಜದ ಸದಸ್ಯರು ಮತ್ತು ರಂಗಕರ್ಮಿಗಳಾದ ಮಹಾಂತೇಶ್ ಗಜೇಂದ್ರಗಡ ಇವರು ಉದ್ಘಾಟಿಸಲಿದ್ದಾರೆ. ನಾಟಕಕಾರರು ಮತ್ತು ರಂಗಸಮಾಜದ ಸದಸ್ಯರಾದ ರಾಜಪ್ಪ ದಳವಾಯಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಡಿ ಸಾಗರ ವಹಿಸಲಿದ್ದಾರೆ. ರಂಗಾಯಣ, ಶಿವಮೊಗ್ಗದ ಆಡಳಿತಾಧಿಕಾರಿಗಳಾದ ಡಾ.ಶೈಲಜಾ ಎ.ಸಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಉದ್ಘಾಟನಾ ಸಮಾರಂಭದ ನಂತರ ಸುಸ್ಥಿರ ಪ್ರತಿಷ್ಠಾನ (ರಿ), ಬೆಂಗಳೂರು ಇವರ ಪ್ರಸ್ತುತಿಯ ಜೋಸೆಫ್ ಜಾನ್ ನಿರ್ದೇಶನದ ‘ಸರಸ ವಿರಸ ಸಮರಸ’ ನಾಟಕವು ಪ್ರದರ್ಶನಗೊಳ್ಳಲಿದೆ.

ಸೆ.22 ರ ಭಾನುವಾರ ಸಂಜೆ 6.30ಕ್ಕೆ ಆಟಮಾಟ (ರಿ) ಸಾಂಸ್ಕೃತಿಕ ಪಥ ಧಾರವಾಡ ಇವರ ಪ್ರಸ್ತುತಿಯ ಮಹಾದೇವ ಹಡಪದ ಇವರ ರಂಗರೂಪ ಮತ್ತು ಪರಿಕಲ್ಪನೆಯ ವಿಶ್ವರಾಜ ರಾಜಗುರು ಅಭಿನಯದ ‘ನಾ ರಾಜಗುರು’ ನಾಟಕ ಪ್ರದರ್ಶನವು ನಡೆಯಲಿದೆ.

ಸೆ. 23 ರ ಸೋಮವಾರ ಸಂಜೆ 6.30ಕ್ಕೆ ಒಡ್ಡೋಲಗ ರಂಗಪರ್ಯಟನ, ಹಿತ್ತಕೆ ಪ್ರಸ್ತುತಿಯ ಗಣಪತಿ ಬಿ ಹಿತ್ಲಕೈ ನಿರ್ದೇಶನದ ವಿವೇಕ ಶಾನಭೋಗ ರಚನೆಯ ‘ಬಹುಮುಖಿ’ ನಾಟಕವು ಪ್ರದರ್ಶನಗೊಳ್ಳಲಿದೆ.

ಈ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ಪ್ರತಿ ನಾಟಕಕ್ಕೆ ರೂ.30/- ರೂಪಾಯಿಗಳ ಪ್ರವೇಶ ಶುಲ್ಕವಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಆರ್ ಸಾಗರ ಇವರು ವಿನಂತಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಂಗ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ, ಆಡಳಿತಾಧಿಕಾರಿ ಡಾ.ಎ.ಸಿ.ಶೈಲಜಾ ಉಪಸ್ಥಿತರಿದ್ದರು.