ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಗುಡುಗಿದ್ದೇನು?ತಿರುಪತಿ ಲಾಡಲ್ಲಿ ಹಂದಿ,ದನದ ಕೊಬ್ಬು; ಕೂಡಲೇ ಸಿಬಿಐ ತನಿಖೆ ಮಾಡಿಮುಸಲ್ಮಾನ್ ಗೂಂಡಾಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡಬೇಡಿ

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಗುಡುಗಿದ್ದೇನು?

ತಿರುಪತಿ ಲಾಡಲ್ಲಿ ಹಂದಿ,ದನದ ಕೊಬ್ಬು;
ಕೂಡಲೇ ಸಿಬಿಐ ತನಿಖೆ ಮಾಡಿ

ಮುಸಲ್ಮಾನ್ ಗೂಂಡಾಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಿ
ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡಬೇಡಿ

ತಿರುಪತಿ ಲಡ್ಡಲ್ಲಿ ಗೋಮಾತೆಯ ಕೊಬ್ಬು ಸಡೆರಿಸಿ ತಯಾರು ಮಾಡ್ತಿದ್ದಾರೆ ಅಂತ ಕೇಳಿ ಆಶ್ಚರ್ಯವೂ ಆತಂಕವೂ ಆಯ್ತು. ಗೋವು, ಹಂದಿ ಕೊಬ್ಬು, ಮೀನಿನ ಎಣ್ಣೆ ಸೇರಿಸಿರುವುದು ದೃಢಪಟ್ಟಿದೆ.
ವೈಎಸ್ ಆರ್ ಪಾರ್ಟಿ ಅಧಿಕಾರಕ್ಕೆ ಬಂದಾಗ ಹಿಂದೂಗಳ ಮತಾಂತರ ವಿಷಯದಲ್ಲಿ ಗಲಾಟೆಯಾಗಿತ್ತು. ಜಗತ್ತಿನ ಹಿಂದೂಗಳ ನಂಬಿಕೆಯ ತಿರುಪತಿ ಲಡ್ಡುವಿನಲ್ಲಿ ಇದೆಲ್ಲ ಸೇರಿಸಿದ ಕ್ರಿಶ್ಚಿಯನ್ನರು ಇಳಿಯಬಾರದಿತ್ತು.

ಭಕ್ತಿ ಹಂಚಲಿಕ್ಕಾಗಿ ತಿರುಪತಿಯಿಂದ ಲಡ್ಡು ತರುತ್ತಿದ್ದರು. ಈ ರೀತಿ ಮಾಡಿದವರು ಕ್ಷಮೆ ಕೇಳಬೇಕಿತ್ತು.ಜಗನ್ ಮೋಹನ್ ರೆಡ್ಡಿ ಕನ್ ವರ್ ಟೆಡ್ ಕ್ರಿಶ್ಚಿಯನ್. ಅವರಿಂದೇನು ನಿರೀಕ್ಷಿಸಲು ಸಾಧ್ಯ? ಈ ಕೃತ್ಯ ಎಸಗಿದವರ ಮೇಲೆ ಸಿಬಿಐ ತನಿಖೆ ನಡೆಯಬೇಕು. ಕೂಡಲೇ ಬಂಧಿಸಬೇಕು. ವಿಷಕೊಟ್ಟಂತಹ ಪ್ಎಕರಣವಿದು. ಚಂದ್ರಬಾಬು ನಾಯ್ಡು ಸರ್ಕಾರ ಕೂಡಲೇ ಪ್ರಕರಣ ಸಿಬಿಐಗೆ ವಹಿಸಬೇಕು.

ಕೋಟಿ ಕೋಟಿ ಹಿಂದೂಭಕ್ತರಿಗೆ ಅನ್ಯಾಯವಾಗಿದೆ. ಕ್ರಿಶ್ಚಿಯನ್ ಮಿಷನರಿಗಳ ಪಾತ್ರ ಏನೆಂಬುದರ ತನಿಖೆ ಕೂಡ ಆಗಬೇಕು. ಈ ದುಷ್ಕೃತ್ಯ ಆಗಿರೋದು ಸತ್ಯ.

ರಾಷ್ಟ್ರದ್ರೋಹಿ ಚಟುವಟಿಕೆಗಳು ಕರ್ನಾಟಕದಲ್ಲಿ ಹೆಚ್ಚಾಗ್ತಿವೆ. ಟಿಪ್ಪು, ಔರಂಗಜೇಬನ ಫೋಟೋ ಹಾಕೋದು, ಪೆಟ್ರೋಲ್ ಬಾಂಬ್ , ತಲವಾರ್, ಪ್ಯಾಲಸ್ಟೈನ್ ಝಿಂದಾಬಾದ್ ಅನ್ನೋದು…ಇಂಥ ದ್ರೋಹಿಗಳ ಬಗ್ಗೆ ಸದೆಬಡಿಯಬೇಕು. ಕಾಂಗ್ರೆಸ್ ನಾಯಕರು ಖಂಡಿಸುತ್ತಿಲ್ಲ, ಕ್ರಮಕೈಗೊಳ್ತಿಲ್ಲ.
ನಾಗಮಂಗಲ ಘಟನೆ, ದಾವಣಗೆರೆ ಘಟನೆ ಖಂಡನೀಯ. ಪೊಲೀಸರ ಮೇಲೆಯೇ ಕಲ್ಲು ತೂರಾಟ ಆಗಿದೆ. ಸಾವಾಗಿದೆ. ಹಿಂದೂ ಸಮಾಜ ಎಷ್ಟು ದಿನ ತಡೆದುಕೊಳ್ಳಬೇಕು?

ಸಿಎಂ ಒಂದು ಕಡೆ ವಾಲದೇ ಹಿಂದೂ ಸಮಾಜದ ರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯರನ್ನು ಜನ ಕಿತ್ತು ಹಾಕೋದು ಖಂಡಿತ.

ವಾಲ್ಮೀಕಿ ಹಗರಣದ ಸಂತ್ರಸ್ತರ ಮನೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಅಭಿನಂದನೆಗಳು…