ಅ.2ರಿಂದ ಕಾಂಗ್ರೆಸ್ ನಿಂದ ಇಡೀ ವರ್ಷ ಗಾಂಧಿ ಭಾರತ; ಶಿವಮೊಗ್ಗದಲ್ಲೂ ನಡೆಯಲಿದೆ ಪಾದಯಾತ್ರೆ; ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ವಿವರಣೆ

ಅ.2ರಿಂದ ಕಾಂಗ್ರೆಸ್ ನಿಂದ ಇಡೀ ವರ್ಷ ಗಾಂಧಿ ಭಾರತ;
ಶಿವಮೊಗ್ಗದಲ್ಲೂ ನಡೆಯಲಿದೆ ಪಾದಯಾತ್ರೆ; ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ವಿವರಣೆ

ಅ.2ರಿಂದ 2025ರ ವರೆಗೆ ಒಂದು ವರ್ಷ ಕಾಲ ಗಾಂಧಿ ಭಾರತ್ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ರಾಷ್ಟ್ರಧ್ವಜ ಹಿಡಿದು ಅ.2 ರಂದು ಪಾದಯಾತ್ರೆ ಮಾಡಲಾಗುತ್ತಿದೆ. ನಗರದ ಶಿವಪ್ಪ ನಾಯಕ ಪ್ರತಿಮೆ ಎದುರಿನಿಂದ ಅಂದು ಬೆಳಿಗ್ಗೆ 9.30 ಕ್ಕೆ ಆರಂಭವಾಗುವ ಪಾದಯಾತ್ರೆ ಮುಖ್ಯ ರಸ್ತೆಗಳಲ್ಲಿ ಸಾಗಿ ಜಿಲ್ಲಾ ಕಾಂಗ್ರೆಸ್ ಭವನ ತಲುಪಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಪ್ರಸನ್ನ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನಿರ್ದೇಶನದ ಮೇರೆಗೆ ಇಡೀ ರಾಜ್ಯದಲ್ಲಿ ವರ್ಷವಿಡೀ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿಸದೇ ಸರ್ವಪಕ್ಷ, ಸರ್ವಜನ ಇದರಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸುತ್ತಿದ್ದೇವೆ ಎಂದರು.
ಇಡೀ ಕಾರ್ಯಕ್ರಮ, ಪಾದಯಾತ್ರೆಯಲ್ಲಿ ಎಲ್ಲಿಯೂ ಕಾಂಗ್ರೆಸ್ ಧ್ವಜ ಬಳಸದೇ ರಾಷ್ಟ್ರಧ್ವಜ ಹಿಡಿಯಲಿದ್ದೇವೆ. ಗಾಂಧಿ ಎಲ್ಲರಿಗೂ ಸೇರಿದವರೆಂಬ ಭಾವ ಮೂಡಬೇಕು ಎಂದ ಅವರು, ಶಿವಮೊಗ್ಗ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲೂ ಈ ಸಂಭ್ರಮ ನಡೆಯಲಿದೆ ಎಂದರು.
ಗಾಂಧಿ ಭಾರತ ಎಂಬ ವಿಶೇಷ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರವೂ ಅತ್ಯಗತ್ಯ ಎಂದು ಎಲ್ಲರನ್ನೂ ಆಹ್ವಾನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಗೋಡು ರತ್ನಾಕರ್, ಚಂದ್ರಭೂಪಾಲ್, ಎಸ್.ಟಿ.ಹಾಲಪ್ಪ, ಕಲೀಂ ಪಾಷ, ಶಿವಕುಮಾರ್, ಜಿ.ಡಿ.ಮಂಜುನಾಥ್, ಯು.ಶಿವಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.