ಶೋಭಾ ಮಳವಳ್ಳಿ ಬರೆದಿದ್ದಾರೆ- ಮಕ್ಕಳನ್ನೇಕೆ ಕೊಲ್ಲುತ್ತಿದೆ ಹೃದಯ?*

*ಶೋಭಾ ಮಳವಳ್ಳಿ ಬರೆದಿದ್ದಾರೆ- ಮಕ್ಕಳನ್ನೇಕೆ ಕೊಲ್ಲುತ್ತಿದೆ ಹೃದಯ?*

#ಘಟನೆ- 1
ಕೇವಲ 16 ನೇ ವಯಸ್ಸಿಗೆ ಹೃದಯಾಘಾತದಿಂದ ಉಸಿರು ಚೆಲ್ಲಿದ್ದಾನೆ ಚಿಕ್ಕನಾಯಕನಹಳ್ಳಿಯ ರಾಹುಲ್. 10 ನೇ ತರಗತಿ ಓದುತ್ತಿದ್ದ ರಾಹುಲ್‌, ನಿನ್ನೆ ಶಾಲೆಗೆ ಹೋಗಿ ಮನೆಗೆ ವಾಪಸ್ ಬಂದಿದ್ದ. ರಾತ್ರಿ 9:30 ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ರಾಹುಲ್ ನನ್ನು ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ.

#ಘಟನೆ ‌-2
ಮೊನ್ನೆ 20ನೇ ತಾರೀಕು, ತೆಲಂಗಾಣದ ಕಮಾರೆಡ್ಡಿ ಜಿಲ್ಲೆಯಲ್ಲಿ 16 ವಯಸ್ಸಿನ ಶ್ರೀನಿಧಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮನೆಯಿಂದ ಆರಾಮಾಗಿ ಬಂದ ಶ್ರೀನಿಧಿ, ಶಾಲಾ ಅಂಗಳದಲ್ಲೇ ಕುಸಿದುಬಿದ್ದವಳು ಏಳಲೇ ಇಲ್ಲ.

#ಘಟನೆ- 3
ತಿಂಗಳ ಹಿಂದೆ, ತೆಲಂಗಾಣದಲ್ಲೇ ಅಲಿಘಡ ಜಿಲ್ಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿ ಮೋಹಿತ್ ಚೌಧರಿ ಎಂಬ ಬಾಲಕ ಸಹ ಸಹ ಶಾಲೆಯಲ್ಲೇ ಹಾರ್ಟ್​ ಅಟ್ಯಾಕ್​ನಿಂದ ಮೃತಪಟ್ಟಿದ್ದ.

#ಘಟನೆ‌- 4
12 ವರ್ಷದ ಮೋಹಿತ್​, ಕ್ರೀಡಾ ಸ್ಪರ್ಧೆಗೆ ಸಿದ್ಧವಾಗುತ್ತಿದ್ದ ವೇಳೆ ಮೈದಾನದಲ್ಲೇ ಕುಸಿದು ಜೀವಬಿಟ್ಟ.
ಅಲಿಘಡ ಜಲ್ಲೆಯ 8 ವರ್ಷದ ದೀಕ್ಷ್​ ಎಂಬ ಬಾಲಕ ಆಟವಾಡುತ್ತಲೇ ಹೃದಯಾಘಾತಕ್ಕೀಡಾದ.

#ಘಟನೆ – 5
ಫೆಬ್ರವರಿ ತಿಂಗಳಲ್ಲೇ 23 ವರ್ಷದ ಯುವತಿಗೆ, ಮದುವೆ ಸಮಾರಂಭದಲ್ಲಿ ಡಾನ್ಸ್​ ಮಾಡುತ್ತಲೇ ಕುಸಿದು ಹೃದಯಾಘಾತಕ್ಕೀಡಾದ ವಿಡಿಯೋ ದೇಶದಾದ್ಯಂತ ವೈರಲ್ ಆಗಿತ್ತು.

ಕಳೆದ 2 ವರ್ಷದ ಅವಧಿಯಲ್ಲಿ ಹೃದಯಸ್ತಂಭನದಿಂದ ಸಾವಿಗೀಡಾಗುವವರ ಸಂಖ್ಯೆ ಶೇ.22ರಷ್ಟು ಹೆಚ್ಚಿದೆಯಂತೆ. ಇವರಾರಿಗೂ ಆರೋಗ್ಯ ಸಮಸ್ಯೆ, ಎದೆನೋವು, ಉಸಿರಾಟದ ತೊಂದರೆ ಇರಲಿಲ್ಲ ಅಂತಿದ್ದಾರೆ ಅಲಿಘಡ ವಿವಿ ಪ್ರೊಫೆಸರ್​​ಗಳು. ಆಡಿ, ಬೆಳೆದು ಬದುಕುಬೇಕಾದ ಮಕ್ಕಳು ಕಣ್ಣೆದುರೇ ಕುಸಿದು ಬಿದ್ದು ಉಸಿರು ಚೆಲ್ಲುತ್ತಿದ್ದಾರೆ. ಕಾರಣ ಹುಡುಕಬೇಕಾದ, ಚಿಕಿತ್ಸೆ ತಿಳಿಸಬೇಕಾದ ವೈದ್ಯಲೋಕ ಮಾತ್ರ ಮೌನವ್ರತದಲ್ಲಿದೆ..😥

– *ಶೋಭಾ ಮಳವಳ್ಳಿ*