ಬಂಡೀಪುರದ ಕಂಟ್ರಿಕ್ಲಬ್ ನಿಂದ ಕಣ್ಮರೆಯಾದ ನಿಶಾಂತ್ ಕುಟುಂಬದ ಮೇಲೆ ಶಿವಮೊಗ್ಗದ ಮಹಿಳಾ ಠಾಣೆಯಲ್ಲಿ ದಾಖಲಾಗಿತ್ತು ಎಫ್ ಐ ಆರ್!* *ಏನಿದು ನಿಶಾಂತ್ ಫ್ಯಾಮಿಲಿಯ ಕಣ್ಮರೆ ಮಿಸ್ಟ್ರಿ?!* *ಶಿವಮೊಗ್ಗದಲ್ಲಿ ದಾಖಲಾಗಿದ್ದ ಕೇಸು ಯಾವುದು? ಕೇಸು ದಾಖಲಿಸಿದ್ದ ರಿಪ್ಪನ್ ಪೇಟೆ ಮಹಿಳೆಯ ದೂರಿನಲ್ಲೇನಿತ್ತು?*
*ಬಂಡೀಪುರದ ಕಂಟ್ರಿಕ್ಲಬ್ ನಿಂದ ಕಣ್ಮರೆಯಾದ ನಿಶಾಂತ್ ಕುಟುಂಬದ ಮೇಲೆ ಶಿವಮೊಗ್ಗದ ಮಹಿಳಾ ಠಾಣೆಯಲ್ಲಿ ದಾಖಲಾಗಿತ್ತು ಎಫ್ ಐ ಆರ್!*
*ಏನಿದು ನಿಶಾಂತ್ ಫ್ಯಾಮಿಲಿಯ ಕಣ್ಮರೆ ಮಿಸ್ಟ್ರಿ?!*
*ಶಿವಮೊಗ್ಗದಲ್ಲಿ ದಾಖಲಾಗಿದ್ದ ಕೇಸು ಯಾವುದು? ಕೇಸು ದಾಖಲಿಸಿದ್ದ ರಿಪ್ಪನ್ ಪೇಟೆ ಮಹಿಳೆಯ ದೂರಿನಲ್ಲೇನಿತ್ತು?*

ಬಂಡೀಪುರದಲ್ಲಿನ ಕಂಟ್ರಿಕ್ಲಬ್ ರೆಸಾರ್ಟ್ ನಿಂದ ಕಣ್ಮರೆಯಾಗಿರುವ ಬೆಂಗಳೂರು ಮೂಲದ ಸಿ.ಜೆ.ನಿಶಾಂತ್ ಮತ್ತು ಆತನ ಪತ್ನಿ ಚಂದನ ಕುಟುಂಬದ ವಿರುದ್ಧ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಳೆದ ಫೆಬ್ರವರಿ 2 ರಂದು 19/25 ರಂತೆ ಎಫ್ ಐ ಆರ್ ಕೂಡ ದಾಖಲಾಗಿತ್ತು!
ಬಂಡೀಪುರದ ಕಂಟ್ರಿಕ್ಲಬ್ ರೆಸಾರ್ಟ್ ನಿಂದ ಸಿ.ಜೆ.ನಿಶಾಂತ್, ಅವರ ಹೆಂಡತಿ ಚಂದನ ಮತ್ತು ಮಗು ಮಾರ್ಚ್ 3 ರ ಸೋಮವಾರ ಮಧ್ಯಾಹ್ನದಿಂದ ನಿಗೂಢವಾಗಿ ಕಾಣೆಯಾಗಿದೆ. ಈ ಕುಟುಂಬ ಮಾ.2 ಭಾನುವಾರ ರಾತ್ರಿ ಕ್ಲಬ್ಬಿಗೆ ಬಂದು, ಸುಳ್ಳು ವಾಸ ವಿಳಾಸ ನೀಡಿ ರೂಮು ಪಡೆದು ವಾಸ್ತವ್ಯ ಹೂಡಿತ್ತು.
ಮಾರನೇ ದಿನ ಸೋಮವಾರ ಮಧ್ಯಾಹ್ನ ಲಗೇಜನ್ನು ಕ್ಲಬ್ಬಿನಲ್ಲೇ ಬಿಟ್ಟು ಕಾರಲ್ಲಿ ಹೊರಡುವಾಗ ಮತ್ತೊಂದು ಕಾರು ಬಂದಿದೆ. ಆ ಕಾರಿನೊಳಗೆ ನಿಶಾಂತ್ ಕುಟುಂಬ ಹೋಗಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಸಿಸಿಟಿವಿ ಫುಟೇಜ್ ಗಳನ್ನು ಅಲ್ಲಿನ ಎಸ್ ಪಿ ಕವಿತಾ ಮತ್ತು ಗುಂಡ್ಲುಪೇಟೆ ಪೊಲೀಸರ ತಂಡ ಪರಿಶೀಲಿಸುತ್ತಿದೆ.
ಅವರಿದ್ದ ರೂಮಿನಲ್ಲಿ ಚಿನ್ನ ಅಡವಿಟ್ಟ ಮುತ್ತೂಟ್ ಫೈನಾನ್ಸಿನ ಚೀಟಿ ದೊರೆತಿದ್ದು, ಇದರ ಜಾಡು ಹಿಡಿದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶಿವಮೊಗ್ಗದ ಮಹಿಳಾ ಠಾಣೆಯಲ್ಲಿ ಈಗ ನಿಗೂಢ ಕಣ್ಮರೆಯಾಗಿರುವ ನಿಶಾಂತ್ ಮತ್ತು ಚಂದನ ಕುಟುಂಬದ ವಿರುದ್ಧ ದಾಖಲಾಗಿದ್ದ ದೂರಿನಲ್ಲಿ ಏನಿದೆ? ಈ ದೂರು ನೀಡಿದ್ದ ರಿಪ್ಪನ್ ಪೇಟೆಯ ಆ ಮಹಿಳೆ ಯಾರು? ಶಿವಮೊಗ್ಗಕ್ಕೂ ಕಣ್ಮರೆಯಾದ ನಿಶಾಂತ್ ಕುಟುಂಬಕ್ಕೂ ಇರುವ ಲಿಂಕೇನು?
ಇಲ್ಲಿದೆ ಸಂಪೂರ್ಣ ಮಾಹಿತಿ!
—————————————
ರಿಪ್ಪನ್ ಪೇಟೆಯ ಮಹಿಳೆಯೋರ್ವರಿಗೆ ಬೆಂಗಳೂರಿನ ದಂಪತಿ ಹಾಗೂ ಹೊಸನಗರದ ಮಹಿಳೆ ವಂಚಿಸಿದ್ದಾರೆಂದು ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
35 ವರ್ಷ ವಯಸ್ಸಿನ ಮಹಿಳೆ ಶ್ವೇತಾ ರಿಪ್ಪನ್ ಪೇಟೆಯಲ್ಲಿ ಟೈಲರಿಂಗ್ ಹಾಗೂ ಫ್ಯಾಷನ್ ಡಿಸೈನಿಂಗ್ ವೃತ್ತಿ ಮಾಡುತ್ತಿದ್ದು, ಮೂವರು ತಮಗೆ ವಂಚಿಸಿದ್ದಾರೆಂದು ದೂರಿನಲ್ಲಿ ವಿವರಿಸಿದ್ದಾರೆ.
ವಿಚ್ಛೇದಿತ ಮಹಿಳೆಯಾಗಿದ್ದು, ಮತ್ತೊಂದು ವಿವಾಹಕ್ಕಾಗಿ ಮ್ಯಾಟ್ರಿಮೋನಿಯಲ್ಲಿ ವಿವರಗಳನ್ನು ಹಾಕಿದ್ದರು.ಆಗ ಬೆಂಗಳೂರಿನ ವಾಸೊಯಾದ ಸಿ.ಜೆ.ನಿಶಾಂತ್ ಪರಿಚಯವಾದರು. 9ವರ್ಷಗಳ ಹಿಂದೆ ಚಂದನ ಎಂಬುವವರಿಗೆ ಮದುವೆಯಾಗಿದ್ದು, ವಿಚ್ಛೇದಿತನಾಗಿದ್ದೇನೆ ಎಂದು ಹೇಳಿ, ದಾಖಲೆಗಳನ್ನು ತೋರಿಸು, ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿರುವ ಬಗ್ಗೆ ಹೇಳಿಕೊಂಡರು. ತಮ್ಮ ಮೆಚ್ಚುಗೆಯನ್ನು ತಿಳಿಸಿ 2022ರ ಡಿಸೆಂಬರ್ 8 ರಂದು ಕಡೂರು ತಾಲ್ಲೂಕಿನ ತರುವನಹಳ್ಳಿ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಸ್ನೇಹಿತರ ಸಮಕ್ಷಮದಲ್ಲಿ ವಿವಾಹವಾದರೆಂದು ಎಫ್ ಐ ಆರ್ ನಲ್ಲಿ ಮಹಿಳೆ ಶ್ವೇತಾ ನೀಡಿರುವ ವಿವರಗಳಿವೆ.
ಚೆನ್ನಾಗಿಯೇ ದಾಂಪತ್ಯ ಜೀವನ ನಡೆಯುತ್ತಿದ್ದಾಗ ಹೊಸ ಬ್ಯುಝಿನೆಸ್ ಆರಂಭಿಸುವುದಾಗಿ ಹೇಳಿ 17 ಲಕ್ಷ ರೂ.,ಗಳನ್ನು ಬ್ಯಾಂಕ್ ಖಾತೆಯ ಮೂಲಕವೇ ನಿಶಾಂತ್ ಪಡೆದುಕೊಂಡ. ಅಲ್ಲದೇ, 12.50 ಲಕ್ಷ ರೂ.,ಗಳನ್ನು ನಗದಾಗಿ ಪಡೆದುಕೊಂಡಿದ್ದಾನೆ.20 ಗ್ರಾಂ ಬಂಗಾರದ ಆಭರಣವನ್ನು ತನ್ನದೇ ಹೆಸರಲ್ಲಿ ಅಡವಿಟ್ಟು ಹಣ ಪಡೆದಿದ್ದಾನೆ ಎಂದು ಶ್ವೇತಾ ದೂರಿನಲ್ಲಿದೆ.
ಮದುವೆಯಾಗಿ ಒಂದೂವರೆ ವರ್ಷಗಳ ನಂತರ ನಿಶಾಂತ್ ತನ್ನ ಮೊದಲ ಹೆಂಡತಿಯಿಂದ ವಿಚ್ಛೇದನ ಪಡೆದಿಲ್ಲ ಎಂಬ ವಿಚಾರ ಗೊತ್ತಾಯಿತು. ಮೊದಲ ಹೆಂಡತಿ ಚಂದನ ಮತ್ತು ಮಗುವಿನೊಂದಿಗೆ ಸಂಸಾರ ನಡೆಸುತ್ತಿದ್ದ. ಆನಂತರ ಕೌಟುಂಬಿಕ ಜಗಳಗಳಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೂ ಆಗಿದೆ ಎಂದು ದೂರಿನಲ್ಲಿದೆ.
ಆನಂತರದಲ್ಲಿ ನಿಶಾಂತ್, ಚಂದನ ಹೊಸನಗರದ ಸೀಮಾ ಸೆರಾವೋ ರವರ ಜೊತೆ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಹಲವೆಡೆ ಮಾನಸಿಕ ಹಿಂಸೆ ನೀಡಿದ್ದಾರೆ. ಸಾಮಾಜಿಕವಾಗಿ ಮಾನ ತೆಗೆದಿದ್ದಾರೆ. ಅವಾಚ್ಯವಾಗಿ ಬೈದಿದ್ದಾರೆ. ನೀಡಿದ ಹಣ ವಾಪಸ್ ಕೇಳಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ. ಹಾಗಾಗಿ, ತಮಗೆ ರಕ್ಷಣೆಯ ಜೊತೆಗೆ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯವೊದಗಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆ ಪೊಲೀಸರು ಫೆ. ರಂದು 19/25 ರಂತೆ ಫೆ.2 ರಂದು ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.