ಬಿ.ವೈ.ರಾಘವೇಂದ್ರ ವಿರುದ್ಧ ಗುಡುಗಿದ ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ* *ಕನ್ನಡಕದ ಬಗ್ಗೆ ಮಾತಾಡಿದವರೆಲ್ಲ ಮಣ್ಣು ಮುಕ್ಕಿದ್ದಾರೆ* *ಜೋಗ ಅಭಿವೃದ್ಧಿ ನನ್ನ ವಿಶೇಷ ಪ್ರಯತ್ನದ ಫಲ* *ಬಸ್ ಸ್ಟ್ಯಾಂಡ್ ರಾಘು ಎಂದೇ ಪದೇ ಪದೇ ಸಂಬೋಧಿಸಿದ ಬೇಳೂರು*
*ಬಿ.ವೈ.ರಾಘವೇಂದ್ರ ವಿರುದ್ಧ ಗುಡುಗಿದ ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ*
*ಕನ್ನಡಕದ ಬಗ್ಗೆ ಮಾತಾಡಿದವರೆಲ್ಲ ಮಣ್ಣು ಮುಕ್ಕಿದ್ದಾರೆ*
*ಜೋಗ ಅಭಿವೃದ್ಧಿ ನನ್ನ ವಿಶೇಷ ಪ್ರಯತ್ನದ ಫಲ*
*ಬಸ್ ಸ್ಟ್ಯಾಂಡ್ ರಾಘು ಎಂದೇ ಪದೇ ಪದೇ ಸಂಬೋಧಿಸಿದ ಬೇಳೂರು*

ಆಪರೇಷನ್ ಸಿಂಧೂರ್ ಸೈನಿಕರಿಗೆ ಅಭಿನಂದನೆಗಳು. ಈ ದೇಶದ ಎಲ್ಲ ಧರ್ಮದವರು ಪಾಕಿಸ್ತಾನ ಉಡೀಸ್ ಮಾಡಬೇಕೆಂಬ ಗುರಿ ಹೊಂದಿದ್ರು. ಅದೊಂದು ನಿರಾಸೆಯಾಗಿದೆ.
ಮಿಸ್ಟರ್ ಬಸ್ ಸ್ಟ್ಯಾಂಡ್ ರಾಘುರವರೇ, ಕನಸು ಕಾಣೋದು ಮುಖ್ಯವಲ್ಲ. ನನಸು ಮಾಡುವಂತೆ ಕೆಲಸವಾಗಬೇಕು. ಕನ್ನಡಕ
ಮೊದಲು 10 ಕೋಟಿ, ಆನಂತರ ನೀವು 5 ಕೋಟಿ ಬಿಡುಗಡೆ ಮಾಡಿದ್ದೀರಿ. ಉಳಿದ ಹಣವೆಲ್ಲ ನನಸು ಮಾಡಿದ್ದು ಗೋಪಾಲಕೃಷ್ಣ ಬೇಳೂರು. ಅಲ್ಲಿ ಕಮಲದ ಹೂವು ಮಾಡೋಕೆ ಹೊರಟಿದ್ದಿರಲ್ಲ, ಅದನ್ನ ಕಿತ್ತು ಬಿಸಾಕಿ ಹೊಸ ಕೆಲಸ 160 ಕೋಟಿ ದು ಆಗಿದೆ. ಜೋಗ ಅಭಿವೃದ್ಧಿಗೆ 90 ಕೋಟಿ ನಾನೇ ಕೊಡಿಸಿದ್ದು. ಸಿಂಗಾಪುರ ಪ್ರವಾಸದ ಮೂಲಕ ಜೋಗ ಅಭಿವೃದ್ಧಿಗೆ ಕಳೆ ಕಟ್ಟಲಾಗುವುದು.
ನಿಮ್ಮ ಸಿಗಂದೂರು ಸೇತುವೆ ಬಿಂಬಿಸಿಕೊಂಡಿದ್ದೀರಿ, ನಾವು ನಮ್ಮ ಕೆಲಸ ಬಿಂಬಿಸಿಕೊಳ್ಳೋದು ಬೇಡವೇ ಬಸ್ ಸ್ಟ್ಯಾಂಡ್ ರಾಘುರವರೇ…
ಜೋಗ ಡ್ಯಾಂ ಕೆಳಗೆ ಕೆ ಆರ್ ಎಸ್ ಕನಸು ಕಂಡಿದ್ದು ನಾನು. ಕನ್ನಡಕದ ಬಗ್ಗೆ ಮಾತಾಡಿದವರೆಲ್ಲ ಮಣ್ಣು ಮುಕ್ಕಿದ್ದಾರೆ. ಕನ್ನಡಕ, ಬಟ್ಟೆ ಹಾಕುವುದೆಲ್ಲ ನನ್ನ ಹಕ್ಕು.
ಶರಾವತಿ ಮುಳುಗಡೆಯಿಂದ ರೈತರು ವಿಷ ಕುಡಿಯೋ ಪರಿಸ್ಥಿತಿ ಬಗ್ಗೆ ಪಾರ್ಲಿಮೆಂಟಲ್ಲಿ ಮಾತಾಡಿದ್ರೆ ಮುಗೀತಾ? ಹಿಂದುಳಿದ ವರ್ಗದವರೇ ಇರೋ ಜನ ಶರಾವತಿ ಮುಳುಗಡೆಯವರು. ಹಾಗಾಗಿ, ರಾಘವೇಂದ್ರರಿಗೆ ಆಸಕ್ತಿ ಇಲ್ಲ. ನಮ್ಮ ಸರ್ಕಾರ ಅವರನ್ನು ಉಳಿಸಿಕೊಳ್ಳೋ ಪ್ರಯತ್ನ ಮಾಡುತ್ತಿದೆ. ರೈತರಿಗೆ ದ್ರೋಹ ಮಾಡುವ ಕೆಲಸ ರಾಘವೇಂದ್ರ, ಹಾಲಪ್ಪ, ಆರಗ ಮಾಡಿದ್ದಾರೆ. ಸಚಿವ ಮಧು ಬಂಗಾರಪ್ಪರನ್ನು ಅಭಿನಂದಿಸ್ತೇನೆ. ಮುಳುಗಡೆ ರೈತರ ಪರ ಕೆಲಸ ಮಾಡುತ್ತಿರೋ ಕ್ರೆಡಿಟ್ ರಾಜ್ಯ ಸರ್ಕಾರಕ್ಕೆ, ಮಧು ಬಂಗಾರಪ್ಪರಿಗೆ, ಬೇಳೂರಿಗೆ ಸಿಗಬೇಕು. ಏಳು ವರ್ಷ ಮಾತಾಡದ ಸಂಸದರು ನನಗೆ ಪಾಠ ಹೇಳುವ ಅವಶ್ಯಕತೆ ಇಲ್ಲ.
ಡ್ಯೂಪ್ಲಿಕೇಟ್ ಸಹಿ ಮಾಡಿ ಯಡಿಯೂರಪ್ಪರಿಗೆ ಜೈಲಿಗೆ ಕಳಿಸಿದ್ದು ಅಪ್ಪ ಮಕ್ಕಳು.ಮುಸ್ಲಿಂ, ಕ್ರಿಶ್ಚಿಯನ್ನರು ಏನೇ ಮಾಡಿದ್ರೂ ಬಿಜೆಪಿಯವರಿಗೆ ದೇಶ ದ್ರೋಹಿಗಳೇ.
ಕಾಲೇಜಿನ ಜಾಗ ಫಾರೆಸ್ಟ್ ಆಗಿದ್ದು, ಡೀ ನೋಟಿಫೈ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಸಾಯಿ ಗಾರ್ಮೆಂಟ್ಸ್ ವಿಷಯದಲ್ಲೂ ಅಪ್ಪ ಮಕ್ಕಳು ಸೂಟ್ ಕೇಸ್ ತಗೊಂಡಿದ್ದಾರೆ. ರಾಜ್ಯ ಸರ್ಕಾರ ಗಂಭೀರ ಕ್ರಮಕ್ಕೆ ಮುಂದಾಗಬೇಕು. ಎಲ್ಲ ಸೂಟ್ ಕೇಸ್ ಹೊಡ್ದಿದ್ದಾರೆ ಈ ವಿಷಯದಲ್ಲಿ.
ತಿರಂಗ ಯಾತ್ರೆ- ಯುದ್ಧ ಎಲ್ಲಿ ಮಾಡಿದ್ದೀರಿ? ಸೈನಿಕರಿಗೆ ಯಾರೇ ಅವಮಾನ ಮಾಡಿದರೂ ಖಂಡನೀಯ…
ಬಿಜೆಪಿಯವರು ನಿಮ್ಮ ಮಗನನ್ನೇ ಮುಗಿಸಲು ಹೊರಟಿದ್ದಾರೆ. ಯಡಿಯೂರಪ್ಪ ಕಾಂಗ್ರೆಸ್ಸನ್ನು ಮುಗಿಸುವ ಮಾತನ್ನು ಈ ವಯಸ್ಸಲ್ಲಿ ಆಡಿದ್ದಾರೆ. ನಮ್ಮ ಪಕ್ಷ ಮುಗಿಸಲು ನಿಮ್ಮಿಂದ ಸಾಧ್ಯವೇ ಇಲ್ಲ. ಗ್ಯಾರಂಟಿಗಳ ಬಗ್ಗೆ ಅಪಹಾಸ್ಯ ಮಾಡಿದ್ರಿ…ಈಗ ಕಾಂಗ್ರೆಸ್ ಸರ್ಕಾರ ಎರಡನೇ ವರ್ಷಕ್ಕೆ ಕಾಲಿಡುತ್ತಿದೆ.
ಶಾಹಿ ಗಾರ್ಮೆಂಟ್ಸ್ ವಿರುದ್ಧ ಯಾವ ಕಾರಣಕ್ಕೂ ಹೋರಾಟ ನಿಲ್ಲಿಸೋಲ್ಲ. ಆರ್ ಎಂ ಮಂಜುನಾಥ ಗೌಡರ ವಿರುದ್ಧ ಪಿತೂರಿ ನಡೆದಿದೆ. ಬಿಜೆಪಿ ಪಿತೂರಿ ಇದು.
ಮೂರು ತಿಂಗಳದ್ದು ಒಟ್ಟಿಗೇ ಗೃಹಲಕ್ಷ್ಮೀ ಹಣ ಠಕ್ ಅಂತ ಅಕೌಂಟಿಗೆ ಬರುತ್ತೆ.