ಮಾಜಿ ಸಂಸದ, ಮಾಜಿ ಶಾಸಕ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ ಬಿಜೆಪಿಯ 18 ಶಾಸಕರ ಅಮಾನತು ಆದೇಶ ವಾಪಸ್- ಅತ್ಯಂತ ದೊಡ್ಡ ಸಂವಿಧಾನ ವಿರೋಧಿ ಕೃತ್ಯ ಸಿಎಂ, ಡಿಸಿಎಂ, ಸಭಾಧ್ಯಕ್ಷರು ಅಮಾನತು ಆದೇಶ ವಾಪಸ್ ಪಡೆದು ಎಡವಿದ್ದಾರೆ ಇವರು ಸುಪ್ರೀಂ ಅಲ್ಲ. ಸದನದ ಭಾಗವಷ್ಟೇ
ಮಾಜಿ ಸಂಸದ, ಮಾಜಿ ಶಾಸಕ ಆಯನೂರು ಮಂಜುನಾಥ್ ಪತ್ರಿಕಾಗೋಷ್ಠಿ
ಬಿಜೆಪಿಯ 18 ಶಾಸಕರ ಅಮಾನತು ಆದೇಶ ವಾಪಸ್- ಅತ್ಯಂತ ದೊಡ್ಡ ಸಂವಿಧಾನ ವಿರೋಧಿ ಕೃತ್ಯ
ಸಿಎಂ, ಡಿಸಿಎಂ, ಸಭಾಧ್ಯಕ್ಷರು ಅಮಾನತು ಆದೇಶ ವಾಪಸ್ ಪಡೆದು ಎಡವಿದ್ದಾರೆ
ಇವರು ಸುಪ್ರೀಂ ಅಲ್ಲ. ಸದನದ ಭಾಗವಷ್ಟೇ
ಮಾಜಿ ಸಂಸದ, ಮಾಜಿ ಶಾಸಕನಾಗಿ ನಿಮ್ಮ ಮುಂದೆ ಬಂದಿದೀನಿ. ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿ ಈಗ ಆ ಅಮಾನತು ಆದೇಶವನ್ನು ವಾಪಸ್ ಪಡೆದಿರುವುದು ಅತ್ಯಂತ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಸಂವಿಧಾನ ಹಾಗೂ ಕಾನೂನು ವಿರೋಧಿ ಕ್ರಮ.
ಸದನದಲ್ಲಿ ಆದ ಅಮಾನತು ಸದನದಲ್ಲೇ ವಾಪಸ್ ತೆಗೆದುಕೊಳ್ಳಬೇಕು. ಸಿಎಂ, ಡಿಸಿಎಂ, ಸಭಾಧ್ಯಕ್ಷರು ಅಮಾನತು ಆದೇಶ ವಾಪಸ್ ಪಡೆದು ಎಡವಿದ್ದಾರೆ. ಇವರು ಸುಪ್ರೀಂ ಅಲ್ಲ. ಸದನದ ಭಾಗವಷ್ಟೇ. ಸದನ ಮೀರಿ ವರ್ತಿಸುವ ಹಾಗಿಲ್ಲ. ವಿರೋಧ ಪಕ್ಷದ ನಾಯಕ ಅಶೋಕ್ ಒತ್ತಡ ಹೇರಿ ಅಮಾನತು ವಾಪಸ್ ಪಡೆದಿದ್ದಾರೆ.
ಸದನಕ್ಕೆ ಮಾಡಿದ ಅತ್ಯಂತ ದೊಡ್ಡ ಅವಮಾನ. ದೊಡ್ಡವರೆಲ್ಲ ಕುಳಿತು ಮಾಡಿರುವ ತಪ್ಪಿದು. ತಪ್ಪು ತಪ್ಪೇ. ಯಾಕಿಷ್ಟು ತುರ್ತು ನಿರ್ಧಾರ? ಸದನ ನಡೆಯುತ್ತಿತ್ತಾ? ತುಟ್ಟಿಭತ್ಯೆಗೆ ತೊಂದರೆ ಆಗಿದ್ದು ಬಿಟ್ಟರೆ ಮತ್ತೇನೂ ಇರಲಿಲ್ಲ.
ಸಂಸದೀಯ ನಡವಳಿಕೆಗೆ ಇದೊಂದು ಕಪ್ಪುಚುಕ್ಕೆ ಆಗುತ್ತೆ. ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗಿದೆ. ಘಟನೋತ್ತರ ಅನುಮತಿ ವ್ಯಾಪ್ತಿಗೆ ಇದು ಬರೋಲ್ಲ. ಆರ್ಡಿನೆನ್ಸ್ ತರುವ ವಿಷಯವೇ ಅಲ್ಲ.
ನಿನ್ನೆಯ ಆದೇಶ ಜಾರಿಗೆ ಬರಬಾರದು. ಬಂದರೆ ಸಂವಿಧಾನಕ್ಕೆ ದೊಡ್ಡ ಅಪಚಾರ. ಸಂವಿಧಾನಿಕ ಹುದ್ದೆಯಲ್ಲಿರುವವರು ಎಡವಬಾರದು. ಒತ್ತಡಕ್ಕೆ ಮಣಿಯಬಾರದು.
ಸಂವಿಧಾನಕ್ಕೆ ಚ್ಯುತಿಬಾರದಂತೆ ಒಬ್ಬ ಶಾಸಕ ಕರ್ತವ್ಯ ಮಾಡಲು ಸ್ವಲ್ಪ ಸಡಿಲ ಮಾಡಬಹುದಿತ್ತು. ಸದನದಲ್ಲೇ ಅಮಾನತು ವಾಪಸ್ ಪಡೆಯಬೇಕಿತ್ತು. ಸಂವಿಧಾನ ಮಾಡುವವರೇ ಶಾಸನ ಉಲ್ಲಂಘಿಸುವ ಕೆಲಸ ಮಾಡಬಾರದು. ಅಮಾನತು ರದ್ದು ಮಾಡುವ ಅಧಿಕಾರ ಇಲ್ಲದಿರುವುದರಿಂದ ತೀರ್ಮಾನ ವಾಪಸ್ ಪಡೆಯಬೇಕು. ನಂತರ ನಿಯಮದಂತೆ ವಾಪಸ್ ಪಡೆಯಬೇಕು.
ಅಮಾನತಿಗೊಳಗಾದ ಶಾಸಕರು ಅಮಾನತ್ ವಾಪಸ್ ಪಡೆಯಲಾಗಿದೆ ಎಂಬ ಹಿನ್ನೆಲೆಯಲ್ಲಿ ಎಲ್ಲಿಗೂ ಹೋಗಬಾರದು. ಹೋದರೆ, ಸಂವಿಧಾನ ವಿರೋಧಿ ನಡೆ ಶಾಸಕರದ್ದಾಗಲಿದೆ.
ಸದನದಲ್ಲಿ ನಿಯಮಗಳು ಪಾಲಿಸದಿದ್ದರೆ ಅನಾಗರೀಕತೆ ಆರಂಭವಾಗುತ್ತೆ. ಅಮಾನತು ಆದೇಶ ರದ್ದತಿಯ ಆದೇಶ ವಾಪಸ್ ಪಡೆಯಬೇಕು. ತಪ್ಪೇನಾದರೂ ಆಗಿದ್ದರೆ ಸರಿಪಡಿಸಿಕೊಳ್ಳುವ ಜಾಗ ಅದಲ್ಲ. ಸದನದ ಕಾರ್ಯದರ್ಶಿ ಕೂಡ ಇದು ಸರಿಯಲ್ಲ…ಹೊರಗೆ ನಿರ್ಧರಿಸಿ ವಾಪಸ್ ಪಡೆಯಲು ಬರಲ್ಲ ಎಂದಿರುವುದು ಪತ್ರಿಕೆಗಳಲ್ಲಿ ನೋಡಿದ್ದೇನೆ.
ನಾನು ಕಾಂಗ್ರೆಸ್ ವಕ್ತಾರನಾಗಿ ಮಾತಾಡುತ್ತಿಲ್ಲ. ಮಾಜಿ ಸಂಸದನಾಗಿ, ಸಾಮಾನ್ಯ ವ್ಯಕ್ತಿಯಾಗಿ ಈ ಪ್ರಶ್ನೆ ಮತ್ತು ಒತ್ತಾಯ ಹೇರುತ್ತಿದ್ದೇನೆ.
ದಂಡಿಗೆ ದಾಳಿಗೆ ಹೆದರಲ್ಲ ಅಂತ ಸ್ಥಳೀಯ ಶಾಸಕರು ಹೇಳಿದ್ದರು.ಸಭಾಧ್ಯಕ್ಷರ ವಿರುದ್ಧ ಮಾತಾಡಿದ್ದರು. ಆನಂತರ ರಾಜ್ಯಪಾಲರ ಕಾಲು ಹಿಡಿದರು.