ಶಾಸಕ ಎಸ್.ಎನ್.ಚನ್ನಬಸಪ್ಪ ಪತ್ರಿಕಾಗೋಷ್ಠಿ; ಅಮಾನತು ವಾಪಸ್- ಸಭಾಧ್ಯಕ್ಷರು, ಸಿಎಂ,ಡಿಸಿಎಂ, ಕಾನೂನು ಸಚಿವರು, ಅಶೋಕ್ ರವರಿಗೆ ಅಭಿನಂದಿಸಿದ ಶಾಸಕರು ಮೇ.28ರಿಂದ ಶಾಸಕರ ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಅಧ್ಯಯನ ಪ್ರವಾಸದಲ್ಲಿ ಭಾಗಿ ಶಿವಮೊಗ್ಗದ ಈದ್ಗಾ ಮೈದಾನ ಈಗ ಲೋಕಮಾನ್ಯ ತಿಲಕರ ಆಟದ ಮೈದಾನ ಎಂದು ನಾನೇ ನಾಮಕರಣ ಮಾಡಿದ್ದೇನೆ .ನ್ಯಾಯಾಲಯದ ಆದೇಶದ ಪ್ರತಿ ಸಿಕ್ಕಿದೆ ಎಂದ ಶಾಸಕ ಚನ್ನಿ
ಶಾಸಕ ಎಸ್.ಎನ್.ಚನ್ನಬಸಪ್ಪ ಪತ್ರಿಕಾಗೋಷ್ಠಿ;
ಅಮಾನತು ವಾಪಸ್- ಸಭಾಧ್ಯಕ್ಷರು, ಸಿಎಂ,ಡಿಸಿಎಂ, ಕಾನೂನು ಸಚಿವರು, ಅಶೋಕ್ ರವರಿಗೆ ಅಭಿನಂದಿಸಿದ ಶಾಸಕರು
ಮೇ.28ರಿಂದ ಶಾಸಕರ ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ಅಧ್ಯಯನ ಪ್ರವಾಸದಲ್ಲಿ ಭಾಗಿ
ಶಿವಮೊಗ್ಗದ ಈದ್ಗಾ ಮೈದಾನ ಈಗ ಲೋಕಮಾನ್ಯ ತಿಲಕರ ಆಟದ ಮೈದಾನ ಎಂದು ನಾನೇ ನಾಮಕರಣ ಮಾಡಿದ್ದೇನೆ .ನ್ಯಾಯಾಲಯದ ಆದೇಶದ ಪ್ರತಿ ಸಿಕ್ಕಿದೆ ಎಂದ ಶಾಸಕ ಚನ್ನಿ
18 ಶಾಸಕರ ಅಮಾನತ್ ವಾಪಸ್ ತಗೊಂಡ ಸಭಾಧ್ಯಕ್ಷರಿಗೆ ಅಭಿನಂದನೆ.
ಮಾ.21 ರ ವಿಧಾನಸಭೆ ಅಧಿವೇಶನದ ಕೊನೆ ದಿನ ನಡೆದ ಒಂದು ಘಟನೆ ಪೀಠಕ್ಕೆ ಅಗೌರವ ಆಗಿದೆ ಎಂದು ಪೀಠಾಧ್ಯಕ್ಷರು 18 ಜನ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದರು. ಅದರ ವಿರುದ್ಧದ ಹೋರಾಟಕ್ಕೆ ಈಗ ಜಯ ಸಿಕ್ಕಿದೆ.
ಅಶೋಕ್ ರವರ ನೇತೃತ್ವದಲ್ಲಿ ಸಭಾಧ್ಯಕ್ಷರನ್ನು ಭೇಟಿ ಮಾಡಿ ತಿಳಿಸಿದ್ದೆವು. ರಾಜ್ಯಪಾಲರಿಗೂ ಭೇಟಿ ಮಾಡಿದ್ವಿ. ಅಮಾನತು ಸರಿಯಾದ ಕ್ರಮ ಅಲ್ಲ ಎಂದು ಸಲಹೆಗಳನ್ನು ಕೊಟ್ಟಿದ್ರು. ಸಲಹೆಗಳನ್ನು ಸ್ವೀಕರಿಸಿ ಸಭಾಧ್ಯಕ್ಷರು ಅಮಾನತು ರದ್ದು ಪಡಿಸಿರುವುದು ಸ್ವಾಗತಾರ್ಹ.
ಹನಿಟ್ರ್ಯಾಪ್ ಪ್ರಕರಣ ಚರ್ಚೆಗೆ ಬಂದು, ಮಾಯವಾಗಿ ಹೋಗಿದೆ. ರಾಜಣ್ಣರಿಗೆ ನ್ಯಾಯ ಸಿಗ್ತೋ ಇಲ್ವೋ ರಹಸ್ಯವಾಗುಳಿದಿದೆ. ಸದನ ಇದನ್ನು ಗಂಭೀರ ತೆಗೆದುಕೊಳ್ಳುವ ಹೋರಾಟ ನಮ್ಮದಾಗಿತ್ತು. ಸದನದ ನಂತರ ಚರ್ಚೆಯೇ ಇಲ್ಲ…ವ್ಯವಸ್ಥೆಗೆ ಧಕ್ಕೆ ಇದು. ಸರ್ಕಾರ ಮಂತ್ರಿಗಳನ್ನು ಉಳಿಸಿಕೊಳ್ಳೋ ಕೆಲಸ ಮಾಡಬೇಕಿತ್ತು. ನಮ್ಮ ಹೋರಾಟ ಮುಂದುವರೆಯಲಿದೆ. ಸಿಎಂ, ಡಿಸಿಎಂ, ಕಾನೂನು ಮಂತ್ರಿಗಳು, ವಿರೋಧಪಕ್ಷದ ನಾಯಕರು ಅಮಾನತು ವಾಪಸ್ ಗೆ ಕ್ರಮ ಕೈಗೊಂಡಿದ್ದಾರೆ. ಆ ನಿರ್ಣಯ ಸಂತೋಷ ತಂದಿದೆ.
ಸರ್ಕಾರ ನಡೆದುಕೊಂಡ ರೀತಿಗೆ ನಮ್ಮ ಹೋರಾಟ.
ಕಮಿಟಿ ಟೂರ್ ಅಸ್ಸಾಂ ಸೇರಿದಂತೆ ಬಹಳ ಕಡೆ ಅಧ್ಯಯನಕ್ಕಾಗಿ ಈಗ ನಾನೂ ಹೋಗುತ್ತಿದ್ದೇನೆ. ಮೇ.28ರಿಂದ ಜೂನ್ 5 ರವರೆಗೆ ಕಮಿಟಿ ಟೂರ್ ಇದೆ.
ಹಿಂದುಳಿದ ವರ್ಗಗಳ ಇಲಾಖೆ, ಅಲ್ಪ ಸಂಖ್ಯಾತರ ಇಲಾಖೆ ಸಮಿತಿಯ 20 ಜನ ಶಾಸಕರ ತಂಡ ಪ್ರವಾಸ ಮಾಡಲಿದ್ದೇವೆ.
ಈದ್ಗಾ ಮೈದಾನ ಈಗ ಲೋಕಮಾನ್ಯ ತಿಲಕರ ಆಟದ ಮೈದಾನ ಎಂದು ನಾನೇ ನಾಮಕರಣ ಮಾಡಿದ್ದೇನೆ .ನ್ಯಾಯಾಲಯದ ಆದೇಶದ ಪ್ರತಿ ಸಿಕ್ಕಿದೆ.
220ಕ್ಕಿಂತ ಹೆಚ್ಚಿನ ಪಾಯಿಂಟ್ ಗಳನ್ನು ಗುರುತಿಸಲಾಗಿದೆ. ಮೇ.30 ರ ಒಳಗೆ ಹೂಳೆತ್ತುವ ಕೆಲಸ ಮುಗಿಯಲಿದೆ. ಪಾಲಿಕೆ ಜೊತೆ ವಿವಿಧ ಇಲಾಖೆಗಳ ಸಹಕಾರದೊಂದಿದೆ ಮಳೆ ನೀರು ಎದುರಿಸುವ ಕೆಲಸ ನಡೆಯಲಿದೆ.