ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ರಿಂದ ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ ಏನಿದೆ ಈ ಬಹಿರಂಗ ಪತ್ರದಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ರಿಂದ
ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ
ಏನಿದೆ ಈ ಬಹಿರಂಗ ಪತ್ರದಲ್ಲಿ?
ಇಲ್ಲಿದೆ ಸಂಪೂರ್ಣ ಮಾಹಿತಿ
ಮಾನ್ಯ ಸಿದ್ದರಾಮಯ್ಯನವರೇ,
ಜಾತಿಗಣತಿ ವಿಷಯವಾಗಿ ನಿಮಗೊಂದು ಬಹಿರಂಗ ಪತ್ರ ಬರೆಯುತ್ತಿದ್ದೇನೆ. ಈ ಹಿಂದೆ ಸುಮಾರು 10 ವರ್ಷಗಳ ಹಿಂದೆ ಸಿದ್ದಪಡಿಸಿದ್ದ ಜಾತಿಗಣತಿ ವರದಿಯನ್ನು ನಿಮ್ಮ ನೇತೃತ್ವದ ಹಿಂದಿನ 2013-2018 ಅವರಿಯ ಸರ್ಕಾರದಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ನಾನು ಆಗ ವಿಧಾನಪರಿಷತ್ನಲ್ಲಿ ಒತ್ತಾಯಿಸಿದ್ದೆ, ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದ ನಾನು ಅಂದಿನ ಸಮಾಜಕಲ್ಯಾಣ ಸಚಿವರಾಗಿದ್ದ ಹೆಚ್.ಆಂಜನೇಯ ಅವರನ್ನು ಒತ್ತಾಯಿಸಿದಾಗ ಅವರು ಒಪ್ಪಿಕೊಂಡು ಜಾತಿಗಣತಿ ವರದಿಯನ್ನು ಮಂಡಿಸುವುದಾಗಿ ಹೇಳಿದರು ಆದರೆ ನಾನು ಮಾನ್ಯ ಮುಖ್ಯಂತ್ರಿಗಳೇ ಮೇಲ್ಮನೆಗೆ ಬಂದು ಸ್ಪಷ್ಟನೆ ನೀಡಬೇಕೆಂದು ಹಟಹಿಡಿದಾಗ ನೀವೇ ಪರಿಷತ್ತಿಗೆ ಬಂದು ವರದಿಯನ್ನು ಮಂಡಿಸುವುದಾಗಿ ಬರವಸೆ ನೀಡಿದ್ದೀರಿ, ಆದರೆ ನಿಮ್ಮ ಆ ಬರವಸೆಯನ್ನು ನೀವು ಈಡೇರಿಸಲೇ ಇಲ್ಲ.
ಹಿಂದುಳಿದ ವರ್ಗಗಳ, ದಲಿತರ ಉದ್ದಾರಕನೆಂದೇ ಹೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿದ್ದ ನೀವು ಆ ವರ್ಗಗಳನ್ನು ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಂಡಿರೇ ವಿನು ಅವರ ಅಭಿವೃದ್ಧಿಗೆ ಅಮೂಲ್ಯವಾದ ಕೊಡುಗೆ ನೀಡಬಹುದಾಗಿದ್ದ ಜಾತಿಗಣತಿಯನ್ನು ನಿಮ್ಮ ಅಧಿಕಾರವಿರುವವರೆಗೂ ಜಾರಿಗೆ ತರದೆ ಹಿಂದುಳಿದ, ದಲಿತರಿಗೆ ಅತ್ಯಂತ ಘೋರ ಅನ್ಯಾಯ ಮಾಡಿದಿರಿ. ನಾನು ಅಂದಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರನ್ನು ದೇಟೆಯಾಗಿ ವಿಚಾರಿಸಿದಾಗ ಜಾತಿಗಣತಿ ವರದಿ ಸಂಪೂರ್ಣ ಸಿದ್ಧವಾಗಿದೆ. ಮುಖ್ಯಮಂತ್ರಿಗಳು ಯಾವಾಗ ಕೇಳುತ್ತಾರೋ ಆಗ ಕೊಡಲು ಆಯೋಗ ಸಿದ್ಧವಾಗಿದೆ ಎಂದು ಹೇಳಿದ್ದರು.
ಆದರೂ ಇಲ್ಲ ಸಲ್ಲದ ಸಬೂಬುಗಳನ್ನು ಹೇಳಿಕೊಂಡು ಸಮಯ ಕಳೆದ ನೀವು ಕೊನೆಗೂ ನಿಮ್ಮ ಹಿಂದಿನ ಅಧಿಕಾರದ ಅವದಿಯಲ್ಲಿ ವರದಿಯನ್ನು ಮಂಡಿಸಲೇ ಇಲ್ಲ. ಆನಂತರ ಬಂದ ಜಯಪ್ರಕಾಶ್ ಹೆಗಡೆಯವರು ಕಾಂತರಾಜು ವರದಿಯ ಮೂಲ ಪ್ರತಿಯೇ ಇಲ್ಲ ಎಂಬ ಅಸಂಬದ್ಧ ವಿಷಯವನ್ನು ಮುಂದಿಟ್ಟು ಮತ್ತೆ ವರದಿ ಮಂಡಿಸುವುದನ್ನು ಮುಂದೂಡಲು ಮತ್ತೊಂದು ಹುಸಿ ಸಬೂಬು ಹೇಳಿದರು.
ನಂತರ ದೊರೆತ ವರದಿಯ ನಕಲು ಪ್ರತಿಯಲ್ಲಿ ಇಲಾಖಾ ಕಾರ್ಯದರ್ಶಿಗಳ ಸಹಿಯೇ ಇಲ್ಲದಿರುವು ಕಂಡುಬಂತು. ಆದರೆ ಇತ್ತೀಚೆಗೆ ಈ ವರದಿಯನ್ನೇ ಸಚಿವ ಸಂಪುಟದಲ್ಲಿ ಚರ್ಚಿಸಿ ವರದಿಯನ್ನು ಜಾರಿಗೊಳಿಸುವುದಾಗಿ ನೀವು ಹೇಳಿದಿರಿ. ಆಗ ನಿಮ್ಮ ಸಚಿವ ಸಂಪುಟದ ಸಹುದ್ಯೋಗಿಗಳಿಂದಲೇ ವರದಿಯ ಬಗ್ಗೆ ಅಸಮದಾನ ಬುಗಿಲೆದ್ದಿತು, ಸಾರ್ವಜನಿಕವಾಗಿಯೂ ಸಾಕಷ್ಟು ಗೊಂದಲ, ವಿರೋಧ ವ್ಯಕ್ತವಾಯಿತು. ಆದರೂ ತಾವು ಆ ವರದಿಯನ್ನೇ ಜಾರಿಗೊಳಿಸುವುದಾಗಿ ಹೇಳುತ್ತಾ ಬಂದಿರಿ.
ಆದರೆ ಇತ್ತೀಚೆಗೆ ನಿಮ್ಮ ಪಕ್ಷದ ಹೈಕಮಾಂಡ್ನವರನ್ನು ತೃಪ್ತಿಪಡಿಸಲು ಹೊಸದಾಗಿ ಜಾತಿಗಣತಿ ಮಾಡುವುದಾಗಿ ತೀರ್ಮಾನ ಕೈಗೊಂಡಿದ್ದೀರಿ. ಸುಮಾರು 150 ಕೋಟಿ ಹಣ ವ್ಯಯಿಸಿ 1.50,000 ಶಿಕ್ಷರು ಅಮೂಲ್ಯ ಸಮಯ ಕೊಟ್ಟು ಸಿದ್ದಪಡಿಸಿದ್ದ ವರದಿಯನ್ನು ಮಂಡಿಸಲು ಹೊರಟಿದ್ದ ನೀವು ಇದ್ದಕ್ಕಿದ್ದ ಹಾಗೆ ಹೊಸದಾಗಿ ಜಾತಿಗಣತಿ ಮಾಡಿಸಲು ಹೊರಟಿರುವುದು ನೀವು ನಿಮ್ಮ ಕೇಂದ್ರ ಹೈಕಮಾಂಡ್ ಮುಂದೆ ಮಂಡಿಯೂರಿರುವುದು ಸ್ಪಷ್ಟವಾಗುತ್ತದೆ. ನಿಮಗೆ ನಿಜವಾಗಿಯೂ
ಹಿಂದುಳಿದ, ದಲಿತ ವರ್ಗಗಳಿಗೆ ನ್ಯಾಯ ಒದಗಿಸಿ ಕೊಡುವ ಮನಸ್ಸಿದ್ದರೆ ಹೈಕಮಾಂಡ್ ಒತ್ತಡವನ್ನು ತಿರಸ್ಕರಿಸಿ ತಕ್ಷಣ ಕಾಂತರಾಜು ವರದಿಯನ್ನು ಜಾರಿಗೊಳಿಸಿ. ಇಲ್ಲದಿದ್ದರೆ ಹಿಂದುಳಿದ ದಲಿತ ಸಮುದಾಯದ ಬಗ್ಗೆ ನಿಮ್ಮ ಮಾತುಗಳು ಕೇವಲ ಅಧಿಕಾರಕ್ಕೋಸ್ಕರ ಮಾತ್ರ ಸೀಮಿತ ಎಂದು ತಿಳಿಯುತ್ತದೆ.
ಈ ವಿಷಯದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಬಲಿ ಕೊಟ್ಟಾದರೂ ಆ ಸಮುದಾಯಗಳಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ, ಶ್ರೀ ದೇವರಾಜು ಅರಸರಂತೆ ನಾನು ಹಿಂದುಳಿದ ದಲಿತ ಸಮುದಾಯದ ನಾಯಕನೆಂದು ಹೇಳಿಕೊಳ್ಳುವ ನೀವು ಆ ಸಮುದಾಯಕ್ಕೆ ನಿಮ್ಮಿಂದ ನ್ಯಾಯ ಕೊಡಿಸಲು ಆಗದಿದ್ದರೆ ನಿಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯಿರಿ, 9 ವರ್ಷಗಳಿಂದ ಜಾತಿಗಣತಿ ವರದಿಯನ್ನು ಮಂಡಿಸಲಾಗದಿದ್ದವರು ಈಗ 90 ದಿನಗಳಲ್ಲಿ ಹೊಸದಾಗಿ ವರದಿ ತಯಾರಿಸುವುದಾಗಿ ಹೇಳುತ್ತಿದ್ದೀರಿ. ಇದು ಸಾದ್ಯವಾಗದ ಕೆಲಸವಾಗಿದ್ದು ಹಿಂದಿನ ಕಾಂತರಾಜು ವರದಿಯನ್ನೇ ಯತಾವತ್ತಾಗಿ ತಕ್ಷಣ ಜಾರಿಗೊಳಿಸಿ ಆದಾಗದಿದ್ದರೆ ಕೇಂದ್ರ ಸರ್ಕಾರ ಈಗಾಗಲೇ ಜಾತಿಗಣತಿಯನ್ನು ನಡೆಸುವುದಾಗಿ ಘೋಷಿಸಿದೆ ಆದ್ದರಿಂದ ಕೇಂದ್ರ ಸರ್ಕಾರ ನಡೆಸುವ ಜಾತಿಗಣತಿಗೆ ನಿಮ್ಮ ಸಂಪೂರ್ಣ ಸಹಕಾರವನ್ನು ನೀಡಿ ಶೋಷಿತ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿ, ಇದು ನಿಮ್ಮಿಂದಾಗದಿದ್ದರೆ ನಿಮಗೆ ನಿಮ್ಮ ಅಧಿಕಾರವೇ ಮುಖ್ಯ, ಪಕ್ಷದ ಹೈಕಮಾಂಡ್ ಆದೇಶ ಪಾಲನೆಯೇ ನಿಮ್ಮ ಉದ್ದೇಶವಾಗಿದ್ದರೆ ನಿಮ್ಮ ಈ ಸ್ವಾರ್ಥ ರಾಜಕಾರಣವನ್ನು ಕರ್ನಾಟಕದ ಜನತೆ ಕ್ಷಮಿಸಲಾರರು.
ಮುಂದಿನ ದಿನಗಳಲ್ಲಿ ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ತಕ್ಕ ಪಾಠ ಕಲಿಸಿಲು ಜನತೆ ಕಾಯುತ್ತಿದ್ದಾರೆ.
ಉಪಸ್ಥಿತಿ- ಕೆ.ಇ.ಕಾಂತೇಶ್, ಎಂ.ಶಂಕರ್, ವಿಶ್ವಾಸ್, ಸುವರ್ಣ ಶಂಕರ್, ಸಂಗೀತಾ ನಾಗರಾಜ್ ಸೇರಿದಂತೆ ಇನ್ನಿತರರು