ಆಧುನಿಕ ಇಂಟರ್ವೆನ್ನನಲ್ ತಂತ್ರಜ್ಞಾನದಿಂದ ನಂಜಪ್ಪ ಲೈಫ್ ಕೇರ್ ನಲ್ಲಿ ಸ್ಪ್ಲೆನಿಕ್ ಆರ್ಟರಿ ಎಂಬೋಲೈಸೇಶನ್ ಯಶಸ್ವಿ ಚಿಕಿತ್ಸೆ*
*ಆಧುನಿಕ ಇಂಟರ್ವೆನ್ನನಲ್ ತಂತ್ರಜ್ಞಾನದಿಂದ ನಂಜಪ್ಪ ಲೈಫ್ ಕೇರ್ ನಲ್ಲಿ ಸ್ಪ್ಲೆನಿಕ್ ಆರ್ಟರಿ ಎಂಬೋಲೈಸೇಶನ್ ಯಶಸ್ವಿ ಚಿಕಿತ್ಸೆ*
ಹಾವೇರಿಯ ಶ್ರೀಮತಿ ಶಾರದಾ 57 ವರ್ಷದ ಮಹಿಳೆ ಮೇ ತಿಂಗಳಂದು ನಂಜಪ್ಪ ಲೈಫ್ ಕೇರ್ ಆಸ್ಪತ್ರೆಗೆ ಆಹಾರ ನುಂಗುವಲ್ಲಿ ತೊಂದರೆ ಎಂದು ಬಂದಾಗ, ಎಂಡೊಸ್ಕೋಪಿ ಮತ್ತು ಬಯಾಪ್ಸಿ ಪರೀಕ್ಷೆಯಿಂದ ಅನ್ನನಾಳದ ಕ್ಯಾನ್ಸರ್ ತಿಳಿದುಬಂತು. ಇದೊಂದು ಚಾಲೆಂಜಿಂಗ್ ಪ್ರಕರಣವಾಗಿದ್ದು, ಇದನ್ನು ಯಶಸ್ವಿಯಾಗಿ ಗೆದ್ದಿದ್ದೇವೆ ಎಂದು ಮೆಡಿಕಲ್ ಆಂಕೋಲಾಜಿಸ್ಟ್ ಡಾ. ಅರವಿಂದನ್ ಹಾಗೂ ಇಂಟರ್ ವೆನ್ಷನಲ್ ರೇಡಿಯಾಲಜಿಸ್ಟ್ ಡಾ.ನಿಶಿತ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ ಸಿಟಿ ಸ್ಕ್ಯಾನಿಂಗ್ ನಲ್ಲಿ ಲೋಕಲ್ಲಿ ಅಡ್ವಾನ್ಸ್ ಸೈಟ್ನಲ್ಲಿದೆ (ಸ್ಟೇಜ್ 3) ಎಂದು ದೃಢಪಡಿಸಿರುತ್ತಾರೆ. ತದ ನಂತರ ಮೆಡಿಕಲ್ ಆಂಕೊಲಾಜಿಸ್ಟ್ (ಕ್ಯಾನ್ಸರ್ ಚಿಕಿತ್ಸಕರು) ಡಾ|| ನಮ್ರತಾ ಉಡುಪರವರು 4 ಸೈಕಲ್ ಕಿಮೊಥೆರಪಿ ಮಾಡಿ, ಕ್ಯಾನ್ಸರ್ ಗೆಡ್ಡೆಯನ್ನು ಕುಗ್ಗಿಸಿ ಶಸ್ತ್ರಚಿಕಿತ್ಸೆಗೆ ಅನುವುಮಾಡಿ ಕೊಟ್ಟರು. ಈ ಶಸ್ತ್ರಚಿಕಿತ್ಸೆ ಅತ್ಯಂತ ಕ್ಲಿಷ್ಟಕರವಾಗಿದ್ದು, ಕ್ಯಾನ್ಸರ್ ಶಸ್ತ್ರಚಿಕಿತ್ಸಕರಾದ ಡಾ||ಗುರುಚನ್ನ, ಡಾ||ಅರವಿಂದನ್ ಹಾಗು ಅರವಳಿಕೆ ತಜ್ಞರಾದ ಡಾ|।ಪ್ರವೀಣ್ ಕುಮಾರ್ ರವರನ್ನು ಒಳಗೊಂಡ ತಂಡ 6 ಗಂಟಿ ಚಿಕಿತ್ಸೆ ನಡೆಸಿ-ಅನ್ನನಾಳಕ್ಕೆ ಅಂಟಿಕೊಂಡಿದ್ದ ಶ್ವಾಸಕೋಶ ಭಾಗವನ್ನುವನ್ನು ತೆಗೆದು ಎದೆಯ ಭಾಗದಲ್ಲಿ ಜೋಡಿಸಲಾಯಿತು.
ಇಂತಹ ಕ್ಲಿಷ್ಟ ಶಸ್ತ್ರಚಿಕಿತ್ಸೆಯಲ್ಲಿ ಆಪರೇಷನ್ ನಂತರದ ದಿನಗಳಲ್ಲಿ ರಕ್ತಸ್ರಾವ ಆಗುವ ಸಾಧ್ಯತೆ ಇರುತ್ತದೆ. ಇದೆ ರೀತಿ ಶ್ರೀಮತಿ ಶಾರದಾ ರವರಿಗೂ ಸಹ ಮನೆಗೆ ಹೋದ ನಂತರ ತೀವ್ರ ಸುಸ್ತು, ಹೊಟ್ಟೆನೋವಿನಿಂದ ನಂಜಪ್ಪ ಲೈಫ್ ಕೇರ್ ಎಮರ್ಜೆನ್ಸಿ ವಾರ್ಡ್ ಗೆ ಬಂದಾಗ. ಹಿಮೋಗ್ಲೋಬಿನ್ 5 ಗ್ರಾಂ ಪರ್ ಡೆಸಿಲೇಟರ್ ಗೆ ಇಳಿದಿದೆ ಎಂದು ತಿಳಿಯುತ್ತದೆ.
ಶೀಘ್ರವೇ ಸಿಟಿ ಸ್ಕ್ಯಾನ್ ಮಾಡಿದಾಗ ಸ್ಪ್ಲೀನ್ ಎನ್ನುವ ಅಂಗಕ್ಕೆ ರಕ್ತ ಸಂಚರಿಸುವ ರಕ್ತನಾಳದಲ್ಲಿ ಸಣ್ಣ ರಂಧ್ರವಿದ್ದು ತೀವು ರಕ್ತಸ್ರಾವವಾಗಿರುವುದು ತಿಳಿದು ಬಂದಿರುತ್ತದೆ.( splenic artery pseudo aneurism / ಸೈನಿಕ್ ಆರ್ಟರಿ ಸೂಡೋ ಅನುರಿಸಮ್). ಸಾಮಾನ್ಯವಾಗಿ ಇಂತ ಸಂದರ್ಭದಲ್ಲಿ ಪುನಃ ಶಸ್ತ್ರಚಿಕಿತ್ಸೆ ಮಾಡುವುದು ಕಷ್ಟವಿದ್ದು, ರೋಗಿಯು ಅದನ್ನು ತಡೆದುಕೊಳ್ಳುವುದೂ ಕಷ್ಟವಾಗಬಹುದು.
ಇಂಟರ್ವೆನ್ಷನಲ್ ರೇಡಿಯಾಲಜಿ ಎಂದರೆ ಶಸ್ತ್ರಚಿಕಿತ್ಸೆ ಇಲ್ಲದೆ, ತೊಡೆಯ ಸಂಧಿಯಲ್ಲಿನ
ರಕ್ತನಾಳದ ಮೂಲಕ ಸಣ್ಣ ಸೂಜಿ ಗಾತ್ರದ ರಂಧ್ರದಿಂದ ರಕ್ತ ಸ್ರಾವವಿರುವ ರಕ್ತನಾಳವನ್ನು ಮುಚ್ಚುವುದು ಆಧುನಿಕ ಮತ್ತು ಕಡಿಮೆ ರಿಸ್ಕ್ ಇರುವ ವಿಧಾನವಾಗಿರುತ್ತದೆ. ನಂಜಪ್ಪ ಲೈಫ್ ಕೇರ್ ನಲ್ಲಿ ಡಾ|| ನಿಶಿತರವರು ಇಂತಹ ಆಧುನಿಕ ಚಿಕಿತ್ಸೆಯಲ್ಲಿ ಪರಿಣಿತರಿದ್ದು, ಯಶಸ್ವಿಯಾಗಿ ಕಾಯ್ಲಿಂಗ್ / ಎಂಬೋಲೈಸ್ ಚಿಕಿತ್ಸೆ ನೀಡಿರುತ್ತಾರೆ. ಚಿಕಿತ್ಸೆಯ ನಂತರ ರಕ್ತಸ್ರಾವು ಸ್ಥಗಿತವಾಗಿ ರಾತ್ರಿಯ ವೇಳೆಗೆ ರೋಗಿಯು ಚೇತರಿಸಿಕೊಂಡು ಹೊಟ್ಟೆ ನೋವು ಶಮನವಾಗಿರುತ್ತದೆ. ರೋಗಿಯು ಯಾವುದೇ ತೊಂದರೆ ಇಲ್ಲದೆ ಗುಣವಾಗಿ ಮರುದಿನವೇ ಚೇತರಿಕೆಯಿಂದ ಮನೆಗೆ ಹೋಗಿರುತ್ತಾರೆ.
ಸಮಗ್ರ ಆರೈಕೆ ಆಸ್ಪತ್ರೆ ಅಂದರೆ ಎಲ್ಲ ಚಿಕಿತ್ಸಾ ವಿಧಾನಗಳೂ ಒಂದೇ ಸೂರಿನಡಿ ಇರುವುದರಿಂದ ಜನರಿಗೆ ಆಗುವ ಉಪಯೋಗವನ್ನು ಇದು ತಿಳಿಸುತ್ತದೆ. ದೊಡ್ಡ ನಗರಗಳಲ್ಲಿ ಮಾತ್ರ ಸಿಗುತ್ತಿದ್ದ. ವಿಧಾನಗಳು, ಕೈಗೆಟುಕುವ ವೆಚ್ಚದಲ್ಲಿ ನಂಜಪ್ಪ ಆಸ್ಪತ್ರೆ ಮತ್ತು ನಂಜಪ್ಪ ಲೈಫ್ ಕೇರ್ ನಲ್ಲಿ ಸಿಗುತ್ತಿರುವುದು ವರದಾನವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ನಂಜಪ್ಪ ಆಸ್ಪತ್ರೆ ಮತ್ತು ನಂಜಪ್ಪ ಲೈಫ್ ಕೇರ್ ಮಧ್ಯ ಕರ್ನಾಟಕದಲ್ಲೇ ಆಧುನಿಕ ಚಿಕಿತ್ಸೆ ಕೊಡುತ್ತಿರುವ ಮೊದಲ ಆಸ್ಪತ್ರೆಯಾಗಿದೆ ಎಂದರು.
ಸಭೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸಕರಾದ ಡಾ.ಗುರುಚನ್ನ,
ಡಾ|| ನಮ್ಮತಾ ಉಡುಪ ವಿಕಿರಣಶಾಸ್ತ್ರಜ್ಞರಾದ ಡಾ ಶರಶ್ಚಂದ್ರ ಹಾಗೂ ಅರವಳಿಕೆ ತಜ್ಞರಾದ ಡಾ|| ಪ್ರವೀಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.