ಶಿವಮೊಗ್ಗ ಮಹಾನಗರ ಪಾಲಿಕೆಗೆ ಎರಡೂ ಕಡೆಗಳಿಂದ ಬೀಗ! ಎರಡೂ ಗೇಟ್ ಗಳಿಗೆ ಬೀಗ ಜಡಿದಿದ್ದು ಯಾರು? ಯಾಕೆ?

ಶಿವಮೊಗ್ಗ ಮಹಾನಗರ ಪಾಲಿಕೆಗೆ ಎರಡೂ ಕಡೆಗಳಿಂದ ಬೀಗ!

ಎರಡೂ ಗೇಟ್ ಗಳಿಗೆ ಬೀಗ ಜಡಿದಿದ್ದು ಯಾರು? ಯಾಕೆ?

ಶಿವಮೊಗ್ಗ ಮಹಾನಗರ ಪಾಲಿಕೆಗೆ ಬಿಜೆಪಿಯಿಂದ ಎರಡೂ ಮಹಾ ಬಾಗಿಲುಗಳಿಗೆ ಬೀಗ ಜಡಿಯಲಾಗಿದೆಯಾ? ಅಥವಾ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆಗೆ ಅನುಕೂಲವಾಗಲೆಂದು ಮಹಾನಗರ ಪಾಲಿಕೆಯ ಎರಡೂ ಗೇಟ್ ಗಳನ್ನು ಬಂದ್ ಮಾಡಲಾಗಿದೆಯಾ?

ಆಸ್ತಿ ತೆರಿಗೆ ಸೇರಿದಂತೆ ಬೇರೆ ಬೇರೆ ಅನಿವಾರ್ಯದ ಕೆಲಸಗಳಿಗೆ ಮಹಾನಗರ ಪಾಲಿಕೆಗೆ ಬಂದ ಸಾರ್ವಜನಿಕರು ಪಾಲಿಕೆ ಅಧಿಕಾರಿಗಳ ಈ ಗೇಟ್ ಮುಚ್ಚಿರೋ ಕ್ರಮ ಆಶ್ಚರ್ಯ ಮೂಡಿಸಿರುವುದಲ್ಲದೇ ಆಕ್ರೋಶಕ್ಕೂ ಕಾರಣವಾಗ್ತಿದೆ.

ಆಯುಕ್ತರಾದ ಮಾಯಣ್ಣ ಗೌಡರು ಕೂಡಲೇ ಅಗತ್ಯ ಕ್ರಮ ಕೈಗೊಂಡು ಮಹಾನಗರ ಪಾಲಿಕೆಯ ಎರಡೂ ಮಹಾ ದ್ವಾರಗಳನ್ನು ಕೂಡಲೇ ತೆರೆಸಬೇಕು. ಈ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.